MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • World News
  • ಉಕ್ರೇನ್ ಮೇಲಿನ ದಾಳಿಗೆ ಅಸಲಿ ಕಾರಣವೇನು? ಪುಟಿನ್ ನಡೆ ಸಮರ್ಥಿಸಿದ ರಷ್ಯಾದ ಶಾಸಕ, ಬಿಹಾರದ ಅಭಯ್ ಸಿಂಗ್!

ಉಕ್ರೇನ್ ಮೇಲಿನ ದಾಳಿಗೆ ಅಸಲಿ ಕಾರಣವೇನು? ಪುಟಿನ್ ನಡೆ ಸಮರ್ಥಿಸಿದ ರಷ್ಯಾದ ಶಾಸಕ, ಬಿಹಾರದ ಅಭಯ್ ಸಿಂಗ್!

ಉಕ್ರೇನ್ ಮತ್ತು ರಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ನಡುವೆ ಭಾರತೀಯ ಮೂಲದ ರಷ್ಯಾ ಶಾಸಕ ಡಾ. ಅಭಯ್ ಕುಮಾರ್ ಸಿಂಗ್ ಅವರ ಹೇಳಿಕೆಯು ಹೆಚ್ಚು ಚರ್ಚೆಗೆ ಕಾರಣವಾಗಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪಕ್ಷದ ನಾಯಕ ಅಭಯ್ ಸಿಂಗ್ ಇದನ್ನು ಮಿಲಿಟರಿ ಕಾರ್ಯಾಚರಣೆ ಎಂದು ಕರೆದಿದ್ದಾರೆ. ಉಕ್ರೇನ್ ಮೇಲೆ ನಡೆಯುತ್ತಿರುವ ದಮನವನ್ನು ಅವರು 'ಸರ್ಜಿಕಲ್ ಸ್ಟ್ರೈಕ್'ಗೆ ಹೋಲಿಸಿದ್ದಾರೆ. ರಷ್ಯಾದಂತಹ ದೇಶಕ್ಕೆ ಉಕ್ರೇನ್ ವಶಪಡಿಸಿಕೊಳ್ಳುವುದು ಕೇವಲ ಒಂದು ದಿನದ ಕೆಲಸ ಎಂದು ಅಭಯ್ ಸಿಂಗ್ ಹೇಳಿದರು. ಇಡೀ ಜಗತ್ತು ಇದನ್ನು ಯುದ್ಧ ಎಂದು ಕರೆಯುತ್ತಿದೆ, ಆದರೆ ರಷ್ಯಾ ಮಾತ್ರ ಇದನ್ನು ತನ್ನ ಸೇನೆಯ ಕಾರ್ಯಾಚರಣೆ ಎಂದು ಕರೆಯುತ್ತಿದೆ. ಭಾರತ ಬಾಲಾಕೋಟ್‌ನಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿದಂತೆ ಎಂದಿದ್ದಾರೆ. ಉಕ್ರೇನ್‌ನಲ್ಲಿ ಹತ್ಯೆಗೀಡಾದ ಭಾರತೀಯ ವಿದ್ಯಾರ್ಥಿ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಇದು ಭಾರತದ ವಿರುದ್ಧ ಉಕ್ರೇನ್ ಪ್ರತೀಕಾರವಾಗಿದೆ ಎಂದಿದ್ದಾರೆ. ಡಾ.ಅಭಯ್ ಸಿಂಗ್ ಅವರ ಈ ಹೇಳಿಕೆಯ ನಂತರ, ಅವರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ ಡಾ.ಅಭಯ್ ಸಿಂಗ್ ಮೂಲತಃ ಬಿಹಾರದವರು, ಆದರೀಗ ಅವರು ಪುಟಿನ್ ಸರ್ಕಾರದಲ್ಲಿ ಶಾಸಕರಾಗಿದ್ದಾರೆ.

2 Min read
Suvarna News
Published : Mar 02 2022, 03:47 PM IST
Share this Photo Gallery
  • FB
  • TW
  • Linkdin
  • Whatsapp
15

