ಮಂಡ್ಯ ಜನರ ಮಧ್ಯೆಯೇ ಹೊಸ ಜೋಡಿ ಆರತಕ್ಷತೆ, ನಾಗಿಣಿ 2 ದಾಖಲೆ
ಬೆಂಗಳೂರು/ ಮಂಡ್ಯ (ಏ. 05) ಕನ್ನಡ ಕಿರುತೆರೆಯಲ್ಲಿ ಹಲವು ಪ್ರಥಮಗಳನ್ನು ಸಾಧಿಸಿರುವ ಕನ್ನಡದ ನಂಬರ್ ಒನ್ ಮನರಂಜನಾ ಚಾನೆಲ್ ಜೀ ಕನ್ನಡ ಇದೀಗ ವೀಕ್ಷಕರ ಮಧ್ಯದಲ್ಲೇ ವಿವಾಹದ ಆರತಕ್ಷತೆ, ಭೋಜನ ಆಯೋಜಿಸಿ ಮತ್ತೊಂದು ಪ್ರಥಮಕ್ಕೆ ನಾಂದಿ ಹಾಡಿದೆ.
ಮನರಂಜನೆಯನ್ನು ವಿಶೇಷ ರೀತಿ ನೀಡುವುದರಲ್ಲಿ ಜೀ ಕನ್ನಡ ಎತ್ತಿದ ಕೈ.
ಕನ್ನಡ ಕಿರುತೆರೆ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಆರತಕ್ಷತೆಯನ್ನು ಜನರ ಮಧ್ಯದಲ್ಲಿ ಆಯೋಜಿಸಿದ ಖ್ಯಾತಿಗೆ ಜೀ ಕನ್ನಡ ಭಾಜನವಾಗಿದೆ.
ನಾಗಿಣಿ-2 ಖ್ಯಾತಿ ತ್ರಿಶೂಲ್ ಮತ್ತು ಶಿವಾನಿ ಅವರುಗಳ ವಿವಾಹದ ಆರತಕ್ಷತೆಯನ್ನು ಮಂಡ್ಯ ಜಿಲ್ಲೆಯಲ್ಲಿ ಒಂದು ಸ್ಪರ್ಧೆಯ ಮೂಲಕ ಆಯೋಜಿಸಲಾಗಿತ್ತು.
ಮನೆ ಮನೆಗೂ ಭೇಟಿ ನೀಡಿ ಜನರನ್ನು ಆಹ್ವಾನಿಸಿ ಒಂದು ಮಿಸ್ಡ್ ಕಾಲ್ ಮೂಲಕ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.
ಮಂಡ್ಯದ ಒಂದು ಮದುವೆ ಛತ್ರದಲ್ಲಿ ಎಲ್ಲರನ್ನೂ ಆಹ್ವಾನಿಸಿ ಅದರಲ್ಲಿ ಇಡೀ ನಾಗಿಣಿ ತಂಡ ಭಾಗವಹಿಸುವಂತೆ ಮಾಡಿ ಅದರಲ್ಲಿ ಒಂದು ಸಂವಾದವನ್ನೂ ಆಯೋಜಿಸಲಾಗಿತ್ತು.
ಮಂಡ್ಯ ಜಿಲ್ಲೆಯ ಜನರು ಈ ಕಾರ್ಯಕ್ರಮವನ್ನು ತಮ್ಮದೇ ಕುಟುಂಬದ ಕಾರ್ಯಕ್ರಮದಂತೆ ಸಂಭ್ರಮದಲ್ಲಿ ಭಾಗವಹಿಸಿದರು.
ನಾಗಿಣಿ-2 ತಂಡದೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
Nagini Zee Kannada
Nagini Zee Kannada
Nagini Zee Kannada
ಪ್ರತಿಯೊಬ್ಬರೂ ಧಾರಾವಾಹಿ ಕುರಿತಾದ ತಮ್ಮ ಕುತೂಹಲವನ್ನು ತಂಡದೊಂದಿಗೆ ಸಂವಾದದಲ್ಲಿ ಪರಿಹರಿಸಿಕೊಂಡರು.
ಎಲ್ಲರಿಗೂ ತಂಡದೊಂದಿಗೆ, ವಿವಾಹಿತ ಜೋಡಿಯೊಂದಿಗೆ ಪೋಟೋ ತೆಗೆದುಕೊಳ್ಳುವ ಅವಕಾಶ, ಬಾಳೆಲೆಯಲ್ಲಿ ಶ್ಯಾವಿಗೆ ಪಾಯಸದ ಭರ್ಜರಿ ಭೋಜನ ಆಯೋಜಿಸಿ ವೀಕ್ಷಕರಿಗೆ ಸತ್ಕಾರ ಮಾಡಲಾಯಿತು .
ಜೀ ಕನ್ನಡದಿಂದ ವಿನೂತನ ಕಾರ್ಯಕ್ರಮ, ನಾಗಿಣಿ-2 ತ್ರಿಶೂಲ್ ಹಾಗೂ ಶಿವಾನಿ ಅವರಿಗೆ ಮಂಡ್ಯದಲ್ಲಿ ಅದ್ಧೂರಿ ಆರತಕ್ಷತೆ
ನಾಗಿಣಿ-2 ತ್ರಿಶೂಲ್ ಹಾಗೂ ಶಿವಾನಿ ಅವರಿಗೆ ಮಂಡ್ಯದಲ್ಲಿ ಅದ್ಧೂರಿ ಆರತಕ್ಷತೆ
ನಾಗಿಣಿ-2 ತ್ರಿಶೂಲ್ ಹಾಗೂ ಶಿವಾನಿ ಅವರಿಗೆ ಮಂಡ್ಯದಲ್ಲಿ ಅದ್ಧೂರಿ ಆರತಕ್ಷತೆ
ನಾಗಿಣಿ-2 ತ್ರಿಶೂಲ್ ಹಾಗೂ ಶಿವಾನಿ ಅವರಿಗೆ ಮಂಡ್ಯದಲ್ಲಿ ಅದ್ಧೂರಿ ಆರತಕ್ಷತೆ
ನಾಗಿಣಿ-2 ತ್ರಿಶೂಲ್ ಹಾಗೂ ಶಿವಾನಿ ಅವರಿಗೆ ಮಂಡ್ಯದಲ್ಲಿ ಅದ್ಧೂರಿ ಆರತಕ್ಷತೆ
ನಾಗಿಣಿ-2 ತ್ರಿಶೂಲ್ ಹಾಗೂ ಶಿವಾನಿ ಅವರಿಗೆ ಮಂಡ್ಯದಲ್ಲಿ ಅದ್ಧೂರಿ ಆರತಕ್ಷತೆ
ನಾಗಿಣಿ-2 ತ್ರಿಶೂಲ್ ಹಾಗೂ ಶಿವಾನಿ ಅವರಿಗೆ ಮಂಡ್ಯದಲ್ಲಿ ಅದ್ಧೂರಿ ಆರತಕ್ಷತೆ