MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Viral News
  • ಮಸ್ಕಿಯಲ್ಲಿ 4000 ವರ್ಷಗಳ ಹಿಂದಿನ ಜನವಸತಿ ಕುರುಹು ಪತ್ತೆ; ಆದಿಮಾನವರ ಚಿತ್ರಗಳೂ ಲಭ್ಯ!

ಮಸ್ಕಿಯಲ್ಲಿ 4000 ವರ್ಷಗಳ ಹಿಂದಿನ ಜನವಸತಿ ಕುರುಹು ಪತ್ತೆ; ಆದಿಮಾನವರ ಚಿತ್ರಗಳೂ ಲಭ್ಯ!

ರಾಯಚೂರಿನ ಮಸ್ಕಿ ಪಟ್ಟಣದ ಬಳಿಯ ಗುಡ್ಡದಲ್ಲಿ 4000 ವರ್ಷಗಳಷ್ಟು ಹಳೆಯದಾದ ಮಾನವ ವಸತಿಯ ಕುರುಹುಗಳು ಪತ್ತೆಯಾಗಿವೆ. ವಿದೇಶಿ ಮತ್ತು ದೇಶಿ ಸಂಶೋಧಕರ ತಂಡವು ಅಶೋಕನ ಶಾಸನ ಸಿಕ್ಕ ಸ್ಥಳದ ಸುತ್ತಮುತ್ತ ಉತ್ಖನನ ನಡೆಸಿ ಈ ಕುರುಹುಗಳನ್ನು ಪತ್ತೆ ಹಚ್ಚಿದೆ.

2 Min read
Author : Sathish Kumar KH
Published : Jul 24 2025, 05:35 PM IST
Share this Photo Gallery
  • FB
  • TW
  • Linkdin
  • Whatsapp
19
Image Credit : Asianet News

ರಾಯಚೂರಿನ ಮಸ್ಕಿ ಪಟ್ಟಣದ ಗುಡ್ಡದಲ್ಲಿ ಅಶೋಕನ ಶಿಲಾ ಶಾಸಕ ಸಿಕ್ಕಿರುವ ಸುತ್ತಲಿನ ಪ್ರದೇಶದಲ್ಲಿ 4 ಸಾವಿರ ವರ್ಷಗಳ ಹಿಂದೆ ಜನರು ಇಲ್ಲಿ ವಾಸ ಮಾಡುತ್ತಿದ್ದರು ಎಂಬುದರ ಕುರುಹುಗಳು ಪತ್ತೆಯಾಗಿವೆ. ಈ ಮೂಲಕ ಮಸ್ಕಿ ಪ್ರದೇಶದಲ್ಲಿ ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಜನ ವಸತಿ ಇತ್ತು ಎಂಬ ಸಾಕ್ಷ್ಯಗಳು ಇಲ್ಲಿ ಲಭ್ಯವಾಗಿವೆ.

29
Image Credit : Asianet News

ರಾಯಚೂರು ಜಿಲ್ಲೆ ‌ಮಸ್ಕಿ ಪಟ್ಟಣದ ಬಳಿಯಿರುವ ಗುಡ್ಡದಲ್ಲಿ ಐತಿಹಾಸಿಕ ಕುರುಹುಗಳು ಇದೀಗ ಸಿಕ್ಕಿವೆ. ಮಸ್ಕಿ ಪಟ್ಟಣದ ಬಳಿಯ ಗುಡ್ಡದ ಕೆಳಗೆ ಭೂ ಗರ್ಭ ಸೇರಿದ್ದ 4,000 ವರ್ಷಗಳ ಹಿಂದೆಯೇ ಮಾನವರು ವಾಸ ಮಾಡುತ್ತಿದ್ದರು ಎಂಬುದರ ಇತಿಹಾಸವನ್ನು ವಿದೇಶಿ ಸಂಶೋಧಕರು ಕೆದಕಿದ್ದಾರೆ.

