ತಂದೆ ಮಾಡಿದ ಒಂದು ಎಡವಟ್ಟು, ಮಗನ ಕಣ್ಣಿಗೆ ಹೊಕ್ಕ ಮೊಳೆ!
ದುರ್ಘಟನೆ ಯಾವಾಗ ಸಂಭವಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಯಾವುದೆ ವ್ಯಕ್ತಿಯ ಜೀವನದಲ್ಲಿ ಯಾವಾಗಲಾದರೂ ಇದು ಸಂಭವಿಸಬಹುದು. ಅನೇಕ ಬಾರಿ ಈ ದುರ್ಘಟನೆಗಳು ಪ್ರಾಣ ಹಾನಿಯನ್ನೂ ಉಂಟು ಮಾಡುತ್ತವೆ. ಕೊಂಚ ಎಚ್ಚರ ತಪ್ಪಿದರೂ ಎಡವಟ್ಟು ಸಂಭವಿಸುತ್ತದೆ. ಅದರಲ್ಲೂ ಸಣ್ಣ ಮಕ್ಕಳ ಬಗ್ಗೆ ಅದೆಷ್ಟು ಎಚ್ಚರ ವಹಿಸಿದರೂ ಸಾಲುವುದಿಲ್ಲ. ಸದ್ಯ ತಂದೆಯ ಒಂದು ಅಜಾರುಕತೆಯಿಂದ ಮೂರು ವರ್ಷದ ಮಗುವಿನ ಕಣ್ಣಿನೊಳ್ಗೆ ಚೂಪಾದ ಮೊಳೆ ಸೇರಿರುವ ಘಟನೆ ಥಾಯ್ಲೆಂಡ್ನಲ್ಲಿ ನಡೆದಿದೆ. ಈ ಮೊಳೆ ಕಣ್ಣಿನ ನಡುವೆ ಚುಚ್ಚಿಕೊಂಡಿದ್ದು, ಸದ್ಯ ಈ ಶಾಕಿಂಗ್ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

<p>ಈ ಶಾಕಿಂಗ್ ಘಟನೆ ಥಾಯ್ಲೆಂಡ್ನ ಖಾವೂಂನಲ್ಲಿ ನಡೆದಿದೆ. ಇಲ್ಲೊಬ್ಬ ಮೂರು ವರ್ಷದ ಮಗುವಿನ ಕಣ್ಣಿಗೆ ಕಬ್ಬಿಣದ ಮೊಳೆ ಚುಚ್ಚಿಕೊಂಡಿದೆ. ಈ ಘಟನೆಗೆ ತಂದೆಯ ಅಜಾಗರೂಕತೆಯೇ ಕಾರಣ ಎಂಬುವುದೂ ಬಹಿರಂಗವಾಗಿದೆ.</p>
ಈ ಶಾಕಿಂಗ್ ಘಟನೆ ಥಾಯ್ಲೆಂಡ್ನ ಖಾವೂಂನಲ್ಲಿ ನಡೆದಿದೆ. ಇಲ್ಲೊಬ್ಬ ಮೂರು ವರ್ಷದ ಮಗುವಿನ ಕಣ್ಣಿಗೆ ಕಬ್ಬಿಣದ ಮೊಳೆ ಚುಚ್ಚಿಕೊಂಡಿದೆ. ಈ ಘಟನೆಗೆ ತಂದೆಯ ಅಜಾಗರೂಕತೆಯೇ ಕಾರಣ ಎಂಬುವುದೂ ಬಹಿರಂಗವಾಗಿದೆ.
<p>ತಂದೆ ಮನೆ ಹೊರಗಿನ ಗಾರ್ಡನ್ನಲ್ಲಿ ಬೆಳೆದಿದ್ದ ಹುಲ್ಲನ್ನು ಮಷೀನ್ ಮೂಲಕ ತೆಗೆಯುವ ಕೆಲಸ ಮಾಡುತ್ತಿದ್ದರು.</p>
ತಂದೆ ಮನೆ ಹೊರಗಿನ ಗಾರ್ಡನ್ನಲ್ಲಿ ಬೆಳೆದಿದ್ದ ಹುಲ್ಲನ್ನು ಮಷೀನ್ ಮೂಲಕ ತೆಗೆಯುವ ಕೆಲಸ ಮಾಡುತ್ತಿದ್ದರು.
<p>ಹೀಗಿರುವಾಗ ಮಗು ಕೂಡಾ ಅಲ್ಲೇ ಪಕ್ಕದಲ್ಲಿ ಆಟವಾಡಿಕೊಂಡಿತ್ತು. ಇನ್ನು ತಂದೆ ಯಾವ ಯಂತ್ರದಲ್ಲಿ ಕೆಲಸ ಮಾಡುತ್ತಿದ್ದರೋ ಅದರ ಕೆಲ ಭಾಗಗಳು ಶಿಥಿಲಗೊಂಡಿದ್ದವು. ಹೀಗಾಗೇ ಮಷೀನ್ ಬಹಳ ಕಂಪಿಸುತ್ತಿತ್ತು.<br /> </p>
ಹೀಗಿರುವಾಗ ಮಗು ಕೂಡಾ ಅಲ್ಲೇ ಪಕ್ಕದಲ್ಲಿ ಆಟವಾಡಿಕೊಂಡಿತ್ತು. ಇನ್ನು ತಂದೆ ಯಾವ ಯಂತ್ರದಲ್ಲಿ ಕೆಲಸ ಮಾಡುತ್ತಿದ್ದರೋ ಅದರ ಕೆಲ ಭಾಗಗಳು ಶಿಥಿಲಗೊಂಡಿದ್ದವು. ಹೀಗಾಗೇ ಮಷೀನ್ ಬಹಳ ಕಂಪಿಸುತ್ತಿತ್ತು.
<p>ಹೀಗಿರುವಾಗ ಹುಲ್ಲು ತೆಗೆಯುತ್ತಿರುವಾಗಲೇ ಗಾರ್ಡನ್ನಲ್ಲಿ ಬಿದ್ದಿದ್ದ ಮೊಳೆ ಮೇಲೆ ಈ ಯಂತ್ರ ಚಲಿಸಿದೆ. ಈ ವೇಳೆ ಯಂತ್ರದ ಒತ್ತಡಕ್ಕೆ ಆ ಮೊಳೆ ನೇರವಾಗಿ ಅಲ್ಲಿದ್ದ ಮಗುವಿನ ಕಣ್ಣಿಗೆ ಚುಚ್ಚಿಕೊಂಡಿದೆ.</p>
ಹೀಗಿರುವಾಗ ಹುಲ್ಲು ತೆಗೆಯುತ್ತಿರುವಾಗಲೇ ಗಾರ್ಡನ್ನಲ್ಲಿ ಬಿದ್ದಿದ್ದ ಮೊಳೆ ಮೇಲೆ ಈ ಯಂತ್ರ ಚಲಿಸಿದೆ. ಈ ವೇಳೆ ಯಂತ್ರದ ಒತ್ತಡಕ್ಕೆ ಆ ಮೊಳೆ ನೇರವಾಗಿ ಅಲ್ಲಿದ್ದ ಮಗುವಿನ ಕಣ್ಣಿಗೆ ಚುಚ್ಚಿಕೊಂಡಿದೆ.
