Asianet Suvarna News Asianet Suvarna News

ಭೂ ಹಗರಣ, ಆಂಧ್ರ ಸಿಎಂ ಜಗನ್‌ಗೆ ಸಂಕಷ್ಟ!

ಭೂ ಹಗರಣ: ಆಂಧ್ರ ಸಿಎಂ ಜಗನ್‌ಗೆ ಇ.ಡಿ. ಕೋರ್ಟ್‌ ಸಮನ್ಸ್‌| ಜ.11ರ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ

Andhra CM Jagan Mohan Reddy Summoned By ED Court in Land Allotment case pod
Author
Bangalore, First Published Jan 10, 2021, 9:40 AM IST

ಅಮರಾವತಿ(ಜ.10): ಅಕ್ರಮ ಆಸ್ತಿಗಳ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ ಹಾಗೂ ಇತರ ಅಧಿಕಾರಿಗಳಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ಕೋರ್ಟ್‌ ಸಮನ್ಸ್‌ ಜಾರಿ ಮಾಡಿದ್ದು, ಜ.11ರ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಅರಬಿಂದೋ ಫಾರ್ಮಾ ಹಾಗೂ ಹೆಟೆರೋ ಡ್ರಗ್ಸ್‌ ಸಂಸ್ಥೆಗೆ ಭೂಮಿ ಮಂಜೂರು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್‌ ಜಾರಿ ಮಾಡಲಾಗಿದೆ. ಈ ಮುನ್ನ ಈ ಪ್ರಕರಣದ ಕುರಿತಂತೆ ನಾಂಪಲ್ಲಿ ಸೆಷನ್ಸ್‌ ಕೋರ್ಟ್‌ನಲ್ಲಿ ಆರೋಪಪಟ್ಟಿ ದಾಖಲಾಗಿತ್ತು. ಆದರೆ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ವಿಚಾರಣೆ ನಡೆಸಬೇಕಾದ ಕಾರಣ ಜಾರಿ ನಿರ್ದೇಶನಾಲಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡಲಾಗಿತ್ತು.

'ಜಗನ್‌ ಮೋಹನ್‌ ರೆಡ್ಡಿ ಅವರ ಜೊತೆಗೆ, ಸಂಸದ ವಿಜಯ ಸಾಯಿ ರೆಡ್ಡಿ, ಹೆಟೆರೊ ಡಗ್ಸ್‌ ನಿರ್ದೇಶಕ ಶ್ರೀನಿವಾಸ ರೆಡ್ಡಿ, ಅರಬಿಂದೋ ಫಾರ್ಮಾ ನಿರ್ದೇಶಕ ನಿತ್ಯಾನಂದ ರೆಡ್ಡಿ ಅವರಿಗೂ ಇ.ಡಿ. ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ

Follow Us:
Download App:
  • android
  • ios