'ಡ್ರಾಮಾ ಜೂನಿಯರ್ಸ್' ಮಹತಿ ಈಗ 'ಗಟ್ಟಿಮೇಳ'ದಲ್ಲಿ ಕಣ್ಸೆಳೆದ ನಟಿ! ಯಾರೀಕೆ ?
ಜೀ ಕನ್ನಡದಲ್ಲಿ 2016 ರ 'ಡ್ರಾಮಾ ಜೂನಿಯರ್ಸ್' ರಿಯಾಲಿಟಿ ಶೋ ಸ್ಪರ್ಧಿಯಾಗಿ ಪ್ರೇಕ್ಷಕರ ಗಮನ ಸೆಳೆದ ಪ್ರತಿಭಾನ್ವಿತ ನಟಿ ಮಹತಿ ವೈಷ್ಣವಿ. ಚಿಕ್ಕ ವಯಸ್ಸಿನಿಂದಲೇ ಸಂಗೀತ ಕಲಿಯುತ್ತಾ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಮಹತಿ ಪರಿಚಯ ಇಲ್ಲಿದೆ.
ಮಹತಿ ವೈಷ್ಣವಿ ಭಟ್ ಮೂಲತಃ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನವರು. ಹುಟ್ಟಿದ್ದು ಫೆಬ್ರವರಿ 4, 2006.
ಡಾ. ಸುಚಿತ್ರಾ ಮತ್ತು ಡಾ. ಮುರಳೀಧರ ದಂಪತಿಯವರ ಪುತ್ರಿ.
5 ವರ್ಷವಿದ್ದಾಗಲೇ ತಾಯಿ ಸುಚಿತ್ರಾಳಿಂದ ಕರ್ನಾಟಕ ಸಂಗೀತ ಅಭ್ಯಾಸ ಮಾಡುತ್ತಿದ್ದಾಳೆ.
ನಿರರ್ಗಳವಾಗಿ ಭಾಷಣದ ಕಲೆ ರೂಢಿಸಿಕೊಂಡಿದ್ದು ಸುವರ್ಣ ನ್ಯೂಸ್ 'ಛೋಟಾ ರಿಪೋರ್ಟರ್'ನಲ್ಲಿ ಸ್ಪರ್ಧಿಸಿ ಟಾಪ್ 10 ಒಳಗಿದ್ದರು.
ಕೋಣಂದೂರು ರಾಷ್ಟ್ರೀಯ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
2016 ರಲ್ಲಿ ಜೀ ಕನ್ನಡ ವಾಹಿನಿಯ 'ಡ್ರಾಮ ಜೂನಿಯರ್ಸ್' ಕಾರ್ಯಕ್ರಮದ ಟಾಪ್ 10 ಸ್ಪರ್ಧಿಗಳಲ್ಲಿ ಒಬ್ಬರು.
ಕಾರ್ಯಕ್ರಮದಲ್ಲಿ ಬಹುಬೇಗ 'Star of the week ಪ್ರಶಸ್ತಿ ಪಡೆದುಕೊಂಡರು.
'ನವರಸ ಕಲಾವಿದೆ' ಎಂದು ತೀರ್ಪುಗಾರರಿಂದ ಪ್ರಶಂಸೆ ಪಡೆದುಕೊಂಡಿದ್ದಾರೆ.
ಕರ್ನಾಟಕದಾದ್ಯಂತ ಕಾರ್ಯಕ್ರಮಗಳನ್ನು ನೀಡಿ ಸನ್ಮಾನ, ಬಿರುದುಗಳನ್ನು ಪಡೆದುಕೊಂಡಿದ್ದಾರೆ.
ಶಿವಮೊಗ್ಗದ ಪ್ರಖ್ಯಾತ 'ಚಿಣ್ಣರ ದಸರಾ' ಉದ್ಘಾಟನೆ ಮಾಡಿ ಸನ್ಮಾನಗೊಂಡಿದ್ದಾರೆ.
ರಂಭಾಪುರಿ ಶ್ರೀಗಳಿಂದ 'ಅಭಿನಯ ಕಿಶೋರಿ', ಹಿರೇಮಗಳೂರು ಕಣ್ಣನ್ ಅವರಿಂದ 'ಅಭಿನಯ ರಾಣಿ' ಎಂಬ ಬಿರುದು ಪಡೆದುಕೊಂಡಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯ 'ಸಿಂಧೂರ' ಧಾರವಾಹಿಯಲ್ಲಿ ನಟಿಸಿದ್ದಾರೆ.
'ಎಳೆಯರು ನಾವು ಗೆಳೆಯರು' ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಜೀ ಕನ್ನಡ 'ಗಟ್ಟಿಮೇಳ' ಧಾರಾವಾಹಿಯಲ್ಲಿ ಅಂಜಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.