MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಧಾರಾವಾಹಿಗಳ ಖಳನಾಯಕರೇ ಹೀರೋಗಳಿಗಿಂತ ಅಟ್ರಾಕ್ಟಿವ್ ಆಂಡ್ ಹ್ಯಾಂಡ್‌ಸಮ್!

ಧಾರಾವಾಹಿಗಳ ಖಳನಾಯಕರೇ ಹೀರೋಗಳಿಗಿಂತ ಅಟ್ರಾಕ್ಟಿವ್ ಆಂಡ್ ಹ್ಯಾಂಡ್‌ಸಮ್!

ಕನ್ನಡ ಧಾರಾವಾಹಿಗಳಲ್ಲಿ ಖಳನಾಯಕರ ಪಾತ್ರಗಳು ಹೀರೋಗಳಿಗಿಂತ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಿವೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿವೆ. ಈ ಲೇಖನದಲ್ಲಿ ಕೆಲವು ಜನಪ್ರಿಯ ಧಾರಾವಾಹಿಗಳ ಖಳನಾಯಕರ ಬಗ್ಗೆ ಮಾಹಿತಿ ನೀಡಲಾಗಿದೆ.

1 Min read
Mahmad Rafik
Published : May 28 2025, 04:12 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Instagram

ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುವ ಸೀರಿಯಲ್‌ಗಳ ಹೀರೋಗಳಿಗಿಂತ ವಿಲನ್‌ಗಳೇ ಅಟ್ಯ್ರಾಕ್ಟಿವ್ ಆಗಿ ಕಾಣಿಸುತ್ತಾರೆ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿವೆ. ಧಾರಾವಾಹಿಯಲ್ಲಿ ಖಳನಾಯಕನಾಗಿ ವೀಕ್ಷಕರಿಂದ ಮೆಚ್ಚುಗೆ ಗಳಿಸಿರುವ ಆ ಕಲಾವಿದರು ಯಾರು ಎಂದು ನೋಡೋಣ ಬನ್ನಿ.

26
Image Credit : Instagram

1.ಶ್ರಾವಣಿ ಸುಬ್ರಮಣ್ಯ

ಝೀ ಕನ್ನಡ ಧಾರಾವಾಹಿಯಲ್ಲಿ ಪ್ರಸಾರವಾಗುವ ಶ್ರಾವಣಿ ಸುಬ್ರಮಣ್ಯದ ಕಥಾ ನಾಯಕನಾಗಿ ಅಮೋಘ ಆದಿತ್ಯನಾಗಿ ನಟಿಸುತ್ತಿದ್ದಾರೆ. ಸೀರಿಯಲ್‌ನಲ್ಲಿ ಮಧ್ಯಮ ಕುಟುಂಬದ ಯುವಕನಾಗಿ ಕಾಣಿಸಿಕೊಂಡಿರುವ ಅಮೋಘ, ತುಂಬಾನೇ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ. ಸೀರಿಯಲ್ ಹೊರತಾಗಿ ಅಮೋಘ ರಿಯಲ್ ಲೈಫ್‌ನಲ್ಲಿ ಸಖತ್ ಸ್ಟೈಲಿಶ್ ಆಗಿದ್ದಾರೆ. ಸತ್ಯ ಧಾರಾವಾಹಿಯಲ್ಲಿಯೂ ಸಿಂಪಲ್ ಹುಡುಗನಾಗಿಯೇ ನಟಿಸಿದ್ದರು.

36
Image Credit : Instagram

ಇದೇ ಸೀರಿಯಲ್‌ ನಲ್ಲಿ ಮದನ್ ಪಾತ್ರದಲ್ಲಿ ನಟಿಸುತ್ತಿರುವ ಕಲಾವಿದ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮದನ್ ಪಾತ್ರದಲ್ಲಿ ನಟಿಸುತ್ತಿರುವ ನಟನ ಹೆಸರು ಅಥರ್ವ್. ತಮ್ಮ ಖಡಕ್ ಲುಕ್ ಮತ್ತು ಡ್ರೆಸಿಂಗ್ ಸ್ಟೈಲ್‌ನಿಂದ ತಮ್ಮದೇ ಆದ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಗೌರಿ ಶಂಕರ್ ಮತ್ತು ರಜಿಯಾ ರಾಮ್ ಧಾರಾವಾಹಿಯಲ್ಲಿಯೂ ಅಥರ್ವ್ ನಟಿಸಿದ್ದಾರೆ. ಅರ್ಥವ್ ಅವರ ಫಾರ್ಮಲ್ ಲುಕ್ ನೋಡುಗರಿಗೆ ಇಷ್ಟವಾಗುತ್ತದೆ.

46
Image Credit : Instagram

2.ಅಮೃತಧಾರೆ

ಅಮೃತಧಾರೆಯ ಹೀರೋ ರಾಜೇಶ್ ನಟರಂಗ. ಮಧ್ಯವಯಸ್ಕನ ಪಾತ್ರದಲ್ಲಿ ರಾಜೇಶ್ ನಟಿಸುತ್ತಿದ್ದು, ಅವರೇ ಚಿತ್ರದ ನಾಯಕ. ರಾಜೇಶ್ ತೆರೆ ಮೇಲೆ ಸೂಟ್ ಮತ್ತು ಕುರ್ತಾ ಧರಿಸಿ ರಾಯಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಧಾರಾವಾಹಿಯ ನೆಗೆಟಿವ್ ರೋಲ್ ಜೈ ಪಾತ್ರದಲ್ಲಿ ನಟಿಸುತ್ತಿರುವ ಯುವ ನಟ ಎಲ್ಲರನ್ನು ಆಕರ್ಷಿಸುತ್ತಿದ್ದಾರೆ.

56
Image Credit : Ranav Gowda Instagram

ಜೈದೇವ್ ಪಾತ್ರಕ್ಕೆ ಜೀವ ತುಂಬಿದ ಹ್ಯಾಂಡ್‌ಸಮ್ ಹುಡುಗನ ಹೆಸರು ರಾಣವ್ ಗೌಡ. ಮಂಡ್ಯ ಮೂಲದ ರಾಣವ್ ಗೌಡ, ಬಾಲ ಕಲಾವಿದನಾಗಿ ಬಣ್ಣದ ಲೋಕಕ್ಕೆ ಬಂದವರು. ವಿರಾಟ್, ಮತ್ತೆ ಬಾ ಉಪೇಂದ್ರ, ಶ್ರೀಕಂಠ ಸಿನಿಮಾಗಳಲ್ಲಿಯೂ ರಾಣವ್ ನಟಿಸಿದ್ದಾರೆ

66
Image Credit : Instagram

3.ವಧು

ಕಲರ್ಸ್ ಕನ್ನಡ ಸೀರಿಯಲ್‌ನಲ್ಲಿ ನಾಯಕನಾಗಿ ನಟಿಸುತ್ತಿರುವ ಅಭಿಷೇಕ್ ಶ್ರೀಕಾಂತ್ ಸಹ ಖಳನಾಯಕನಾಗಿ ಬಣ್ಣ ಹಚ್ಚಿದ್ದರು. ಲಕ್ಷಣ ಧಾರಾವಾಹಿಯಲ್ಲಿ ಮೌರ್ಯನಾಗಿ ಅಭಿಷೇಕ್ ನಟಿಸಿದ್ರು. ಇದೀಗ ವಧು ಸೀರಿಯಲ್‌ನಲ್ಲಿ ಸಾರ್ಥಕ್ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಕನ್ನಡ ಧಾರಾವಾಹಿ
ಅಮೃತಧಾರೆ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved