ಯಶಸ್ಸಿಗಾಗಿ ಇನ್ನೊಬ್ಬರ ಅನುಕರಿಸಬೇಡಿ, ತಪ್ಪು ತಿದ್ದಿ ಕೊಳ್ಳಬೇಕು: ಅನುಪಮಾ ಗೌಡ
ಬ್ಯಾಕ್ ಟು ಬ್ಯಾಕ್ ಶೋ ನಿರೂಪಣೆ ಮಾಡುತ್ತಿರುವ ಅನುಪಮಾ ಗೌಡ. ನಿರೂಪಣೆ ಬಗ್ಗೆ ಕೊಟ್ಟ ಸಲಹೆ ಏನುಉ ಗೊತ್ತಾ?

ಮಜಾ ಭಾರತ, ರಾಜಾ ರಾಣಿ ಮತ್ತು ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ನಿರೂಪಣೆ ಮಾಡಿದ ಸೈ ಎನಿಸಿಕೊಂಡಿರುವ ಅನುಪಮಾ ಈಗ ಜಾಕ್ಪಾಟ್ ಕಾರ್ಯಕ್ರಮದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.
ಯಶಸ್ವಿ ನಿರೂಪಕರಿಗೆ ಇರಬೇಕಾದ ಗುಣಗಳು ಏನೆಂದು ಖಾಸಗಿ ಮಾಧ್ಯಮದಲ್ಲಿ ಪ್ರಶ್ನೆ ಮಾಡಿದಾಗ ಅನುಪಮಾ ತುಂಬಾ ಸಿಂಪಲ್ ಮತ್ತು ಕ್ಲಿಯರ್ ಆಗಿ ಉತ್ತರ ಕೊಟ್ಟಿದ್ದಾರೆ.
'ಯಶಸ್ಸಿಗಾಗಿ ಇನ್ನಪಬ್ಬರನ್ನು ಅನುಕರಿಸಬಾರದು. ಸ್ವಂತಿಕೆ, ನೈಜ ಸ್ವಭಾವ ನಿರೂಪಕರಿಗೆ ಬಹಳ ಮುಖ್ಯ. ಸಮರ್ಪಣಾ ಭಾವನೆ ಇರಬೇಕು' ಎಂದು ಅನುಪಮಾ ಹೇಳಿದ್ದಾರೆ.
'ನಿರೂಪಣೆಯಲ್ಲಿ ಪ್ರೇಕ್ಷಕರು ಗುರುತಿಸುವ ತಪ್ಪುಗಳನ್ನು ನಾವು ಸರಿ ಪಡಿಸಿಕೊಳ್ಳಬೇಕು. ಅದನ್ನು ನಾನು ಕೂಡ ಅನುಸರಿಸಿದ್ದೇನೆ' ಎಂದಿದ್ದಾರೆ ಅನುಪಮಾ.
'ಎಲ್ಲರಿಗೂ ಕಲಾವಿದರಾಗುವಾ ಅದೃಷ್ಟ ಇರುವುದಿಲ್ಲ. ಆ ಅದೃಷ್ಟ ನನ್ನ ಪಾಲಿಗೆ ಒಲಿದಿದೆ. ನಿರೂಪಣೆಗಿಂತ ನನಗೆ ನಟನೆ ಬಹಳ ಇಷ್ಟ'
'ಕನ್ನಡ ಸಿನಿಮಾ ಮತ್ತು ಧಾರಾವಾಹಿಗಳಿಂದ ಮುಂದೆ ಉತ್ತಮ ಅವಕಾಶ ಬಂದರೆ ಖಂಡಿತಾ ನಟಿಸುತ್ತೇನೆ. ನನ್ನಲ್ಲಿರುವ ನಟನಾ ಕೌಶಲವನ್ನು ಸುಮ್ಮನೆ ಕೂರಲು ಬಿಡುವುದಿಲ್ಲ' ಎಂದಿದ್ದಾರೆ.
ಬಿಗ್ ಬಾಸ್ ರಿಯಾಲಿಟಿ ಶೋ ಮತ್ತು ಯುಟ್ಯೂಬ್ ಚಾನೆಲ್ ಆರಂಭಿಸಿದ ನಂತರ ಅನುಪಮಾ ಗೌಡ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.