ಧನ ಲಕ್ಷ್ಮಿ ನಿಮ್ಮನೇಲಿ ಕಾಲು ಮುರ್ಕೊಂಡು ಕೂರಬೇಕಾ? ಮನೆಯ ಈ ಮೂಲೆ ಎಂದಿಗೂ ಖಾಲಿ ಬಿಡ್ಬೇಡಿ!
Vastu Tips: ನಾವು ಮನೆಯಲ್ಲಿ ಇಡುವ ವಸ್ತುಗಳು ಸಹ ನಮ್ಮ ಮನೆಯ ವಾಸ್ತುವಿನ ಮೇಲೆ ಪರಿಣಾಮ ಬೀರುತ್ತವೆ. ಅದರಲ್ಲೂ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುವ ತಪ್ಪುಗಳು ಲಕ್ಷ್ಮಿದೇವಿಯ ಕೋಪಕ್ಕೆ ಕಾರಣವಾಗಬಹುದು. ಇದರಿಂದ ಲಕ್ಷ್ಮಿ ಮನೆಯಿಂದ ಹೊರಹೋಗುವ ಸನ್ನಿವೇಶ ಬರಬಹುದು.

Vastu Tips

1.ಈಶಾನ್ಯ ಮೂಲೆ...
1. ಈಶಾನ್ಯ ಮೂಲೆ: ಮನೆಯ ಈಶಾನ್ಯ ಮೂಲೆಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಲಕ್ಷ್ಮಿ ಮತ್ತು ಕುಬೇರ ನೆಲೆಸಿದ್ದಾರೆ ಎಂದು ನಂಬಲಾಗಿದೆ. ಹೆಚ್ಚಿನ ಮನೆಗಳಲ್ಲಿ ಈ ಮೂಲೆಯಲ್ಲೇ ಪೂಜಾ ಕೋಣೆ ಇರುತ್ತದೆ. ನಿಮ್ಮ ಮನೆಯಲ್ಲಿ ಈ ದಿಕ್ಕಿನಲ್ಲಿ ಪೂಜಾ ಕೋಣೆ ಇಲ್ಲದಿದ್ದರೆ, ಆ ಮೂಲೆಯನ್ನು ಖಾಲಿ ಬಿಡಬೇಡಿ. ಆ ಸ್ಥಳದಲ್ಲಿ ನೀರಿನಿಂದ ತುಂಬಿದ ಪಾತ್ರೆಯನ್ನು ಇಡುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ.
2. ನೈಋತ್ಯ ಮೂಲೆ: ಮನೆಯ ನೈಋತ್ಯ ಮೂಲೆಯನ್ನೂ ಸಹ ತಪ್ಪಾಗಿಯೂ ಖಾಲಿ ಬಿಡಬಾರದು. ವಾಸ್ತು ತಜ್ಞರ ಪ್ರಕಾರ, ನೈಋತ್ಯ ಮೂಲೆಯಲ್ಲಿ ಅಲಂಕಾರಿಕ ವಸ್ತು ಅಥವಾ ಭಾರವಾದ ವಸ್ತುವನ್ನು ಇಡಬೇಕು. ಮುಖ್ಯವಾಗಿ, ಪೀಠೋಪಕರಣ, ವಾರ್ಡ್ರೋಬ್, ಸೋಫಾ ಅಥವಾ ದೊಡ್ಡ ಹೂವಿನ ಕುಂಡವನ್ನು ಇಡಬೇಕು.
3. ಆಗ್ನೇಯ ಮೂಲೆ: ಮನೆಯ ಆಗ್ನೇಯ ದಿಕ್ಕನ್ನು ಅಗ್ನಿ ಮೂಲೆ ಎನ್ನುತ್ತಾರೆ. ನಿಮ್ಮ ಮನೆಯಲ್ಲಿ ಆಗ್ನೇಯ ಮೂಲೆ ಖಾಲಿಯಿದ್ದರೆ ಅನೇಕ ಸಮಸ್ಯೆಗಳು ಬರುತ್ತವೆ. ಉತ್ಸಾಹ ಇರುವುದಿಲ್ಲ, ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಈ ದಿಕ್ಕಿನಲ್ಲಿ ಅಡುಗೆಮನೆ ನಿರ್ಮಿಸುವುದರಿಂದ ಶುಭ ಫಲಿತಾಂಶಗಳು ಬರುತ್ತವೆ. ಅಥವಾ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಡುವುದು ಒಳ್ಳೆಯದು.
ವಾಯು ವ್ಯ ದಿಶ..
4. ವಾಯುವ್ಯ ದಿಕ್ಕು: ಮನೆಯ ವಾಯುವ್ಯ ದಿಕ್ಕನ್ನು ಕೂಡ ತಪ್ಪಾಗಿಯೂ ಖಾಲಿ ಬಿಡಬಾರದು. ಈ ದಿಕ್ಕು ಖಾಲಿಯಿದ್ದರೆ ಮನೆಯಲ್ಲಿ ಜಗಳ, ಅಪಾರ್ಥ, ಸಮಸ್ಯೆಗಳು ಬರುವ ಸಾಧ್ಯತೆ ಇದೆ. ಹಾಗಾಗಿ ಮನೆಯಲ್ಲಿ ಜಗಳಗಳು ಇರಬಾರದು ಎಂದರೆ ಈ ದಿಕ್ಕು ಖಾಲಿ ಇರಬಾರದು.
5. ಉತ್ತರ ದಿಕ್ಕು: ಉತ್ತರ ದಿಕ್ಕಿಗೆ ಸಂಪತ್ತು ಮತ್ತು ಸಮೃದ್ಧಿಯ ಅಧಿಪತಿಯಾದ ಕುಬೇರನು ಅಧಿಪತಿ. ಈ ದಿಕ್ಕನ್ನು ಖಾಲಿ ಬಿಡುವುದರಿಂದ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಹೆಚ್ಚಾಗಿ, ಹಣಕಾಸಿನ ತೊಂದರೆಗಳಿಗೆ ದಾರಿಯಾಗುತ್ತದೆ ಎನ್ನಲಾಗುತ್ತದೆ. ಇಲ್ಲಿ ಲಕ್ಷ್ಮಿ ಅಥವಾ ಕುಬೇರನ ವಿಗ್ರಹವನ್ನು ಪ್ರತಿಷ್ಠಾಪಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಹಾಗೆಯೇ, ಈ ದಿಕ್ಕಿನಲ್ಲಿ ಹಸಿರು ಸಸ್ಯಗಳನ್ನು ಇಡುವುದು ಕೂಡ ಪ್ರಯೋಜನಕಾರಿ.