40ನೇ ವರ್ಷದಲ್ಲಿ ಸನ್ಯಾಸ ತೊರೆದು ಗ್ರಹಸ್ಥರಾದ ಸ್ವಾಮಿಗಳ ಮಗಳು ಕಿರುತೆರೆಗೆ ಎಂಟ್ರಿ
40ನೇ ವಯಸ್ಸಲ್ಲಿ ಸನ್ಯಾಸತ್ವ ತೊರೆದು ಗ್ರಹಸ್ಥರಾದ ಸ್ವಾಮೀಜಿ ಮಗಳೀಕೆ | ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಪೀಠಾಧಿಪತಿಗಳಾಗಿದ್ದವರು ಶ್ರೀ ವಿದ್ಯಾಭೂಷಣ ತೀರ್ಥ ಸ್ವಾಮೀಜಿ ಮಗಳ ಕಿರುತೆರೆ ಎಂಟ್ರಿ

<p>ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಪೀಠಾಧಿಪತಿಗಳಾಗಿದ್ದ ಶ್ರೀ ವಿದ್ಯಾಭೂಷಣ ತೀರ್ಥ ಸ್ವಾಮೀಜಿ ನಲವತ್ತನೇ ವಯಸ್ಸಲ್ಲಿ ರಮಾ ಎಂಬವರನ್ನು ಪ್ರೀತಿಸಿ ಮದುವೆಯಾದರು. ಪ್ರೇಮ ಅವರನ್ನು ಅವರನ್ನು ಸನ್ಯಾಸದಿಂದ ಸಂಸಾರದತ್ತ ಕರೆದೊಯ್ಯಿತು.</p>
ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಪೀಠಾಧಿಪತಿಗಳಾಗಿದ್ದ ಶ್ರೀ ವಿದ್ಯಾಭೂಷಣ ತೀರ್ಥ ಸ್ವಾಮೀಜಿ ನಲವತ್ತನೇ ವಯಸ್ಸಲ್ಲಿ ರಮಾ ಎಂಬವರನ್ನು ಪ್ರೀತಿಸಿ ಮದುವೆಯಾದರು. ಪ್ರೇಮ ಅವರನ್ನು ಅವರನ್ನು ಸನ್ಯಾಸದಿಂದ ಸಂಸಾರದತ್ತ ಕರೆದೊಯ್ಯಿತು.
<p>ವಿದ್ಯಾಭೂಷಣರ ಮಗಳು ಮೇಧಾ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.</p>
ವಿದ್ಯಾಭೂಷಣರ ಮಗಳು ಮೇಧಾ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.
<p>ಇದೀಗ ಅವರ ಮಗಳು ಟಿಎನ್ ಸೀತಾರಾಮ್ ನಿರ್ದೇಶನದಲ್ಲಿ ನಟಿಸಲಿದ್ದಾರೆ.</p>
ಇದೀಗ ಅವರ ಮಗಳು ಟಿಎನ್ ಸೀತಾರಾಮ್ ನಿರ್ದೇಶನದಲ್ಲಿ ನಟಿಸಲಿದ್ದಾರೆ.
<p>ಮೇಧಾ ಹಿರಣ್ಮಯಿ ಅಥವಾ ಮೇಧಾ ವಿದ್ಯಾಭೂಷಣ ಟಿ ಎನ್ ಸೀತಾರಾಂ ಕಣ್ಣಿಗೆ ಬಿದ್ದದ್ದು ಆಕಸ್ಮಿಕವಾಗಿ. ಒಬ್ಬ ಕಾಮನ್ ಫ್ರೆಂಡ್ ಮೂಲಕ.</p>
ಮೇಧಾ ಹಿರಣ್ಮಯಿ ಅಥವಾ ಮೇಧಾ ವಿದ್ಯಾಭೂಷಣ ಟಿ ಎನ್ ಸೀತಾರಾಂ ಕಣ್ಣಿಗೆ ಬಿದ್ದದ್ದು ಆಕಸ್ಮಿಕವಾಗಿ. ಒಬ್ಬ ಕಾಮನ್ ಫ್ರೆಂಡ್ ಮೂಲಕ.
<p>ಟಿ ಎನ್ ಸೀತಾರಾಮ್ ಅವರ ವಿಶೇಷ ಗುಣ ಅಂದರೆ ಅವರ ಅಬ್ಸರ್ವೇಶನ್. ಎದುರಿಗಿರುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಸೂಕ್ಷ್ಮವಾಗಿ ನೋಡಿ ಅವರಿಂದ ಪಾತ್ರ ತೆಗೆಸಬಹುದಾ ಅಂತ ಅವರು ಗಮನಿಸುತ್ತಲೇ ಇರುತ್ತಾರಂತೆ.</p>
ಟಿ ಎನ್ ಸೀತಾರಾಮ್ ಅವರ ವಿಶೇಷ ಗುಣ ಅಂದರೆ ಅವರ ಅಬ್ಸರ್ವೇಶನ್. ಎದುರಿಗಿರುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಸೂಕ್ಷ್ಮವಾಗಿ ನೋಡಿ ಅವರಿಂದ ಪಾತ್ರ ತೆಗೆಸಬಹುದಾ ಅಂತ ಅವರು ಗಮನಿಸುತ್ತಲೇ ಇರುತ್ತಾರಂತೆ.
<p>ಮತ್ತೆ ಮನ್ವಂತರ ಎಂಬ ಹೊಸ ಸೀರಿಯಲ್ ಮಾಡುವ ಹೊತ್ತಿಗೆ ಅವರಿಗೆ ಕಾಮನ್ ಫ್ರೆಂಡ್ ಮೂಲಕ ಪರಿಚಯವಾದ ವಿದ್ಯಾಭೂಷಣ ಹಾಗೂ ರಮಾ ಅವರ ಮಗಳು ಮೇಧಾ ನೆನಪಾಗುತ್ತಾರೆ.</p>
ಮತ್ತೆ ಮನ್ವಂತರ ಎಂಬ ಹೊಸ ಸೀರಿಯಲ್ ಮಾಡುವ ಹೊತ್ತಿಗೆ ಅವರಿಗೆ ಕಾಮನ್ ಫ್ರೆಂಡ್ ಮೂಲಕ ಪರಿಚಯವಾದ ವಿದ್ಯಾಭೂಷಣ ಹಾಗೂ ರಮಾ ಅವರ ಮಗಳು ಮೇಧಾ ನೆನಪಾಗುತ್ತಾರೆ.
<p>ಈ ಸೀರಿಯಲ್ ಸಂಗೀತ ಹಾಗೂ ಸ್ಪೋರ್ಟ್ಸ್ ಮೇಲೆ ಕೇಂದ್ರೀಕೃತವಾಗಿರುವ ಕಾರಣ ಈ ಎರಡು ಫೀಲ್ಡ್ ಬಗ್ಗೆ ತಿಳುವಳಿಕೆಯುಳ್ಳ ಮೇಧಾನೇ ನಾಯಕಿ ಪಾತ್ರಕ್ಕೆ ಬೆಸ್ಟ್ ಅನ್ನೋ ಅಭಿಪ್ರಾಯಕ್ಕೆ ಸೀತಾರಾಂ ಬರುತ್ತಾರೆ.</p>
ಈ ಸೀರಿಯಲ್ ಸಂಗೀತ ಹಾಗೂ ಸ್ಪೋರ್ಟ್ಸ್ ಮೇಲೆ ಕೇಂದ್ರೀಕೃತವಾಗಿರುವ ಕಾರಣ ಈ ಎರಡು ಫೀಲ್ಡ್ ಬಗ್ಗೆ ತಿಳುವಳಿಕೆಯುಳ್ಳ ಮೇಧಾನೇ ನಾಯಕಿ ಪಾತ್ರಕ್ಕೆ ಬೆಸ್ಟ್ ಅನ್ನೋ ಅಭಿಪ್ರಾಯಕ್ಕೆ ಸೀತಾರಾಂ ಬರುತ್ತಾರೆ.
<p>ಅಚಾನಕ್ ಆಗಿ ಬಂದಿರೋ ಈ ಅವಕಾಶ ಕಂಡು ಮೇಧಾಗೆ ಆರಂಭದಲ್ಲಿ ಕೊಂಚ ಭಯ ಗೊಂದಲ ಉಂಟಾಗುತ್ತೆ. ಏಕೆಂದರೆ ಮೇಧಾ ಚಿಕ್ಕ ವಯಸ್ಸಿಂದಲೇ ಟಿಎನ್ ಎಸ್ ಅವರ ಮುಕ್ತದಂಥಾ ಸೀರಿಯಲ್ ನೋಡಿ ಬೆಳದವರು.</p>
ಅಚಾನಕ್ ಆಗಿ ಬಂದಿರೋ ಈ ಅವಕಾಶ ಕಂಡು ಮೇಧಾಗೆ ಆರಂಭದಲ್ಲಿ ಕೊಂಚ ಭಯ ಗೊಂದಲ ಉಂಟಾಗುತ್ತೆ. ಏಕೆಂದರೆ ಮೇಧಾ ಚಿಕ್ಕ ವಯಸ್ಸಿಂದಲೇ ಟಿಎನ್ ಎಸ್ ಅವರ ಮುಕ್ತದಂಥಾ ಸೀರಿಯಲ್ ನೋಡಿ ಬೆಳದವರು.
<p>ಅಂಥಾ ದೊಡ್ಡ ನಿರ್ದೇಶಕರ ಸೀರಿಯಲ್ನಲ್ಲಿ ಅಭಿನಯಿಸೋದು ತನ್ನಿಂದ ಸಾಧ್ಯವಾ ಎಂಬ ಗೊಂದಲವದು. ಆದರೆ ತಂದೆ ವಿದ್ಯಾಭೂಷಣ ಅವರು ಮಗಳ ಗೊಂದಲ ಬಗೆಹರಿಸುತ್ತಾರೆ. ಮಗಳು ಟಿ ಎನ್ ಎಸ್ ಸೀರಿಯಲ್ಗೆ ನಾಯಕಿಯಾಗುತ್ತಿರುವುದವರ ಬಗ್ಗೆ ಬಹಳ ಖುಷಿ ಪಡುತ್ತಾರೆ.</p>
ಅಂಥಾ ದೊಡ್ಡ ನಿರ್ದೇಶಕರ ಸೀರಿಯಲ್ನಲ್ಲಿ ಅಭಿನಯಿಸೋದು ತನ್ನಿಂದ ಸಾಧ್ಯವಾ ಎಂಬ ಗೊಂದಲವದು. ಆದರೆ ತಂದೆ ವಿದ್ಯಾಭೂಷಣ ಅವರು ಮಗಳ ಗೊಂದಲ ಬಗೆಹರಿಸುತ್ತಾರೆ. ಮಗಳು ಟಿ ಎನ್ ಎಸ್ ಸೀರಿಯಲ್ಗೆ ನಾಯಕಿಯಾಗುತ್ತಿರುವುದವರ ಬಗ್ಗೆ ಬಹಳ ಖುಷಿ ಪಡುತ್ತಾರೆ.
<p>ಇನ್ನು ಮೇಧಾ ವಿಚಾರಕ್ಕೆ ಬಂದರೆ ಈಕೆ ತಂದೆಯಂತೆ ಬಾಲ್ಯದಿಂದಲೇ ಸಂಗೀತದತ್ತ ಆಕರ್ಷಿತರಾದವರು. ಈಗ ಸಂಗೀತದ ವಿದುಷಿ ಆಗಿದ್ದಾರೆ. ಅನೇಕ ಕಡೆ ಸಂಗೀತ ಕಛೇರಿಯನ್ನೂ ನೀಡಿದ್ದಾರೆ.</p>
ಇನ್ನು ಮೇಧಾ ವಿಚಾರಕ್ಕೆ ಬಂದರೆ ಈಕೆ ತಂದೆಯಂತೆ ಬಾಲ್ಯದಿಂದಲೇ ಸಂಗೀತದತ್ತ ಆಕರ್ಷಿತರಾದವರು. ಈಗ ಸಂಗೀತದ ವಿದುಷಿ ಆಗಿದ್ದಾರೆ. ಅನೇಕ ಕಡೆ ಸಂಗೀತ ಕಛೇರಿಯನ್ನೂ ನೀಡಿದ್ದಾರೆ.
<p>ಇವರು ಹಾಡಿರುವ ದಾಸರ ಪದಗಳು ಸಿಡಿಯಾಗಿ ಹೊರಬಂದು ಸಾಕಷ್ಟು ಮಾರಾಟ ಕಂಡಿವೆ. ಇದರ ಜೊತೆಗೆ ನಾಟಕಗಳಲ್ಲೂ ಅಭಿನಯಿಸಿದ್ದಾರೆ.</p>
ಇವರು ಹಾಡಿರುವ ದಾಸರ ಪದಗಳು ಸಿಡಿಯಾಗಿ ಹೊರಬಂದು ಸಾಕಷ್ಟು ಮಾರಾಟ ಕಂಡಿವೆ. ಇದರ ಜೊತೆಗೆ ನಾಟಕಗಳಲ್ಲೂ ಅಭಿನಯಿಸಿದ್ದಾರೆ.
<p>ನಾಟಕವೊಂದರಲ್ಲಿ ಇವರ ದ್ರೌಪದಿ ಪಾತ್ರ ಬಹಳ ಗಮನ ಸೆಳೆದಿತ್ತು. ಪ್ರಸ್ತುತ ಪಿಇಎಸ್ ಇಂಜಿನಿಯರಿಂಗ್ ಕಾಲೇಜ್ನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾರೆ.</p>
ನಾಟಕವೊಂದರಲ್ಲಿ ಇವರ ದ್ರೌಪದಿ ಪಾತ್ರ ಬಹಳ ಗಮನ ಸೆಳೆದಿತ್ತು. ಪ್ರಸ್ತುತ ಪಿಇಎಸ್ ಇಂಜಿನಿಯರಿಂಗ್ ಕಾಲೇಜ್ನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾರೆ.
<p>ಇದರ ಜೊತೆಗೆ ಡ್ಯಾನ್ಸ್ ಮೂಲಕವೂ ಗುರುತಿಸಿಕೊಂಡಿದ್ದಾರೆ. ಅಣ್ಣ ಅನಿರುದ್ಧ್ ಕ್ಯಾಮರಾಗೆ ಈಕೆಯೇ ಮಾಡೆಲ್. ತಂದೆ ಅಪ್ಪಟ ಸಂಪ್ರದಾಯಸ್ಥರಾಗಿದ್ದರೆ, ಮಗಳು ಈ ಕಾಲದ ಹುಡುಗಿಯಾಗಿ ಬೆಳೆದಿದ್ದಾರೆ</p>
ಇದರ ಜೊತೆಗೆ ಡ್ಯಾನ್ಸ್ ಮೂಲಕವೂ ಗುರುತಿಸಿಕೊಂಡಿದ್ದಾರೆ. ಅಣ್ಣ ಅನಿರುದ್ಧ್ ಕ್ಯಾಮರಾಗೆ ಈಕೆಯೇ ಮಾಡೆಲ್. ತಂದೆ ಅಪ್ಪಟ ಸಂಪ್ರದಾಯಸ್ಥರಾಗಿದ್ದರೆ, ಮಗಳು ಈ ಕಾಲದ ಹುಡುಗಿಯಾಗಿ ಬೆಳೆದಿದ್ದಾರೆ
<p>ಇದೀಗ ಕಿರುತೆರೆಯಲ್ಲಿ ಅದರಲ್ಲೂ ಟಿ ಎನ್ ಸೀತಾರಾಂ ಅವರಂಥ ಪ್ರತಿಭಾವಂತ ನಿರ್ದೇಶಕರ ಜೊತೆಗೆ ನಟಿಸಲು ಮೇಧಾಗೆ ಖುಷಿ ಇದೆ.</p>
ಇದೀಗ ಕಿರುತೆರೆಯಲ್ಲಿ ಅದರಲ್ಲೂ ಟಿ ಎನ್ ಸೀತಾರಾಂ ಅವರಂಥ ಪ್ರತಿಭಾವಂತ ನಿರ್ದೇಶಕರ ಜೊತೆಗೆ ನಟಿಸಲು ಮೇಧಾಗೆ ಖುಷಿ ಇದೆ.
<p>ತಂದೆ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಂತೆ ಮಗಳು ನಟನಾ ಕ್ಷೇತ್ರದಲ್ಲಿ ಹೆಸರು ಮಾಡಲಿ ಅಂತ ಜನ ಹಾರೈಯಿಸುತ್ತಿದ್ದಾರೆ. ಆದರೆ ಸೀರಿಯಲ್ನಲ್ಲಿ ಗುರುತಿಸಿಕೊಂಡರೂ ಸಂಗೀತ ಮತ್ತು ಓದನ್ನು ನಿಲ್ಲಿಸೋದಿಲ್ಲ ಅಂದಿದ್ದಾರೆ ಮೇಧಾ.</p>
ತಂದೆ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಂತೆ ಮಗಳು ನಟನಾ ಕ್ಷೇತ್ರದಲ್ಲಿ ಹೆಸರು ಮಾಡಲಿ ಅಂತ ಜನ ಹಾರೈಯಿಸುತ್ತಿದ್ದಾರೆ. ಆದರೆ ಸೀರಿಯಲ್ನಲ್ಲಿ ಗುರುತಿಸಿಕೊಂಡರೂ ಸಂಗೀತ ಮತ್ತು ಓದನ್ನು ನಿಲ್ಲಿಸೋದಿಲ್ಲ ಅಂದಿದ್ದಾರೆ ಮೇಧಾ.