Related Articles

Related image1
Raichur: ಸೆಲ್ಫಿ ವಿಚಾರಕ್ಕೆ ಕಿರಿಕ್‌, ಫೋಟೋ ತೆಗೆಯುವ ನೆಪದಲ್ಲಿ ಗಂಡನನ್ನೇ ನದಿಗೆ ತಳ್ಳಿದ ಪತ್ನಿ!
Related image2
Viral News: ಶಸ್ತ್ರಚಿಕಿತ್ಸೆಗೂ ಮುನ್ನ ಆಪರೇಷನ್ ಥಿಯೇಟರ್‌ನಲ್ಲಿ ಧನ್ವಂತರಿ ಸ್ತೋತ್ರ ಪಠಿಸಿದ ವೈದ್ಯರು
39
Image Credit : Asianet News

ಅಮೆರಿಕ ಸ್ಟ್ಯಾನ್‌ಫೋರ್ಡ್‌ ವಿಶ್ವ ವಿದ್ಯಾಲಯದ ಡಾ.ಆ್ಯಂಡ್ರಿಮ್ ಎಂ.ಬವೇರ್, ಕೆನಡಾದ ಮ್ಯಾಕ್ ಗಿಲ್ ವಿಶ್ವವಿದ್ಯಾಲಯದ ಡಾ. ಪೀಟರ್ ಜಿ‌.ಜೋಹಾನ್ಸನ್ ಹಾಗೂ ನಮ್ಮ ದೇಶದ ದೆಹಲಿಯ ನೊಯಿಡಾ ವಿಶ್ವವಿದ್ಯಾಲಯದ ಡಾ.ಹೇಮಂತ್ ಕಡಾಂಬಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಂದ ಶೋಧ ಕಾರ್ಯ ಮಾಡಲಾಗಿದೆ.

49
Image Credit : Asianet News

ಮಸ್ಕಿಯ ಬೆಟ್ಟದಲ್ಲಿ ಕಳೆದ 2 ತಿಂಗಳ ಕಾಲ ಶೋಧ ಕಾರ್ಯ ಮಾಡಿದ್ದಾರೆ. ಮಸ್ಕಿಯಲ್ಲಿ ಸಾಮ್ರಾಟ್ ಅಶೋಕ ಶಾಸನ ಸಿಕ್ಕಿದ ಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧ ಕಾರ್ಯವನ್ನು ಮಾಡಲಾಗಿದೆ.

59
Image Credit : Asianet News

ಮಸ್ಕಿಯ ದುರ್ಗದ ಗುಡ್ಡ, ಮಜ್ಜಿಗೆ ಗುಂಡು ಮತ್ತು ಅಯ್ಯಪ್ಪ ಸ್ವಾಮಿ ದೇಗುಲದ ಮುಂಭಾಗದಲ್ಲಿ ಶೋಧ ಕಾರ್ಯವನ್ನು ಮಾಡಲಾಗಿದೆ. ಈ ಗುಡ್ಡದಲ್ಲಿ ಭೂಮಿ ಉತ್ಖನನ ಮಾಡಿ ಪಳಿಯುಳಿಕೆ ಸಂಗ್ರಹಿಸಿ ಅಧ್ಯಯನ ಮಾಡಲಾಗುತ್ತಿದೆ.

69
Image Credit : Asianet News

ಸಂಶೋಧಕರ ಭೂಮಿ ಉತ್ಖನನ ವೇಳೆ 4000 ಸಾವಿರ ವರ್ಷಗಳ ಹಳೆಯ ವಸ್ತುಗಳು ಪತ್ತೆಯಾಗಿವೆ. ಹಿಂದಿನ ಕಾಲದಲ್ಲಿ ಜನ ಜೀವನಕ್ಕೆ ಬಳಸಿದ ಹತ್ತಾರು ವಸ್ತುಗಳು ಈ ಉತ್ಖನನದಲ್ಲಿ ಲಭ್ಯವಾಗಿದ್ದು, ಇನ್ನಷ್ಟು ಕುರುಹುಗಳ ಪತ್ತೆಗೆ ಉತ್ಖನನ ಕಾರ್ಯವನ್ನ ಮುಂದುವರೆಸಲಿದ್ದಾರೆ.

79
Image Credit : Asianet News

ಇತ್ತೀಚೆಗೆ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿಯೂ ಈ ಸಂಬಂಧಪಟ್ಟ ಫೋಟೋ ಹಾಗೂ ವಿಡಿಯೋಗಳು ಹರಿದಾಡುತ್ತಿದ್ದು, ಇದೀಗ ಈ ಬಗ್ಗೆ ಸ್ವತಃ ಸಂಶೋಧಕರು ಅದನ್ನು ದೃಡಪಡಿಸಿದ್ದಾರೆ.

89
Image Credit : Asianet News

ಇನ್ನು ರಾಯಚೂರಿನ ಮಸ್ಕಿಯಲ್ಲಿಇದೀಗ ಮಾನವ ಕುರುಗಳು ಪತ್ತೆಯ ಬೆನ್ನಲ್ಲಿಯೇ ಇಲ್ಲಿಗೆ ಸಂಶೋಧಕರು ಹಾಗೂ ವಿಜ್ಞಾನಿಗಳು ಆಗಮಿಸುತ್ತಿದ್ದಾರೆ. ಆದರೆ, ಇಲ್ಲಿ ಗೃಹಬಳಕೆ ವಸ್ತುಗಳು ಏನೇನು ಸಿಕ್ಕಿವೆ ಎಂಬುದನ್ನು ಸಂಶೋಧಕರು ಇನ್ನೂ ಬಹಿರಂಗಪಡಿಸಬೇಕಿದೆ. ಇನ್ನು ಇಲ್ಲಿ ಸಿಕ್ಕಿರುವ ಕುರುಹುಗಳ ಸರಿಯಾದ ಕಾಲಮಾನ ಯಾವುದೆಂದು ಗುರುತಿಸಬೇಕಿದೆ.

99
Image Credit : Wikipedia

ಈ ಹಿಂದೆ ರಾಯಚೂರು ಜಿಲ್ಲೆಗೆ ಸೇರಿದ್ದ ಗಂಗಾವತಿ ತಾಲೂಕಿನ (ಇದೀಗ ಕೊಪ್ಪಳ ಜಿಲ್ಲೆ) ಹಿರೇಬೆಣಕಲ್ಲು ಭಾರತದ ಕರ್ನಾಟಕ ರಾಜ್ಯದಲ್ಲಿರುವ ಒಂದು ಬೃಹತ್ ಶಿಲೆಯ ತಾಣವಾಗಿದೆ. ಕ್ರಿ.ಪೂ. 800 ರಿಂದ ಕ್ರಿ.ಪೂ. 200ರ ಅವಧಿಯಲ್ಲಿ ನಿರ್ಮಿಸಲಾದ ಭಾರತದ ಕೆಲವೇ ಬೃಹತ್ ಶಿಲಾ ತಾಣಗಳಲ್ಲಿ ಒಂದಾಗಿದೆ. ಸುಮಾರು 400 ಬೃಹತ್ ಶಿಲಾ ಗೋರಿಯ ಸ್ಮಾರಕಗಳು ಇಲ್ಲಿ ಈಗಲೂ ಶಿಲಾಯುಗದ ಮಾನವರ ಗೋರಿಗಳು ಜೀವಂತವಾಗಿವೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ರಾಯಚೂರು
ಕರ್ನಾಟಕ ಸುದ್ದಿ
ಕೊಪ್ಪಳ
ವೈರಲ್ ಸುದ್ದಿ

Latest Videos
Recommended Stories
Recommended image1
Nayanthara Caravan: ಭಾರೀ ಕಂಡೀಷನ್ಸ್ ಹಾಕ್ತಾರಾ ನಯನತಾರಾ? ಕ್ಯಾರವಾನ್‌ ಒಳಗೆ ಏನೆಲ್ಲಾ ಇರಬೇಕಂತೆ ಗೊತ್ತಾ?
Recommended image2
ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿರೋ "ಬೈಕ್ ಶೇವಿಂಗ್" ವಿಡಿಯೋ; ಪೊಲೀಸ್ರು ನೋಡಿದ್ರೆ ಈ ಮಹಾಶಯನ ಗತಿಯೇನು?
Recommended image3
ಇನ್ನರ್‌ವೇರ್‌ ಅನ್ನೇ ಟಾಪ್ ಮಾಡಿಕೊಂಡ ಫ್ಯಾಶನ್ ಇನ್‌ಫ್ಲುಯೆನ್ಸರ್‌; ಕದ್ದು ಮುಚ್ಚಿ Video ನೋಡಿದ ಪಡ್ಡೆಗಳು
Related Stories
Recommended image1
Raichur: ಸೆಲ್ಫಿ ವಿಚಾರಕ್ಕೆ ಕಿರಿಕ್‌, ಫೋಟೋ ತೆಗೆಯುವ ನೆಪದಲ್ಲಿ ಗಂಡನನ್ನೇ ನದಿಗೆ ತಳ್ಳಿದ ಪತ್ನಿ!
Recommended image2
Viral News: ಶಸ್ತ್ರಚಿಕಿತ್ಸೆಗೂ ಮುನ್ನ ಆಪರೇಷನ್ ಥಿಯೇಟರ್‌ನಲ್ಲಿ ಧನ್ವಂತರಿ ಸ್ತೋತ್ರ ಪಠಿಸಿದ ವೈದ್ಯರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved