ಡಾ.ವಿಠಲ ರಾವ್ ಫೇಮಸ್ ಇನ್ ಸರ್ಜರಿಗೆ ಭರ್ಜರಿ ರೆಸ್ಪಾನ್ಸ್..
'ರಾಮಾಯಣ' 'ಮಹಾಭಾರತ' ಆದಿಯಾಗಿ ಮೂರು ದಶಕಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಬಹುತೇಕ ಧಾರಾವಾಹಿಗಳು ಮರು ಪ್ರಸಾರವಾಗುತ್ತಿದೆ. ಮನೆಯಲ್ಲಿಯೇ ಕಾಲ ಕಳೆಯುತ್ತಿರುವ ಭಾರತೀಯರು ಗತಕಾಲದ ವೈಭವದ ಮೆಲಕು ಹಾಕುತ್ತಿದ್ದಾರೆ. ಆ ಮೂಲಕ ರಿಲ್ಯಾಕ್ಸ್ ಆಗುತ್ತಿದ್ದಾರೆ ಕೂಡ. ಇದೇ ರೀತಿ ಕನ್ನಡದಲ್ಲಿ ಅತ್ಯಂತ ಜನಪ್ರಿಯವಾಗಿದ್ದು, ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ, ಸಿಹಿ ಕಹಿ ಚಂದ್ರು ನಿರ್ದೇಶನದ ಸಿಲ್ಲಿ ಲಲ್ಲಿಯೂ ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 10ಕ್ಕೆ ಮರು ಪ್ರಸಾರವಾಗುತ್ತಿದೆ. ಮತ್ತೊಂದು ಸಿಲ್ಲಿ ಲಲ್ಲಿ, ಮತ್ತೊಂದು ಪಾಪ ಪಾಂಡು ಬಂದಿದೆಯಾದರೂ, ಮೊದ ಮೊದಲು ಪ್ರಸಾರವಾದ ಈ ಸೀರಿಯಲ್ಸ್ ಮುಂದೆ ಎಲ್ಲವೂ ಸಪ್ಪೆ ಎನಿಸುತ್ತಿದೆ. ಈ ಸೀರಿಯಲ್ಗೆ ಸೋಷಿಯಲ್ಲಿ ಮೀಡಿಯಾದಲ್ಲಿ ಭರ್ಜರಿ ರೆಸ್ಪಾನ್ಸ್ ಕೂಡ ಸಿಗುತ್ತಿದೆ.
ಕಲರ್ಸ್ ಕನ್ನಡದಲ್ಲಿ ಸಿಲ್ಲಿ ಲಲ್ಲಿ ಮರು ಪ್ರಸಾರವಾಗುತ್ತಿದ್ದು, ವೀಕ್ಷಕರು ಫುಲ್ ಖುಷಿಯಾಗಿದ್ದಾರೆ. ಈ ಧಾರಾವಾಹಿಯಲ್ಲಿ ಬರುವ ಕೆಲವು ಪಾತ್ರಗಳ ಪರಿಚಯವಿಲ್ಲಿದೆ.
ಪ್ರಸಾರ ಆರಂಭಿಸಿ ವಾರದಲ್ಲೇ ಮೂರು ಕೋಟಿಗೂ ಹೆಚ್ಚು ವೀಕ್ಷಣೆಯಾಗಿದ್ದು, ಇದಕ್ಕೆ ಡಾ.ವಿಠಲ್ ರಾವ್ ಪಾತ್ರಧಾರಿ ಥ್ಯಾಂಕ್ಸ್ ಹೇಳಿದ್ದಾರೆ. ಈ ಧಾರವಾಹಿಯಲ್ಲಿ ಡಾ.ವಿಠಲ್ ರಾವ್, ಸಮಾಜ ಸೇವಕಿ ಲಲಿತಾಂಬಾ, ಕಥಾ ಲೇಖಕಿ ಶ್ರೀಲತಾ, ರಂಗ, ಲಲ್ಲಿ, ಪಲ್ಲಿ...ಹೀಗೆ ಪ್ರತಿಯೊಂದು ಪಾತ್ರಗಳಿಗೂ ತನ್ನದೇ ವಿಶೇಷತೆ ಇವೆ.
ಸಮಾಜ ಸೇವಕಿ ಲಲಿತಾಂಬಾ. ಡಾ. ವಿಠಲ ರಾವ್ ಪತ್ನಿ. ಡಾ. ವಿಠಲ ರಾವ್ ತಂಗಿ, ಡಾಕ್ಟರಿಗೊಬ್ಬ ಅಸಿಸ್ಟೆಂಟ್ ಈ ಸೀರಿಯಲ್ ಇತರೆ ಪಾತ್ರಗಳು.
ಮಂಜು ಭಾಷಿಣಿ, ರವಿಶಂಕರ್ ಗೌಡ, ರೂಪಾ ಪ್ರಭಾಕರ್, ಪ್ರಶಾಂತ್, ಶ್ರೀನಿವಾಸ್ ಗೌಡ ಮತ್ತು ಸುನೇತ್ರಾ ಪಂಡಿತ್ ಕಲಾವಿದರು ಅದ್ಭುತವಾಗಿ ಅಭಿನಯಿಸಿದ್ದಾರೆ.
ಮಂಜು ಭಾಷಿಣಿ, ರವಿಶಂಕರ್ ಗೌಡ, ರೂಪಾ ಪ್ರಭಾಕರ್, ಪ್ರಶಾಂತ್, ಶ್ರೀನಿವಾಸ್ ಗೌಡ ಮತ್ತು ಸುನೇತ್ರಾ ಪಂಡಿತ್ ಕಲಾವಿದರು ಅದ್ಭುತವಾಗಿ ಅಭಿನಯಿಸಿದ್ದಾರೆ. ಡಾ. ವಿಠಲ ರಾವ್ ಮ್ಯಾನರಿಸಂಗೆ ಫಿದಾ ಆಗದವರೇ ಇಲ್ಲ.
ಡಾ. ವಿಠಲ ರಾವ್ ಕುಟುಂಬದಲ್ಲಿ ಉದ್ಭವಿಸುವ ವಿವಿಧ ಸಮಸ್ಯೆಗಳನ್ನು ವಿಡಂಬಾತ್ಮಕವಾಗಿ ಬಗೆ ಹರಿಸುವ ಕಥೆ, ಎಲ್ಲರನ್ನೂ ನಕ್ಕು ನಗಿಸುತ್ತಿದೆ.
ಮಕ್ಕಳಿದ್ದಾಗ ಈ ಸೀರಿಯಲ್ ನೋಡಿದವರು ಇದೀಗ ಮತ್ತೆ ನೋಡುತ್ತಿರುವುದಕ್ಕೆ ಖುಷಿಯಾಗಿದೆ ಎಂದು ರವಿ ಶಂಕರ್ ಅವರಿಗೆ ಟ್ವೀಟ್ ಮೂಲಕ ಅಭಿನಂದನೆ ತಿಳಿಸಿದ್ದಾರೆ. ನಂಬಿ ಪ್ಲೀಸ್ ನಾನು ಸಮಾಜಿ ಸೇವಕಿ ಲಲಿತಾಂಬ ಅಭಿನಯನವೂ ಅದ್ಭುತ.
ಅನೇಕರು ಸಿಲ್ಲಿ ಲಲ್ಲಿ ನೋಡುತ್ತಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ತಮ್ಮ ಸಂತೋಷ ವ್ಯಕ್ತಪಡಿಸಿದ್ದಾರೆ.