ಹುಟ್ಟಿದ್ದು ಬಿಹಾರದಲ್ಲಿ

ಡಾ. ಅಭಯ್ ಅವರು ಬಿಹಾರದ ಪಾಟ್ನಾದಲ್ಲಿ ಜನಿಸಿದರು. ಅವರು ಪಾಟ್ನಾದ ಲೊಯೊಲಾ ಹೈಸ್ಕೂಲ್‌ನಿಂದ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ವೈದ್ಯಕೀಯ ಅಧ್ಯಯನಕ್ಕಾಗಿ 1990 ರ ದಶಕದ ಆರಂಭದಲ್ಲಿ ರಷ್ಯಾದ ಕುರ್ಸ್ಕ್‌ಗೆ ತೆರಳಿದರು. ಇದರ ನಂತರ ಅವರು ಅಭ್ಯಾಸಕ್ಕಾಗಿ ಭಾರತಕ್ಕೆ ಹಿಂತಿರುಗಿದರು ಆದರೆ ಶೀಘ್ರದಲ್ಲೇ ರಷ್ಯಾಕ್ಕೆ ಮರಳಿದರು. ಅಲ್ಲಿಗೆ ಹೋದ ನಂತರ, ಅವರು ಉದ್ಯಮದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗಿಳಿದರು. ರಷ್ಯಾದಲ್ಲಿ ಉದ್ಯಮ ಚೆನ್ನಾಗಿ ಮುಂದುವರೆಯಿತು, ವ್ಯಾಪಾರವೂ ಹೆಚ್ಚಾಯಿತು. ಅವರು ಫಾರ್ಮಾ, ರಿಯಲ್ ಎಸ್ಟೇಟ್ನಲ್ಲಿ ಉದ್ಯಮ ಆರಂಭಿಸಿದ್ದರು. ನಂತರ ಹೆಚ್ಚುತ್ತಿರುವ ಜನಪ್ರಿಯತೆಯೊಂದಿಗೆ ರಾಜಕೀಯಕ್ಕೆ ಪ್ರವೇಶಿಸಿದರು.

25

ಕುರ್ಸ್ಕ್‌ನಿಂದ ಚುನಾವಣೆಯಲ್ಲಿ ಗೆದ್ದರು

2012 ರಲ್ಲಿ ರಷ್ಯಾದ ಆಗಿನ ಭಾರತೀಯ ರಾಯಭಾರಿಯಾಗಿದ್ದ ಅಜಯ್ ಮಲ್ಹೋತ್ರಾ ಅವರು ಕುರ್ಸ್ಕ್ ನಗರದ ಹೃದಯಭಾಗದಲ್ಲಿರುವ ಉರಾಲ್ಸ್ಕಿ ವ್ಯಾಪಾರ ಕೇಂದ್ರವನ್ನು ಉದ್ಘಾಟಿಸಿದಾಗ ಅಭಯ್ ಸಿಂಗ್ ಮೊದಲು ರಾಜಕೀಯವನ್ನು ಎದುರಿಸಿದರು. ಅಭಯ್ ಕುಮಾರ್ ಸಿಂಗ್ ಈ ಮಾಲ್‌ನ ಮಾಲೀಕರಾಗಿದ್ದಾರೆ.ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ದೇಶದ ಸಂಸತ್ತಿಗೆ (ಡುಮಾ) ಶೇಕಡಾ 75 ರಷ್ಟು ಸಂಸದರನ್ನು ಕಳುಹಿಸಿರುವ ರಷ್ಯಾದ ಆಡಳಿತ ಪಕ್ಷ 'ಯುನೈಟೆಡ್ ರಾಶಾ'. ಡಾ.ಅಭಯ್ 2015ರಲ್ಲಿ ಪುಟಿನ್ ಪಕ್ಷಕ್ಕೆ ಸೇರ್ಪಡೆಗೊಂಡರು. ಇದರ ನಂತರ, 2018 ರಲ್ಲಿ ಅವರು ಪಶ್ಚಿಮ ರಷ್ಯಾದ ಕುರ್ಸ್ಕ್‌ನಿಂದ ಚುನಾವಣೆಯಲ್ಲಿ ಗೆದ್ದರು ಮತ್ತು ಉಪನಾಯಕರಾದರು.

35

ಉಕ್ರೇನ್ ಮೇಲೆ ರಷ್ಯಾದ ಕ್ರಮದ ಬಗ್ಗೆಯೂ ಹೇಳಿಕೆ

ಬಾಂಗ್ಲಾದೇಶದಲ್ಲಿ ಚೀನಾ ತನ್ನ ಸೇನಾ ನೆಲೆಯನ್ನು ಸ್ಥಾಪಿಸಿದರೆ ಭಾರತ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ಅಭಯ್ ಸಿಂಗ್ ಹೇಳಿದ್ದಾರೆ. ಯಾವುದೇ ಸಂದರ್ಭದಲ್ಲಿ ಭಾರತ ಇದನ್ನು ಇಷ್ಟಪಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಅದೇ ರೀತಿ ರಷ್ಯಾದ ವಿರುದ್ಧ ನ್ಯಾಟೋವನ್ನು ರಚಿಸಲಾಯಿತು ಮತ್ತು ಸೋವಿಯತ್ ಒಕ್ಕೂಟದ ವಿಭಜನೆಯ ಹೊರತಾಗಿಯೂ ವಿಘಟಿಸಲಿಲ್ಲ. ಇದು ಕ್ರಮೇಣ ರಷ್ಯಾಕ್ಕೆ ಹತ್ತಿರವಾಯಿತು. ಉಕ್ರೇನ್ NATO ಗೆ ಸೇರಿದರೆ ಅದು NATO ಪಡೆಗಳನ್ನು ನಮಗೆ ಹತ್ತಿರ ತರುತ್ತದೆ, ಏಕೆಂದರೆ ಉಕ್ರೇನ್ ನಮ್ಮ ನೆರೆಯ ರಾಷ್ಟ್ರವಾಗಿದೆ. ಇದು ಒಪ್ಪಂದದ ಉಲ್ಲಂಘನೆಯಾಗುತ್ತದೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ರಷ್ಯಾದ ಸಂಸತ್ತಿಗೆ ಕಾರ್ಯಾಚರಣೆ ಬಿಟ್ಟು ಬೇರೆ ಆಯ್ಕೆ ಇರಲಿಲ್ಲ.
 

45

ಉಕ್ರೇನ್‌ನಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲಾಗುವುದಿಲ್ಲ

ಡಾ. ಸಿಂಗ್ ಉಕ್ರೇನ್ ಮೇಲೆ ಪರಮಾಣು ದಾಳಿಯ ಊಹಾಪೋಹಗಳನ್ನು ತಳ್ಳಿಹಾಕಿದರು. ರಷ್ಯಾದ ಮೇಲೆ ದಾಳಿ ಮಾಡುವ ಮತ್ತೊಂದು ದೇಶಕ್ಕೆ ಪ್ರತ್ಯುತ್ತರ ನೀಡುವುದು ಪರಮಾಣು ಶಸ್ತ್ರಾಸ್ತ್ರಗಳ ಅಭ್ಯಾಸದ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಅವರು ಹೇಳಿದರು. ಅಧ್ಯಕ್ಷ ಪುಟಿನ್ ಅವರು ಪರಮಾಣು ಡ್ರಿಲ್ಗಳು ರಷ್ಯಾದ ಮೇಲೆ ದಾಳಿ ಮಾಡಲು ಉದ್ದೇಶಿಸಿರುವವರಿಗೆ ಪ್ರತಿಕ್ರಿಯಿಸಲು ಮಾತ್ರ ಎಂದು ಘೋಷಿಸಿರುವುದಾಗಿಯೂ ಹೇಳಿದ್ದಾರೆ.
 

55

ರಷ್ಯಾ ನಾಗರಿಕರ ಮೇಲೆ ದಾಳಿ ಮಾಡುವುದಿಲ್ಲ

ಉಕ್ರೇನ್ ಜನರನ್ನು ಎಚ್ಚರಿಸಲು ಅಲ್ಲಿ ಸೈರನ್ ಮೊಳಗಿಸಲಾಗುತ್ತಿದೆ ಎಂದು ಅಭಯ್ ಸಿಂಗ್ ಹೇಳಿದ್ದಾರೆ. ಇದು ತಂತ್ರದ ಭಾಗವಾಗಿದೆ. ಅಲ್ಲಿನ ಸೈನಿಕರು ತಮ್ಮ ನಾಗರಿಕರ ಹಿಂದೆ ಅಡಗಿಕೊಂಡು ದಾಳಿ ಮಾಡದಿದ್ದರೆ ರಷ್ಯಾ ವಸತಿ ಪ್ರದೇಶದ ಮೇಲೆ ಎಂದಿಗೂ ದಾಳಿ ಮಾಡುವುದಿಲ್ಲ. ಸೈನಿಕರು ಹೀಗೆ ಮಾಡಿದರೆ ಅವರ ವಿರುದ್ಧ ಸಂಪೂರ್ಣ ಪ್ರತೀಕಾರ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Suvarna News
ರಷ್ಯಾ
ವ್ಲಾಡಿಮಿರ್ ಪುಟಿನ್
ಉಕ್ರೇನ್
ಬಿಹಾರ
Latest Videos
Recommended Stories
Recommended image1
ಚೀನಾದಿಂದ ಅಣು ದಾಳಿಯನ್ನೂ ಸಹಿಸಬಲ್ಲ ಕೃತಕ ದ್ವೀಪ ಸೃಷ್ಟಿ!
Recommended image2
ದೂರವಾಗಿರೋ ಸಂಗಾತಿ ಜೊತೆ ವಿಡಿಯೋ ಕಾಲ್​ ಮೂಲಕ ನಾಯಿ ಸಂಭಾಷಣೆ: ವಿಡಿಯೋ ವೈರಲ್
Recommended image3
ಯುರೋಪಿನಾದ್ಯಂತ ಹಮಾಸ್ ನೆಟ್‌ವರ್ಕ್, ಸೀಕ್ರೆಟ್ ಸೆಲ್‌ ಬಗ್ಗೆ ಮೊಸಾದ್ ಎಚ್ಚರಿಕೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved