Asianet Suvarna News Asianet Suvarna News

India@75: ಸ್ವಾತಂತ್ರ್ಯ ಸೇನಾ​ನಿ​ಗ​ಳ ಅಡ​ಗು​ತಾ​ಣವಾಗಿದ್ದ ಮಧು​ಗಿರಿ ಕೋಟೆ

ಬಾಗೇ​ಪಲ್ಲಿ, ತುಮ​ಕೂರು ಹಾಗೂ ಕೋಲಾರ ಭಾಗ​ಗಳ ಸಾವಿರಾರು ಮಂದಿ ಸ್ವಾತಂತ್ರ್ಯ ಹೋರಾ​ಟ​ದಲ್ಲಿ ತೊಡ​ಗಿ​ಕೊಂಡಿದ್ದರು. ಬ್ರಿಟಿ​ಷ​ರು ಬಂಧಿ​ಸಲು ಬಂದಾಗ ಸ್ವಾತಂತ್ರ್ಯ ಇವರೆಲ್ಲ ಮಧು​ಗಿರಿ ಕೋಟೆಗೆ ಹೋಗಿ ಅಲ್ಲಿ​ರುವ ಗವಿ​ಗಳು ಹಾಗೂ ಸುರಂಗ​ಗ​ಳಲ್ಲಿ ಅಡ​ಗಿ​ಕೊಂಡು ಮುಂದಿನ ಹೋರಾ​ಟದ ರೂಪು​ರೇ​ಷೆ​ಗ​ಳನ್ನು ತಯಾ​ರು ಮಾಡು​ತ್ತಿ​ದ್ದರು.

Madhugiri Fort Reveals in Independence Spirit hls
Author
Bengaluru, First Published Jun 22, 2022, 5:25 PM IST

ದೇಶ​ವ್ಯಾಪಿ ಹಬ್ಬಿದ್ದ ಸ್ವಾತಂತ್ರ್ಯ ಸಂಗ್ರಾ​ಮದ ಹೋರಾ​ಟದ ಹೆಜ್ಜೆ ಗುರು​ತು​ಗ​ಳು ತುಮ​ಕೂರು ಜಿಲ್ಲೆ ಮಧು​ಗಿರಿಯಲ್ಲೂ ದಾಖ​ಲಾ​ಗಿದೆ. ಗವಿ​ಗಳು, ಸುರಂಗ​ಗಳು ಹೆಚ್ಚಾ​ಗಿ​ರುವ ಮಧು​ಗಿರಿ ಏಕ​ಶಿಲಾ ಬೆಟ್ಟ​ದ​ಲ್ಲಿ​ರುವ ಮಧು​ಗಿರಿ ಕೋಟೆ ಸ್ವಾತಂತ್ರ್ಯ ಸಂಗ್ರಾ​ಮದ ಕಾಲ​ದಲ್ಲಿ ಸ್ವಾತಂತ್ರ್ಯ ಸೇನಾ​ನಿ​ಗಳ ಅಡ​ಗು​ತಾ​ಣ​ವಾ​ಗಿತ್ತು.

ಬಾಗೇ​ಪಲ್ಲಿ, ತುಮ​ಕೂರು ಹಾಗೂ ಕೋಲಾರ ಭಾಗ​ಗಳ ಸಾವಿರಾರು ಮಂದಿ ಸ್ವಾತಂತ್ರ್ಯ ಹೋರಾ​ಟ​ದಲ್ಲಿ ತೊಡ​ಗಿ​ಕೊಂಡಿದ್ದರು. ಬ್ರಿಟಿ​ಷ​ರು ಬಂಧಿ​ಸಲು ಬಂದಾಗ ಸ್ವಾತಂತ್ರ್ಯ ಇವರೆಲ್ಲ ಮಧು​ಗಿರಿ ಕೋಟೆಗೆ ಹೋಗಿ ಅಲ್ಲಿ​ರುವ ಗವಿ​ಗಳು ಹಾಗೂ ಸುರಂಗ​ಗ​ಳಲ್ಲಿ ಅಡ​ಗಿ​ಕೊಂಡು ಮುಂದಿನ ಹೋರಾ​ಟದ ರೂಪು​ರೇ​ಷೆ​ಗ​ಳನ್ನು ತಯಾ​ರು ಮಾಡು​ತ್ತಿ​ದ್ದರು.

ಮಧು​ಗಿರಿ ಏಕ​ಶಿಲಾ ಬೆಟ್ಟಕ್ಕೆ ಹೊಂದಿ​ಕೊಂಡಿ​ರುವ ಈ ಕೋಟೆಯನ್ನು 17ನೇ ಶತ​ಮಾ​ನ​ದಲ್ಲಿ ಹಿರೇ​ಗೌಡ ಎಂಬ ಪಾಳೇ​ಗೌಡ ನಿರ್ಮಿ​ಸಿ​ದ್ದಾನೆ. ಬಳಿಕ ಹೈದ​ರಾಲಿ, ಟಿಪ್ಪು ಸುಲ್ತಾನ್‌ ಹಾಗೂ ಮೈಸೂರು ಅರ​ಸರ ಆಡ​ಳಿ​ತಾ​ವ​ಧಿ​ಯಲ್ಲಿ ಇದು ಪುನ​ರು​ಜ್ಜೀ​ವ​ನ​ಗೊಂಡಿದೆ.

India@75: ಸ್ವಾತಂತ್ರ ಯೋಧರ ನೇಣಿಗೇರಿಸಿದ ಭೀಕರ ರಣಕಟ್ಟೆ

ಬ್ರಿಟಿ​ಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾ​ಮ​ದಲ್ಲಿ ಹೋರಾಟ ರೂಪಿ​ಸಿದ್ದ ಸತ್ಯಾ​ಗ್ರ​ಹಿ​ಗಳು ಈ ಕೋಟೆ​ಯನ್ನು ಅಡ​ಗು​ತಾಣ ಮಾಡಿ​ಕೊ​ಳ್ಳಲು ಮುಖ್ಯ ಕಾರಣ ಬೆಟ್ಟ​ದಲ್ಲಿ ಯಥೇ​ಚ್ಛ​ವಾಗಿ ದೊರೆ​ಯು​ತ್ತಿದ್ದ ಜೇನು ತುಪ್ಪ​ಕ್ಕಾಗಿ. ಬೆಟ್ಟಹಾಗೂ ಬೆಟ್ಟಕ್ಕೆ ಹೊಂದಿ​ಕೊಂಡಂತಿದ್ದ ಕೋಟೆ​ಯಲ್ಲಿ ಯಥೇ​ಚ್ಛ​ವಾಗಿ ಜೇನು ಗೂಡು ಕಟ್ಟಿತ್ತು.

ಹೀಗಾಗಿ ಜೇನು ತುಪ್ಪ ಹೆಚ್ಚಾಗಿ ಸಿಗು​ತ್ತಿ​ದ್ದ​ರಿಂದ ಹಸಿ​ವನ್ನು ನೀಗಿ​ಸಿ​ಕೊಳ್ಳಲು ಸಾಧ್ಯ​ವಾ​ಗಿತ್ತು. ಅಲ್ಲದೇ ಸ್ವಾತಂತ್ರ್ಯ ಸಂಗ್ರಾ​ಮ​ದಲ್ಲಿ ಬ್ರಿಟಿ​ಷರ ವಿರುದ್ಧ ಹೋರಾಟ ರೂಪಿ​ಸಿದ್ದ ಸತ್ಯಾ​ಗ್ರ​ಹಿ​ಗಳು ಟೆಲಿ​ಗ್ರಾಫ್‌ ವೈರ್‌​ಗ​ಳನ್ನು ಕಡಿದು ಹಾಕಿ ಈ ಕೋಟೆ​ಯಲ್ಲಿ ತಂದು ಹಾಕು​ತ್ತಿ​ದ್ದ​ರಂತೆ.

10 ವರ್ಷ​ಗಳ ಹಿಂದೆ​ಯಷ್ಟೇ ಎನ್‌.ವಿ.ಕೃಷ್ಣಮಾ​ಚಾರಿ ಎಂಬ 96 ವರ್ಷ​ದ​ವರು ಸ್ವಾತಂತ್ರ್ಯ ದಿವ​ಸ​ದಂದು ಮಧು​ಗಿ​ರಿಗೆ ಬಂದು ತಮ್ಮ ಹಳೆಯ ನೆನ​ಪು​ಗ​ಳನ್ನು ಹಂಚಿ​ಕೊಂಡಿ​ದ್ದ​ರಂತೆ. ಸ್ವಾತಂತ್ರ್ಯ ಸಂಗ್ರಾ​ಮ​ದಲ್ಲಿ ಇವರು ಕೂಡ ಭಾಗಿ​ಯಾ​ಗಿ​ದ್ದ​ರಂತೆ. ಆಗ ಟೆಲಿ​ಗ್ರಾಫ್‌ ವೈರ್‌​ಗ​ಳನ್ನು ಕಡಿದು ಈ ಕೋಟೆ ಬಂಡೆ ಸಂದು​ಗ​ಳಲ್ಲಿ ಹಾಕು​ತ್ತಿ​ದ್ದನ್ನು ಸ್ಮರಿ​ಸಿ​ಕೊಂಡಿ​ದ್ದರು.

2012ರ ಆಗಸ್ಟ್‌ 15 ರಂದು ಮಧು​ಗಿ​ರಿಗೆ ಬಂದು ವಂದೇ ಮಾತರಂ ಘೋಷ​ಣೆ​ಯೊಂದಿಗೆ ಕೋಟೆಯಲ್ಲಿ ಬಾವುಟ ಹಾರಿ​ಸಿ​ದ್ದ​ರಂತೆ. ಅಂದು ಸ್ವಾತಂತ್ರ್ಯ ಸಂಗ್ರಾ​ಮ​ದಲ್ಲಿ ಪಾಲ್ಗೊಂಡಿದ್ದ ಎನ್‌.​ಆರ್‌.ಮ್ಯಾಥಾ​ರ್ಡ್‌​(90) ಹಾಗೂ ವಿ.ಎಸ್‌. ಹಳ್ಳಿ ಕೇರಿ(88) ಅವರು ಆಗ​ಮಿಸಿ ಸ್ವಾತಂತ್ರ್ಯ ಸಂಗ್ರಾ​ಮ​ದಲ್ಲಿ ಅಡ​ಗು​ತಾ​ಣ​ವಾ​ಗಿದ್ದ ಮಧು​ಗಿರಿ ಕೋಟೆ ಬಗ್ಗೆ ಮೆಲುಕು ಹಾಕಿ​ದ್ದಾರೆ.

ತಲುಪುವುದು ಹೇಗೆ?

ಬೆಂಗ​ಳೂ​ರಿ​ನಿಂದ 110 ಕಿ.ಮೀ. ದೂರದಲ್ಲಿದೆ ಮಧು​ಗಿ​ರಿ. ಬೆಂಗಳೂರು, ತುಮಕೂರಿನಿಂದ ನೇರ ಬಸ್‌ ಸೌಕರ್ಯವಿದೆ. ಮಧು​ಗಿರಿ ಬಸ್‌ ನಿಲ್ದಾ​ಣ​ದಿಂದ ಕೇವಲ 1 ಕಿ.ಮೀ. ದೂರ​ದಲ್ಲಿ ಈ ಕೋಟೆ​ಯಿ​ದೆ.

- ಉಗಮ ಶ್ರೀನಿ​ವಾ​ಸ್‌

 

Follow Us:
Download App:
  • android
  • ios