ಸನಾತನ ನಿರ್ಮೂಲನೆ ವಿವಾದದ ನಡುವೆಯೇ ಅಮೆರಿಕದ ನಗರದಲ್ಲಿ ಸೆ.3 ಸನಾತನ ಧರ್ಮ ದಿನವಾಗಿ ಆಚರಣೆ
ಸನಾತನ ನಿರ್ಮೂಲನೆ ವಿವಾದದ ನಡುವೆಯೇ ಅಮೆರಿಕದ ಲೂಯಿಸ್ವೆಲ್ಲೆ ನಗರದಲ್ಲಿಸೆ.3ರಂದು ಸನಾತನ ಧರ್ಮದಿನವೆಂದು ಘೋಷಿಸಿದ ಮೇಯರ್.

ನ್ಯೂಯಾರ್ಕ್: ಡಿಎಂಕೆ ನಾಯಕರಾದ ಉದಯನಿಧಿ ಸ್ಟಾಲಿನ್ ಮತ್ತು ಎ.ರಾಜಾ ಅವರ ಸನಾತನ ಧರ್ಮದ ಕುರಿತ ಕೀಳು ಹೇಳಿಕೆಗಳು ದೇಶದಲ್ಲಿ ಭಾರೀ ವಿವಾದ ಸೃಷ್ಟಿಸಿರುವ ಬೆನ್ನಲ್ಲೇ ಅಮೆರಿಕದ ನಗರವೊಂದರಲ್ಲಿ ಸೆ.3 ಅನ್ನು ‘ಸನಾತನ ಧರ್ಮ ದಿನ’ವೆಂದು ಆಚರಿಸುವ ಘೋಷಣೆ ಮಾಡಲಾಗಿದೆ.
ಅಮೆರಿಕದ ಕೆಂಟುಕಿ ರಾಜ್ಯದ ಲೂಯಿಸ್ವೆಲ್ಲೆ ನಗರದ ಮೇಯರ್ ಕ್ರೇಗ್ ಗ್ರೀನ್ಬಗ್ರ್ ಅವರು ಕಾರ್ಯಕ್ರಮವೊಂದರಲ್ಲಿ ಈ ಘೋಷಣೆ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಜಾಕ್ವೆಲಿನ್ ಕೋಲ್ಮನ್ ಹಾಗೂ ಆಧ್ಯಾತ್ಮಿಕ ಗುರುಗಳಾದ ಶ್ರೀ ಶ್ರೀ ರವಿಶಂಕರ್, ಚಿದಾನಂದ್ ಸರಸ್ವತಿ, ಪರಮಾರ್ಥ ನಿಕೇತನ ಅಧ್ಯಕ್ಷರಾದ ಋುಷಿಕೇಶ್ ಮತ್ತು ಭಗವತಿ ಸರಸ್ವತಿ ಸೇರಿ ಹಲವರು ಉಪಸ್ಥಿತರಿದ್ದರು.
ಸನಾತನ ಧರ್ಮ ದ್ವೇಷವೇ ಆ ಪಕ್ಷದ ಪತನಕ್ಕೆ ಕಾರಣವಾಗುತ್ತಾ..? ಅಣ್ಣಾಮಲೈ ಹೇಳ್ತಾರೆ ತ.ಪಾಲಿಟಿಕ್ಸ್ ಬದಲಾದ ಕತೆ..!
ವರದಿಗಳ ಪ್ರಕಾರ, ಕೆಂಟುಕಿಯ ಲೂಯಿಸ್ವಿಲ್ಲೆ ಮೇಯರ್ ಕ್ರೇಗ್ ಗ್ರೀನ್ಬರ್ಗ್ ಮಂಗಳವಾರ ಘೋಷಣೆ ಮಾಡಿದರು. ನಗರದ ಹಿಂದೂ ದೇವಾಲಯದಲ್ಲಿ ನಡೆದ ಮಹಾಕುಂಭ ಅಭಿಷೇಕದ ಸಂದರ್ಭದಲ್ಲಿ ಉಪಮೇಯರ್ ಬಾರ್ಬರಾ ಸೆಕ್ಸ್ಟನ್ ಸ್ಮಿತ್ ಅವರು ಅಧಿಕೃತ ಘೋಷಣೆಯನ್ನು ಓದಿದರು ಎಂದು ವರದಿಯಾಗಿದೆ.
ಆಧ್ಯಾತ್ಮಿಕ ನಾಯಕರಲ್ಲಿ ಒಬ್ಬರಾದ ಪೂಜ್ಯ ಸ್ವಾಮಿ ಚಿದಾನಂದ ಸರಸ್ವತಿ ಅವರು ಎಕ್ಸ್ನಲ್ಲಿ (ಟ್ವಿಟರ್) ಈವೆಂಟ್ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಹಿಂದೂ ದೇವಾಲಯದ ಮರು-ಪ್ರತಿಷ್ಠೆ - ಅಥವಾ ಹಾಕುಂಭ ಅಭಿಷೇಕವನ್ನು ಹೆಚ್ಚು ಶಕ್ತಿಯುತಗೊಳಿಸಲಾಯಿತು ಮತ್ತು 3 ಸೆಪ್ಟೆಂಬರ್ 2023 ರಂದು ಸನಾತನಧರ್ಮ ದಿನವಾಗಿ ಮೇಯರ್ ಮಹತ್ವದ ಘೋಷಣೆ! ಭಾರತೀಯ ಸಂಸ್ಕೃತಿಯ ವೈಭವದ ಕಥೆಯಲ್ಲಿ ಅದ್ಭುತವಾದ ಹೊಸ ಅಧ್ಯಾಯ!" ಎಂದು ಬರೆದುಕೊಂಡಿದ್ದಾರೆ.
ಸೂರ್ಯ-ಚಂದ್ರ, ಬೆಟ್ಟ-ಗುಡ್ಡ ಶಾಶ್ವತವೇ ಹೊರತು ಸನಾತನ ಧರ್ಮವಲ್ಲ: ನಟ ಚೇತನ್
ತಮಿಳುನಾಡು ಮುಖ್ಯಮಂತ್ರಿ ಅವರ ಪುತ್ರ ಉದಯನಿಧಿ ಅವರು ‘ಸನಾತನ ಧರ್ಮ’ವನ್ನು ಡೆಂಗ್ಯೂ ಮತ್ತು ಮಲೇರಿಯಾದಂತಹ ಕಾಯಿಲೆಗಳೊಂದಿಗೆ ಹೋಲಿಸಿದ ನಂತರ ಭಾರೀ ವಿವಾದವು ಭುಗಿಲೆದ್ದಿತು. ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ಅದನ್ನು ರದ್ದುಗೊಳಿಸಬೇಕು. ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕರೋನಾವನ್ನು ವಿರೋಧಿಸಲು ಸಾಧ್ಯವಿಲ್ಲ. ಇದನ್ನು ನಿರ್ಮೂಲನೆ ಮಾಡಬೇಕು, ಸನಾತನವನ್ನು ಕೂಡ ಹಾಗೇ ನಿರ್ಮೂಲನೆ ಮಾಡಬೇಕು. ಸನಾತನವನ್ನು ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಬೇಕು ಎಂದು ಅವರು ಕಳೆದ ವಾರ ಚೆನ್ನೈನಲ್ಲಿ ಹೇಳಿದ್ದರು.
ಇದಾದ ಬಳಿಕ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 153A (ವಿವಿಧ ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295A (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿ "ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವುದಕ್ಕಾಗಿ" ಉದಯನಿಧಿ ಮತ್ತು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.