ಚಳವಳಿ ಬೆಂಬಲಿಸದ 7 ಗ್ರಾಮಸ್ಥರ ಹತ್ಯೆಗೈದ ಹೋರಾಟಗಾರರು!
ಗ್ರಾಮ ಸಭೆಗಳಿಗೆ ಸ್ವಾಯತ್ತೆ ನೀಡಬೇಕು ಎಂದು ‘ಪಾತಾಳಗಡಿ’ ಚಳುವಳಿ| ವಿರೋಧ ವ್ಯಕ್ತಪಡಿಸಿದ 7 ಗ್ರಾಮಸ್ಥರನ್ನು ಅಪಹರಿಸಿ ಕೊಂದು ಹಾಕಿದ ಹೋರಾಟಗಾರರು| ಮೂವರು ಹೋರಾಟಗಾರರ ಬಂಧನ
ರಾಂಚಿ[ಜ.23]: ರಾಂಚಿ: ಗ್ರಾಮ ಸಭೆಗಳಿಗೆ ಸ್ವಾಯತ್ತೆ ನೀಡಬೇಕು ಎಂದು ಜಾರ್ಖಂಡ್ ಬುಡಕಟ್ಟು ಜನಾಂಗ ನಡೆಸುತ್ತಿರುವ ‘ಪಾತಾಳಗಡಿ’ ಚಳುವಳಿಗೆ ವಿರೋಧ ವ್ಯಕ್ತಪಡಿಸಿದ 7 ಗ್ರಾಮಸ್ಥರನ್ನು, ಚಳುವಳಿಯ ಹೋರಾಟಗಾರರು ಅಪಹರಿಸಿ ಹತ್ಯೆಗೈದ ಘಟನೆ ಪಶ್ಚಿಮ ಸಿಂಘೂಮ್ ಜಿಲ್ಲೆಯ ಬುರುಗುಲಿಕೇರಾ ಎಂಬ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಜಾರ್ಖಂಡ್ನಲ್ಲಿ ಸೋರೆನ್ ಸರ್ಕಾರ: ಪ್ರತಿಪಕ್ಷಗಳ ಬಲ ಪ್ರದರ್ಶನದ ಮಧ್ಯೆ ಅಧಿಕಾರ!
ಚಳವಳಿ ಕುರಿತು ನಡೆದ ಸಭೆ ವೇಳೆ ಎರಡು ಬಣಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ವೇಳೆ ಹೋರಾಟಗಾರರ ಗುಂಪು, ವಿರೋಧ ಮಾಡಿದ 7 ಜನರನ್ನು ಅಪಹರಿಸಿ, ಲಾಠಿಗಳಿಂದ ಬಡಿದು ಹತ್ಯೆ ಮಾಡಿದೆ. ಗ್ರಾಮಸಭೆಗಳಿಗೆ ಸ್ವಾಯತ್ತೆ ನೀಡಬೇಕು ಎಂದು ನಡೆಸುತ್ತಿರುವ ಹೋರಾಟಕ್ಕೆ ಪಾತಾಳಗಡಿ ಎಂದು ಹೆಸರಿಡಲಾಗಿದೆ.
ಮೂವರು ಅರೆಸ್ಟ್
ಸದ್ಯ 7 ಮಂದಿ ಗ್ರಾಮಸ್ಥರಬನ್ನು ಅಪಹರಿಸಿ, ಕೊಲೆಗೈದ ಆರೋಪದಡಿಯಲ್ಲಿ ಮೂವರು ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ. ಮುಂದೆ ಈ ವಿಚಾರ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಕಾದು ನೋಡಬೇಕಷ್ಟೇ