<p>ನೋವಿನಿಂದ ಚೀರಾಡಿದ ಮಗನನ್ನು ಕೂಡಲೇ ಆ ತಂದೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಪರಿಶೀಲನೆ ನಡೆಸಿದ ವೈದ್ಯರು ಮಗುವನ್ನು ಐಸಿಯುಗೆ ಶಿಫ್ಟ್ ಮಾಡಿ, ಆಪರೇಷನ್ಗೆ ಸಿದ್ಧತೆ ನಡೆಸಿದ್ದಾರೆ. ಇನ್ನು ಈ ಮೊಳೆ ಮಗುವಿನ ಕಣ್ಣಿನ ಆಳದವರೆಗೂ ಚುಚ್ಚಿಕೊಂಡಿರುವುದು ವೈದ್ಯರಿಗೆ ತಿಳಿದು ಬಂದಿದೆ. </p>
ನೋವಿನಿಂದ ಚೀರಾಡಿದ ಮಗನನ್ನು ಕೂಡಲೇ ಆ ತಂದೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಪರಿಶೀಲನೆ ನಡೆಸಿದ ವೈದ್ಯರು ಮಗುವನ್ನು ಐಸಿಯುಗೆ ಶಿಫ್ಟ್ ಮಾಡಿ, ಆಪರೇಷನ್ಗೆ ಸಿದ್ಧತೆ ನಡೆಸಿದ್ದಾರೆ. ಇನ್ನು ಈ ಮೊಳೆ ಮಗುವಿನ ಕಣ್ಣಿನ ಆಳದವರೆಗೂ ಚುಚ್ಚಿಕೊಂಡಿರುವುದು ವೈದ್ಯರಿಗೆ ತಿಳಿದು ಬಂದಿದೆ.
<p>ಬಹಳ ಹೊತ್ತು ನಡೆದ ಸರ್ಜರಿ ಬಳಿಕ ಈ ಮೊಳೆಯನ್ನು ಮಗುವಿನ ಕಣ್ಣಿನಿಂದ ತೆಗೆಯಲಾಗಿದೆ. ಸದ್ಯ ಕಣ್ಣಿನೊಳಗೆ ರಕ್ತ ಹೆಪ್ಪುಗಟ್ಟಿರುವುದರಿಂದ ಮಗುವಿನ ಕಣ್ಣು ಕುರುಡಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆದರೆ ಅತೀ ಶೀಘ್ರದಲ್ಲಿ ಇದನ್ನು ಸರ್ಜರಿ ಮೂಲಕ ತೆಗೆದು ದೃಷ್ಟಿ ಮರಳುವಂತೆ ಮಾಡುವುದಾಗಿ ವೈದ್ಯರು ಹೇಳಿದ್ದಾರೆ.</p>
ಬಹಳ ಹೊತ್ತು ನಡೆದ ಸರ್ಜರಿ ಬಳಿಕ ಈ ಮೊಳೆಯನ್ನು ಮಗುವಿನ ಕಣ್ಣಿನಿಂದ ತೆಗೆಯಲಾಗಿದೆ. ಸದ್ಯ ಕಣ್ಣಿನೊಳಗೆ ರಕ್ತ ಹೆಪ್ಪುಗಟ್ಟಿರುವುದರಿಂದ ಮಗುವಿನ ಕಣ್ಣು ಕುರುಡಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆದರೆ ಅತೀ ಶೀಘ್ರದಲ್ಲಿ ಇದನ್ನು ಸರ್ಜರಿ ಮೂಲಕ ತೆಗೆದು ದೃಷ್ಟಿ ಮರಳುವಂತೆ ಮಾಡುವುದಾಗಿ ವೈದ್ಯರು ಹೇಳಿದ್ದಾರೆ.
<p>ವೈದ್ಯರೇ ಈ ಮಗುವಿನ ಫೋಟೋ ಸೆರೆ ಹಿಡಿದಿದ್ದರು. ಮಕ್ಕಳ ತಂದೆ ತಾಯಿಯಲ್ಲಿ ಜಾಗರೂಕತೆ ಮೂಡಿಸುವ ನಿಟ್ಟಿನಲ್ಲಿ ಅಅವರು ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. </p>
ವೈದ್ಯರೇ ಈ ಮಗುವಿನ ಫೋಟೋ ಸೆರೆ ಹಿಡಿದಿದ್ದರು. ಮಕ್ಕಳ ತಂದೆ ತಾಯಿಯಲ್ಲಿ ಜಾಗರೂಕತೆ ಮೂಡಿಸುವ ನಿಟ್ಟಿನಲ್ಲಿ ಅಅವರು ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