* ಪ್ರಯಾ​ಗ್‌​ರಾಜ್‌ ಮಠ​ದಲ್ಲಿ ಆತ್ಮಹತ್ಯೆಗೆ ಶರಣು* ಅಖಾಡ ಪರಿಷತ್‌ ಮುಖ್ಯಸ್ಥ ನರೇಂದ್ರ ಗಿರಿ ಆತ್ಮಹತ್ಯೆ*  ಆತ್ಮ​ಹತ್ಯಾ ಪತ್ರ ಪತ್ತೆ, ಶಿಷ್ಯ ಆನಂದ​ಗಿರಿ ವಶ​ಕ್ಕೆ

ಪ್ರಯಾ​ಗ್‌​ರಾ​ಜ್‌(ಸೆ.21): ಅಖಿಲ ಭಾರತ ಅಖಾಡ ಪರಿಷತ್‌ನ ಮುಖ್ಯಸ್ಥ ಮಹಾಂತ ನರೇಂದ್ರ ಗಿರಿ (72) ಪ್ರಯಾ​ಗ್‌​ರಾ​ಜ್‌​ನ ತಮ್ಮ ಮಠ​ದ​ಲ್ಲಿನ ನಿವಾ​ಸ​ದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನರೇಂದ್ರ ಅವರ ಆತ್ಮ​ಹತ್ಯಾ ಪತ್ರ ಲಭಿ​ಸಿದೆ.. ಇದರ ಬೆನ್ನಲ್ಲೇ ಅವರ ಶಿಷ್ಯ ಆನಂದ​ಗಿರಿ ಅವ​ರನ್ನು ಉತ್ತ​ರಾ​ಖಂಡ​ದಲ್ಲಿ ವಶಕ್ಕೆ ತೆಗೆ​ದು​ಕೊ​ಳ್ಳ​ಲಾ​ಗಿ​ದೆ.

ನರೇಂದ್ರ ಗಿರಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯ​ಮಂತ್ರಿ ಯೋಗಿ ಆದಿತ್ಯನಾಥ್‌ ಸೇರಿ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಅಖಿಲ ಭಾರತ ಅಖಾಡ ಪರಿಷತ್‌, ಭಾರತದಲ್ಲೇ ಸಂತರ ಅತಿದೊಡ್ಡ ಸಂಘಟನೆಯಾಗಿದೆ. ಇದು ವಿವಿಧ ಸಂಘಟನೆಗಳ ಒಕ್ಕೂಟವಾಗಿದ್ದು, ನರೇಂದ್ರ ಗಿರಿ ನಿರಂಜನಿ ಅಖಾಡದ ಮುಖ್ಯಸ್ಥರಾಗಿದ್ದರು, ಅದರ ಮೂಲಕ ಅಖಿಲ ಭಾರತ ಅಖಾಡ ಪರಿಷತ್‌ನ ಮುಖ್ಯಸ್ಥರಾಗಿಯೂ ಆಯ್ಕೆಯಾಗಿದ್ದರು.

ಕಳೆದ ಏಪ್ರಿಲ್‌ನಲ್ಲಿ ನರೇಂದ್ರ ಗಿರಿ ಕೋವಿಡ್‌ಗೆ ತುತ್ತಾಗಿದ್ದರು. ಬಳಿಕ ಅವರು ತಮ್ಮ ಕಾರ್ಯಚಟುವಟಿಕೆಯನ್ನು ಬಹುತೇಕ ಆಶ್ರಮಕ್ಕೆ ಸೀಮಿತಗೊಳಿಸಿದ್ದರು.