<p>ಸುಮಾರು ಇಪ್ಪತ್ತ ನಾಲ್ಕು ವರ್ಷಗಳ ಪೀಠ ತ್ಯಾಗ ಮಾಡಿ ಮೇಧಾ ತಂದೆ ಗ್ರಹಸ್ಥಾಶ್ರಮ ಸ್ವೀಕರಿಸಿದ್ದರು. ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದ್ದ ಈ ಘಟನೆ ಬಗ್ಗೆ ತೀವ್ರತರ ಚರ್ಚೆಗಳೂ ನಡೆದಿದ್ದವು.</p>
ಸುಮಾರು ಇಪ್ಪತ್ತ ನಾಲ್ಕು ವರ್ಷಗಳ ಪೀಠ ತ್ಯಾಗ ಮಾಡಿ ಮೇಧಾ ತಂದೆ ಗ್ರಹಸ್ಥಾಶ್ರಮ ಸ್ವೀಕರಿಸಿದ್ದರು. ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದ್ದ ಈ ಘಟನೆ ಬಗ್ಗೆ ತೀವ್ರತರ ಚರ್ಚೆಗಳೂ ನಡೆದಿದ್ದವು.
<p>ಸಂಸಾರ ಆರಂಭಿಸಿದ ಬಳಿಕವೂ ವಿದ್ಯಾಭೂಷಣರ ಆಧ್ಯಾತ್ಮಿಕ ಸೆಳೆತ ಕಡಿಮೆಯಾಗಲಿಲ್ಲ. <br />ಸಂಸಾರವನ್ನೂ ಆಧ್ಯಾತ್ಮವನ್ನೂ ಜೊತೆ ಜೊತೆಗೆ ಬದುಕಿದವರು ಅವರು. ಕೆಲವು ವರ್ಷಗಳ ಹಿಂದೆ ಅವರ ಆತ್ಮಕಥೆ 'ಒಲಿದಂತೆ ಹಾಡುವೆ' ಬಿಡುಗಡೆಯಾಯ್ತು.</p>
ಸಂಸಾರ ಆರಂಭಿಸಿದ ಬಳಿಕವೂ ವಿದ್ಯಾಭೂಷಣರ ಆಧ್ಯಾತ್ಮಿಕ ಸೆಳೆತ ಕಡಿಮೆಯಾಗಲಿಲ್ಲ.
ಸಂಸಾರವನ್ನೂ ಆಧ್ಯಾತ್ಮವನ್ನೂ ಜೊತೆ ಜೊತೆಗೆ ಬದುಕಿದವರು ಅವರು. ಕೆಲವು ವರ್ಷಗಳ ಹಿಂದೆ ಅವರ ಆತ್ಮಕಥೆ 'ಒಲಿದಂತೆ ಹಾಡುವೆ' ಬಿಡುಗಡೆಯಾಯ್ತು.
<p>ಅದರಲ್ಲಿ ಅವರು ತಮ್ಮ ಇಡೀ ಬದುಕಿನ ವಿವರಗಳನ್ನು ದಾಖಲಿಸಿದ್ದಾರೆ. ವಿದ್ಯಾಭೂಷಣರಿಗೆ ಇಬ್ಬರು ಮಕ್ಕಳು ಮಗಳು ಮೇಧಾ ಹಿರಣ್ಮಯಿ. ಮಗ ಅನಿರುದ್ಧ್.</p>
ಅದರಲ್ಲಿ ಅವರು ತಮ್ಮ ಇಡೀ ಬದುಕಿನ ವಿವರಗಳನ್ನು ದಾಖಲಿಸಿದ್ದಾರೆ. ವಿದ್ಯಾಭೂಷಣರಿಗೆ ಇಬ್ಬರು ಮಕ್ಕಳು ಮಗಳು ಮೇಧಾ ಹಿರಣ್ಮಯಿ. ಮಗ ಅನಿರುದ್ಧ್.
<p>ಮೇಧಾ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡರೆ ಅನಿರುದ್ಧ್ ವಿದ್ಯಾಭೂಷಣ ಕ್ರಿಕೆಟ್, ಫ್ರೊಟೋಗ್ರಫಿಯಂಥ ಹವ್ಯಾಸಗಳಿಂದ ಗಮನ ಸೆಳೆಯುತ್ತಾರೆ.</p>
ಮೇಧಾ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡರೆ ಅನಿರುದ್ಧ್ ವಿದ್ಯಾಭೂಷಣ ಕ್ರಿಕೆಟ್, ಫ್ರೊಟೋಗ್ರಫಿಯಂಥ ಹವ್ಯಾಸಗಳಿಂದ ಗಮನ ಸೆಳೆಯುತ್ತಾರೆ.