ನಿವಾರ್ ಆಯ್ತು ಈಗ ತ.ನಾಡಿಗೆ ‘ಬುರೆವಿ’ ಚಂಡಮಾರುತ ಭೀತಿ!
ನಿವಾರ್ ಚಂಡಮಾರುತದ ಬಳಿಕ ತಮಿಳುನಾಡಿಗೆ ಇನ್ನೊಂದು ಚಂಡಮಾರುತದ ಭೀತಿ| ಬಂಗಾಳಕೊಲ್ಲಿಯಲ್ಲಿ ಸೋಮವಾರ ಉಂಟಾಗಿರುವ ವಾಯುಭಾರ ಕುಸಿತ| ನಿವಾರ್ ಆಯ್ತು ಈಗ ತ.ನಾಡಿಗೆ ‘ಬುರೆವಿ’ ಚಂಡಮಾರುತ ಭೀತಿ!
ನವದೆಹಲಿ(ಡಿ.01): ನಿವಾರ್ ಚಂಡಮಾರುತದ ಬಳಿಕ ತಮಿಳುನಾಡಿಗೆ ಇನ್ನೊಂದು ಚಂಡಮಾರುತದ ಭೀತಿ ಎದುರಾಗಿದೆ.
ನಿವಾರ್ ಬೆನ್ನಲ್ಲೇ ಮತ್ತೊಂದು ಚಂಡಮಾರುತ, ಕರ್ನಾಟಕದಲ್ಲಿ ಮಳೆ
ಬಂಗಾಳಕೊಲ್ಲಿಯಲ್ಲಿ ಸೋಮವಾರ ಉಂಟಾಗಿರುವ ವಾಯುಭಾರ ಕುಸಿತ ಇನ್ನಷ್ಟುತೀವ್ರ ಸ್ವರೂಪ ಪಡೆದು ಚಂಡಮಾರುತವಾಗಿ ಬದಲಾಗುವ ಸಾಧ್ಯತೆ ಇದೆ. ಡಿಸೆಂಬರ್ 2ರ ರಾತ್ರಿಯ ವೇಳೆಗೆ ಈ ಚಂಡಮಾರುತ ಶ್ರೀಲಂಕಾವನ್ನು ಹಾದುಹೋಗುವ ನಿರೀಕ್ಷೆ ಇದ್ದು, ಡಿ.3ರ ಮುಂಜಾನೆ ಕನ್ಯಾಕುಮಾರಿ ಕರಾವಳಿ ತೀರವನ್ನು ಪ್ರವೇಶಿಸಲಿದೆ. ಈ ಚಂಡಮಾರುತಕ್ಕೆ ‘ಬುರೆವಿ’ ಎಂಬ ಹೆಸರನ್ನು ನೀಡಲಾಗುತ್ತದೆ.
ತೆಲುಗು ಬಿಗ್ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್..!
ಚಂಡಮಾರುತದ ಪರಿಣಾಮವಾಗಿ ದಕ್ಷಿಣ ತಮಿಳುನಾಡು, ಕೇರಳ, ಪುದುಚೇರಿ, ಕಾರೈಕಲ್, ದಕ್ಷಿಣ ಆಂಧ್ರ ಕರಾವಳಿ ಮತ್ತು ಲಕ್ಷ ದ್ವೀಪದಲ್ಲಿ ಡಿ.1ರಿಂದ ಡಿ.4ರವರೆಗೆ ಭಾರೀ ಮಳೆ ಆಗಲಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಕೆಲವು