MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Vaastu
  • ನಿಮ್ಮ ಮನೆಯಲ್ಲಿ ಶ್ರೀಮಂತಿಕೆಯ ಜತೆ, ಸಂತೋಷ, ಸಮೃದ್ಧಿ ವೃದ್ಧಿಸಲು ಈ ಸಲಹೆ ಪಾಲಿಸಿ

ನಿಮ್ಮ ಮನೆಯಲ್ಲಿ ಶ್ರೀಮಂತಿಕೆಯ ಜತೆ, ಸಂತೋಷ, ಸಮೃದ್ಧಿ ವೃದ್ಧಿಸಲು ಈ ಸಲಹೆ ಪಾಲಿಸಿ

ಮನೆಯಲ್ಲಿನ ಸಣ್ಣ ವಿಷಯಗಳು ಸಹ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ ಏಕೆಂದರೆ ಈ ವಸ್ತುಗಳು ಶಕ್ತಿಗೆ ಸಂಬಂಧಿಸಿವೆ. ಕೆಲವು ಪರಿಹಾರಗಳು ನಿಮ್ಮನ್ನು ಸಕಾರಾತ್ಮಕ ಶಕ್ತಿಯೊಂದಿಗೆ ಸಂಪರ್ಕಿಸಿದರೆ, ಕೆಲವು ನಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ವಾಸ್ತುವಿನಲ್ಲಿ ಕೆಲವೊಂದು ಕ್ರಮಗಳ ಬಗ್ಗೆ ವಿವರಿಸಲಾಗಿದೆ, ಇದು ಮನೆಗೆ ಆರ್ಥಿಕ ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ. ವಾಸ್ತುವಿನ ಸಲಹೆಗಳನ್ನು ತಿಳಿಯೋಣ. 

2 Min read
Author : Suvarna News
Published : Mar 18 2024, 05:38 PM IST
Share this Photo Gallery
  • FB
  • TW
  • Linkdin
  • Whatsapp
110

ಪ್ರತಿಯೊಬ್ಬರೂ ಜೀವನದಲ್ಲಿ ಅವರು ಬಯಸುವ ಎಲ್ಲವನ್ನೂ ಪಡೆಯಲು ಬಯಸುತ್ತಾರೆ. ಇದಕ್ಕಾಗಿ ಜನರು ಸಹ ತುಂಬಾ ಶ್ರಮಿಸುತ್ತಾರೆ, ಆದರೆ ಕಠಿಣ ಪರಿಶ್ರಮದ ಹೊರತಾಗಿ, ಪ್ರತಿಯೊಂದು ಆಸೆ ಅಥವಾ ಬಯಕೆಗೆ ಸಕಾರಾತ್ಮಕ ಶಕ್ತಿ (positive power) ಅಂಟಿಕೊಂಡಿದೆ. ಉದಾಹರಣೆಗೆ, ಮನೆಯಲ್ಲಿನ ಸಣ್ಣ ವಿಷಯಗಳು ಸಹ ಅದಕ್ಕೆ ಸಂಬಂಧಿಸಿವೆ. ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ತರಲು ನೀವು ಅಳವಡಿಸಿಕೊಳ್ಳಬಹುದಾದ ಕೆಲವು ಪರಿಹಾರಗಳಿವೆ. ಈ ಸಕಾರಾತ್ಮಕ ಶಕ್ತಿಯು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುವುದಲ್ಲದೆ ನಿಮ್ಮ ಜೀವನದಲ್ಲಿ ಸಂತೋಷವನ್ನು ತರುತ್ತದೆ. ಬನ್ನಿ, ನಿಮ್ಮ ಆರ್ಥಿಕ ಸಮೃದ್ಧಿಗೆ ಸಂಬಂಧಿಸಿದ ವಾಸ್ತು ನಿಯಮಗಳನ್ನು ಅನುಸರಿಸಿ. 

210

ಬೆಳಗ್ಗೆ ಮತ್ತು ಸಂಜೆ ತುಪ್ಪದ ದೀಪ ಬೆಳಗಿಸಿ
ಬೆಳಿಗ್ಗೆ ಮತ್ತು ಸಂಜೆ ಪೂಜಾ ಸ್ಥಳದಲ್ಲಿ ಹಸುವಿನ ತುಪ್ಪದ (cow ghee) ದೀಪವನ್ನು ಬೆಳಗಿಸುವುದು ವಾಸ್ತು ದೋಷಗಳನ್ನು ನಿವಾರಿಸುವ ಮೂಲಕ ಮನೆಯಲ್ಲಿ ಸಂತೋಷವನ್ನು ತರುತ್ತದೆ. ವಿಶೇಷವಾಗಿ ನೀವು ಸಂಜೆ ಬಾಗಿಲಲ್ಲಿ ದೀಪವನ್ನು ಬೆಳಗಿಸಬೇಕು, ಇದು ನಿಮ್ಮ ಮನೆಯಿಂದ ನಕಾರಾತ್ಮಕತೆಯನ್ನು ತೆಗೆದು ಹಾಕುತ್ತದೆ.
 

310

ಹಾಸಿಗೆ ಕೆಳಗೆ ಶೂ, ಚಪ್ಪಲಿ ಇಡಬೇಡಿ
ನೀವು ಎಂದಿಗೂ ಹಾಸಿಗೆಯ ಕೆಳಗೆ ಬೂಟುಗಳನ್ನು ಇಡಬಾರದು. ಇದರಿಂದಾಗಿ, ಲಕ್ಷ್ಮಿ ದೇವಿಯ ಕೃಪೆ ನಿಮ್ಮ ಮೇಲೆ ಬೀಳುವುದಿಲ್ಲ ಮತ್ತು ಜೊತೆಗೆ ಆರ್ಥಿಕ ಸಮಸ್ಯೆಗಳು ಸಹ ಹೆಚ್ಚಾಗಬಹುದು. ಶೂಗಳನ್ನು ಯಾವಾಗಲೂ ಬಾಗಿಲಿನಿಂದ ದೂರವಿಡಿ. ಸಾಧ್ಯವಾದರೆ, ಶೂಗಳು ಮತ್ತು ಚಪ್ಪಲಿಗಳನ್ನು ಯಾವಾಗಲೂ ಶೂ ರ್ಯಾಕ್ ನಲ್ಲಿ ಇರಿಸಿ.

410

ವಾರ್ಡ್ರೋಬ್ ಅನ್ನು ಇರಿಸಲು ಸರಿಯಾದ ದಿಕ್ಕು
ಭಾರವಾದ ಕಪಾಟುಗಳು ಮತ್ತು ಪೀಠೋಪಕರಣ ಪೆಟ್ಟಿಗೆಗಳಂತಹ ವಸ್ತುಗಳನ್ನು ಯಾವಾಗಲೂ ಮನೆಯ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು. ಇದು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ಇರಿಸುತ್ತದೆ. ಕಬೋರ್ಡ್ ಅನ್ನು ಯಾವಾಗಲೂ ಸ್ವಚ್ಛವಾಗಿರಿಸಿಕೊಳ್ಳಿ.

510

ಪ್ರತಿದಿನ ಶಂಖ ಊದಿರಿ
ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲು, ನೀವು ಯಾವಾಗಲೂ ಮನೆಯೊಳಗೆ ಶಂಖವನ್ನು ಊದಬೇಕು. ಇದು ಮನೆಯೊಳಗಿನ ಎಲ್ಲಾ ದೋಷಗಳನ್ನು ತೆಗೆದುಹಾಕುತ್ತದೆ. ನೀವು ಬೆಳಿಗ್ಗೆ ಮತ್ತು ಸಂಜೆ ಮನೆಯಲ್ಲಿ ಶಂಖವನ್ನು ಊದಬೇಕು.

610

ಮನೆಯ ಅಂಗಳದಲ್ಲಿ ಈ ಸಸ್ಯಗಳನ್ನು ನೆಡಬೇಡಿ
ಮನೆಯ ಅಂಗಳದಲ್ಲಿ, ಹಾಲು ಉತ್ಪಾದಿಸುವ ಸಸ್ಯಗಳನ್ನು ನೀವು ಎಂದಿಗೂ ನೆಡಬಾರದು. ಅಷ್ಟೇ ಅಲ್ಲ, ನೀವು ಮನೆಯ ಅಂಗಳದಲ್ಲಿ ಮುಳ್ಳಿನ ಸಸ್ಯಗಳನ್ನು ನೆಡಬಾರದು. ಇದು ಯಾವಾಗಲೂ ನಿಮ್ಮ ಕುಟುಂಬ ಜೀವನವನ್ನು ಹುಳಿಗೊಳಿಸುತ್ತದೆ.
 

710

ಮಡಕೆಯನ್ನು ತಲೆಕೆಳಗೆ ಮಾಡಿ ಇಡಬೇಡಿ
ಬೇಸಿಗೆ ಮುಗಿದ ನಂತರ ಹಳೆಯ ಮಡಕೆಯನ್ನು (old pot) ಛಾವಣಿಯ ಮೇಲೆ ತಲೆಕೆಳಗಾಗಿ ಇಡುವ ಅಭ್ಯಾಸವನ್ನು ಅನೇಕ ಜನರು ಹೊಂದಿದ್ದಾರೆ. ವಾಸ್ತು ಪ್ರಕಾರ, ಇದನ್ನು ಮಾಡುವುದರಿಂದ, ಅದೃಷ್ಟವು ನಿಮ್ಮ ಮೇಲೆ ಮುನಿಸಿಕೊಳ್ಳುತ್ತೆ. ತಲೆಕೆಳಗಾಗಿ ಮಡಕೆಯನ್ನು ಎಂದಿಗೂ ಛಾವಣಿಯ ಮೇಲೆ ಇಡಬಾರದು.
 

810

ಮುರಿದ ಗಾಜನ್ನು ಇಡಬೇಡಿ
ಮುರಿದ ಗಾಜು (broken glass) ಅಥವಾ ಕನ್ನಡಿಯನ್ನು ಎಂದಿಗೂ ಮನೆಯಲ್ಲಿ ಅಥವಾ ಡ್ರೆಸ್ಸಿಂಗ್ ಟೇಬಲ್ ಮೇಲೆ ಇಡಬಾರದು. ಅದೇ ಸಮಯದಲ್ಲಿ, ನಿಮ್ಮ ಮೇಕಪ್ ಕಿಟ್ ಗಾಜು ಮುರಿದಿದ್ದರೆ, ಅದನ್ನು ತಕ್ಷಣ ಎಸೆಯಬೇಕು. ಮುರಿದ ಕನ್ನಡಿಯಲ್ಲಿ ನಿಮ್ಮ ಮುಖವನ್ನು ಎಂದಿಗೂ ನೋಡಬೇಡಿ. ಇದು ದುರಾದೃಷ್ಟಕ್ಕೆ ಕಾರಣವಾಗಬಹುದು.
 

910

ಬಾಗಿಲಿನ ಹಿಂದೆ ಬಟ್ಟೆಗಳನ್ನು ನೇತುಹಾಕಬೇಡಿ
ಅನೇಕ ಜನರು ಬಾಗಿಲಿನ ಹಿಂದೆ ಹುಕ್ ಗಳನ್ನು ಹಾಕುವ ಮತ್ತು ಅದರ ಮೇಲೆ ಬಟ್ಟೆ ನೇತು ಹಾಕುವ ಅಭ್ಯಾಸವನ್ನು ಹೊಂದಿದ್ದಾರೆ. ನೀವು ಈ ಕೆಲಸವನ್ನು ಮಾಡುವುದನ್ನು ತಪ್ಪಿಸಬೇಕು ಏಕೆಂದರೆ ಇದರಿಂದ ಲಕ್ಷ್ಮೀದೇವಿ (Lakshmi Devi) ನಿಮ್ಮ ಮೇಲೆ ಮುನಿಸಿಕೊಳ್ಳುತ್ತಾಳೆ ಮತ್ತು ನೀವು ಯಾವಾಗಲೂ ಹಣದ ಕೊರತೆಯನ್ನು ಅನುಭವಿಸಬೇಕಾಗಿ ಬರುತ್ತೆ. 

1010

ಹಣದ ವಹಿವಾಟು ಹೇಗೆ?
ಅನೇಕ ಜನರು ಆಹಾರವನ್ನು ತಿನ್ನುವಾಗ ಹಣದ ವಹಿವಾಟು ನಡೆಸುತ್ತಾರೆ. ಹಣದ ವಹಿವಾಟಿಗೆ ಸಂಬಂಧಿಸಿದ ಇಂತಹ ಅಭ್ಯಾಸಗಳನ್ನು ತಕ್ಷಣವೇ ಬಿಡಬೇಕು, ಇಲ್ಲದಿದ್ದರೆ ಮಾತಾ ಲಕ್ಷ್ಮಿ ನಿಮ್ಮ ಮೇಲೆ ಕೋಪಗೊಳ್ಳಬಹುದು. ಹಣವನ್ನು ಐದು ಬೆರಳುಗಳಿಂದ ವಹಿವಾಟು ನಡೆಸಬೇಕು, ಅದರೊಂದಿಗೆ ನೀವು ಆರ್ಥಿಕ ಪ್ರಗತಿಯನ್ನು ಸಾಧಿಸುತ್ತೀರಿ.

About the Author

SN
Suvarna News

Latest Videos
Recommended Stories
Recommended image1
Lunar Eclipse 2026: ಈ 3 ರಾಶಿಯವರ ನೆಮ್ಮದಿ ಕಸಿಯಲಿದೆ ಈ ಚಂದ್ರಗ್ರಹಣ, ಇರಲಿ ಎಚ್ಚರ!
Recommended image2
ಸುದಿನಗಳು ಆರಂಭವಾಗುವ ಮುನ್ನ ಸಿಗಲಿದೆ ಈ ಶುಭ ಸಂಕೇತ! ನಿಮ್ಮ ಮನೇಲೂ ಈ ಬದಲಾವಣೆಗಳಾಗುತ್ತಿವೆಯೇ?
Recommended image3
Astro Tips for Students: ಪರೀಕ್ಷೆ ಬರೆಯುವ ಮುನ್ನ ಈ ಕೆಲಸ ಮಾಡಿ… ಮೆದುಳು ಸೂಪರ್ ಫಾಸ್ಟ್ ಆಗಿ ವರ್ಕ್ ಆಗುತ್ತೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved