Asianet Suvarna News Asianet Suvarna News

UP Elections: ಮುಲಾಯಂ ಕಿರಿ ಸೊಸೆ ಬಿಜೆಪಿಗೆ, ಕೇಸರಿ ಪಾಳಯಕ್ಕೆ ಕಂಟಕ?

* ಉತ್ತರ ಪ್ರದೇಶ ಚುನಾವಣಾ ಕಣದಲ್ಲಿ ಕೇಳರಿಯದ ರಾಜಕೀಯ ಬೆಳವಣಿಗೆಗಳು

* ಎಸ್‌ಪಿ ನಾಯಕ ಮುಲಾಯಂ ಕಿರಿ ಸೊಸೆ ಬಿಜೆಪಿಗೆ

* ಅಪರ್ಣಾರನ್ನು ಪಕ್ಷಕ್ಕೆ ಸೇರಿಸಿ ಎಡವಿತಾ ಬಿಜೆಪಿ?

Aparna Yadav Joining BJP May Prove A Biggest Hurdle For BJP During UP Elections pod
Author
Bangalore, First Published Jan 19, 2022, 12:48 PM IST

ಲಕ್ನೋ(ಜ.19): ಯುಪಿ ಅಸೆಂಬ್ಲಿ ಚುನಾವಣೆ 2022 ರ ಮೊದಲು, ಭಾರತೀಯ ಜನತಾ ಪಕ್ಷವು ಸಮಾಜವಾದಿ ಪಕ್ಷಕ್ಕೆ ಬಹುದೊಡ್ಡ ಪೆಟ್ಟು ಕೊಟ್ಟಿದೆ. ಮುಲಾಯಂ ಸಿಂಗ್ ಯಾದವ್ ಅವರ ಕಿರಿ ಸೊಸೆ ಅಪರ್ಣಾ ಯಾದವ್ ಜನವರಿ 19, 2022 ರಂದು ಬುಧವಾರ ಬಿಜೆಪಿಗೆ ಸೇರಿದ್ದಾರೆ. ಬಿಜೆಪಿ ಸೇರಿದ ಬಳಿಕ ಅಪರ್ಣಾ ಯಾದವ್ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ್ದು, ನನ್ನ ಚಿಂತನೆಯಲ್ಲಿ ರಾಷ್ಟ್ರವೇ ಮೊದಲು ಎಂದು ಹೇಳಿದ್ದಾರೆ. ಈಗ ನಾನು ರಾಷ್ಟ್ರವನ್ನು ಆರಾಧಿಸಲು ಹೊರಟಿದ್ದೇನೆ. ನಾನು ಯಾವಾಗಲೂ ಪ್ರಧಾನಿಯಿಂದ ಪ್ರಭಾವಿತಳಾಗಿದ್ದೇನೆ ಎಂದು ಅವರು ಹೇಳಿದರು.

ರೀಟಾ ಬಹುಗುಣ ಅಸಮಾಧಾನವನ್ನು ಬಿಜೆಪಿ ಎದುರಿಸಬೇಕಾಗಬಹುದು

ಅಪರ್ಣಾ ಯಾದವ್ ಅವರು ಎಸ್‌ಪಿಯಿಂದ ಭ್ರಮನಿರಸನಗೊಂಡು ಬಿಜೆಪಿ ಸೇರಲು ಲಕ್ನೋ ಕ್ಯಾಂಟ್‌ ಸೀಟ್‌ ದೊಡ್ಡ ಕಾರಣ ಎನ್ನಲಾಗುತ್ತಿದೆ. ಆದರೆ, ಅಪರ್ಣಾ ಅವರನ್ನು ಬಿಜೆಪಿಗೆ ಸೇರಿಸಿಕೊಂಡ ನಂತರ ಭಾರತೀಯ ಜನತಾ ಪಕ್ಷಕ್ಕೂ ಸಂಕಷ್ಟ ಎದುರಾಗಬಹುದು. ವಾಸ್ತವವಾಗಿ ಸಂಸದೆ ರೀಟಾ ಬಹುಗುಣ ಜೋಶಿ ಅವರು ತಮ್ಮ ಪುತ್ರ ಮಯಾಂಕ್ ಜೋಶಿಯನ್ನು ಲಕ್ನೋ ಕ್ಯಾಂಟ್ ಕ್ಷೇತ್ರದಿಂದ ಕಣಕ್ಕಿಳಿಸಲು ಬಯಸಿದ್ದಾರೆ. ಮಗನಿಗೆ ಟಿಕೆಟ್‌ ನೀಡುವುದಾದರೆ ಸಂಸದೆ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದಾರೆ. ಹೀಗಿರುವಾಗ ಅಪರ್ಣಾ ಯಾದವ್ ಬಿಜೆಪಿ ಸೇರ್ಪಡೆ ಹಾಗೂ ಮಗ ಮಯಾಂಕ್ ಜೋಶಿಗೆ ಕ್ಯಾಂಟ್‌ನಿಂದ ಟಿಕೆಟ್ ಸಿಗದಿರುವ ಸಾಧ್ಯತೆಯಿಂದ ರೀಟಾ ಬಹುಗುಣ ಜೋಶಿಯವರ ಅಸಮಾಧಾನವೂ ಪಕ್ಷಕ್ಕೆ ಬಿಸಿ ತುಪ್ಪವಾಗಬಹುದು.  

ಅಪರ್ಣಾ ಯಾದವ್ ಈಗಾಗಲೇ ಕ್ಯಾಂಟ್‌ನಿಂದ ಸ್ಪರ್ಧಿಸಲು ಯತ್ನಿಸಿದ್ದಾರೆ

ಅಪರ್ಣಾ ಯಾದವ್ ಅವರು 2017 ರಲ್ಲಿ ಲಕ್ನೋ ಕ್ಯಾಂಟ್ ವಿಧಾನಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಟಿಕೆಟ್‌ ಪಡೆದು ಸ್ಪರ್ಧಿಸಿದ್ದರು. ಅವರು ಕೇವಲ 61 ಸಾವಿರ ಮತಗಳನ್ನು ಪಡೆದಿದ್ದರು. 2017 ರ ಚುನಾವಣೆಯಲ್ಲಿ ಬಿಜೆಪಿಯ ರೀಟಾ ಬಹುಗುಣ ಜೋಶಿ ಅವರನ್ನು (ಅಪರ್ಣಾ ಯಾದವ್) 33,796 ಮತಗಳಿಂದ ಸೋಲಿಸಿದ್ದರು ಎಂಬುವುದು ಉಲ್ಲೇಖನೀಯ. ರೀಟಾ 95,402 ಮತಗಳನ್ನು ಪಡೆದರೆ, ಅಪರ್ಣಾ ಕೇವಲ 61,606 ಮತಗಳನ್ನು ಗಳಿಸಿದ್ದರು.

ಕ್ಯಾಂಟ್ ಸೀಟಿನ ಜಾತಿ ಸಮೀಕರಣ ಏನು?

ಕ್ಯಾಂಟ್ ಸೀಟ್ ಬ್ರಾಹ್ಮಣ ಪ್ರಾಬಲ್ಯ ಹೊಂದಿದೆ. ಈ ಕ್ಷೇತ್ರದಲ್ಲಿ ಸುಮಾರು 1 ಲಕ್ಷ ಮತದಾರರು ಬ್ರಾಹ್ಮಣರಾಗಿದ್ದಾರೆ. ಇಲ್ಲಿನ ಸಿಂಧಿ-ಪಂಜಾಬಿ ಮತದಾರರ ಸಂಖ್ಯೆ ಸುಮಾರು 65 ಸಾವಿರ. ಅತ್ತ ಇಲ್ಲಿ ಮುಸ್ಲಿಂ ಜನಸಂಖ್ಯೆಯು ಸುಮಾರು 25 ಸಾವಿರ. ಯಾದವ ಜಾತಿಯ ಮತಗಳು ಸುಮಾರು 20 ಸಾವಿರ ಮತ್ತು ಠಾಕೂರ್ ಜಾತಿಯ ಮತಗಳು ಸುಮಾರು 15 ಸಾವಿರ.

ಲಕ್ನೋ ಕ್ಯಾಂಟ್ ಕ್ಷೇತ್ರ ಬಿಜೆಪಿಯ ಭದ್ರಕೋಟೆ

ಲಕ್ನೋ ಕ್ಯಾಂಟ್ ವಿಧಾನಸಭಾ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿದೆ. ಇಲ್ಲಿ ರೀಟಾ ಬಹುಗುಣ ಜೋಶಿ 2017 ರ ಚುನಾವಣೆಯಲ್ಲಿ ಟಿಕೆಟ್ ಪಡೆದು ಗೆದ್ದಿದ್ದರು. ಇದಾದ ನಂತರ ಉಪಚುನಾವಣೆಯಲ್ಲಿ ಬಿಜೆಪಿಯ ಸುರೇಶ್ ತಿವಾರಿ ಮತ್ತೊಮ್ಮೆ ಇಲ್ಲಿಂದ ಶಾಸಕರಾದರು. ಸುರೇಶ್ ತಿವಾರಿ ಅವರು ಇಲ್ಲಿಂದ ಮೂರು ಬಾರಿ (1996, 2002 ಮತ್ತು 2007) ಬಿಜೆಪಿಯ ಬಾವುಟ ಹಾರಿಸಿದ್ದಾರೆ. 2012ರಲ್ಲಿ ಈ ಕ್ಷೇತ್ರವನ್ನು ರೀಟಾ ಬಹುಗುಣ ಜೋಶಿ ಅವರು ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆದ್ದಿದ್ದರು.

ಕ್ಯಾಂಟ್‌ನಿಂದ ಬಿಜೆಪಿ ಆಕಾಂಕ್ಷಿಗಳ ಪಟ್ಟಿ

ರಾಜಕೀಯ ಸಮೀಕರಣದ ಪ್ರಕಾರ ಬಿಜೆಪಿಗೆ ಅನುಕೂಲಕರ ಎನ್ನಲಾದ ಈ ಸ್ಥಾನಕ್ಕೆ ಅಭ್ಯರ್ಥಿಗಳ ಪಟ್ಟಿಯೂ ದೊಡ್ಡದಿದೆ. ಇಲ್ಲಿ ಸ್ವತಃ ಶಾಸಕ ಸುರೇಶ್ ತಿವಾರಿ ಹೆಸರೇ ಮೊದಲ ಸ್ಥಾನದಲ್ಲಿದೆ. ಇದರ ನಂತರ, ರೀಟಾ ಬಹುಗುಣ ಜೋಶಿ ಅವರ ಪುತ್ರ ಮಯಾಂಕ್ ಜೋಶಿ, ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ, ಸಂಪುಟ ಸಚಿವ ಮಹೇಂದ್ರ ಸಿಂಗ್, ಮೇಯರ್ ಸಂಯುಕ್ತಾ ಭಾಟಿಯಾ ಅವರ ಸೊಸೆ ಕೂಡ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
 

Follow Us:
Download App:
  • android
  • ios