ತೆಲುಗಲ್ಲಿ ಹೆಸರು ಮಾಡಿದ್ದ ಕನ್ನಡತಿಗೆ ಕೊರೋನಾ, ಬೇಗ ಗುಣಮುಖವಾಗಲಿ ಹಾರೈಸೋಣ
ತೆಲುಗಿನಲ್ಲಿ ಹೆಸರು ಮಾಡಿರುವ ಮೈಸೂರು ಮೂಲ್ ಬೆಡಗಿ ನವ್ಯಾ ಸ್ವಾಮಿ ಅವರಿಗೆ ಕೊರೋನಾ ಇರುವುದು ದೃಢವಾಗಿದೆ. ಚಿತ್ರೀಕರಣಕ್ಕೆ ಸರ್ಕಾರಗಳು ಅವಕಾಶ ನೀಡಿದ ಮೇಲೆ ಶೂಟಿಂಗ್ ನಲ್ಲಿ ಭಾಗವಹಿಸಿದ್ದರು.
ತೆಲಂಗಾಣ ಸರ್ಕಾರ ಜೂನ್ 15 ರಿಂದ ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ನೀಡಿತ್ತು.
'ನಾ ಪೇರು ಮೀನಾಕ್ಷಿ' ಧಾರಾವಾಹಿ ಮೂಲಕ ಮನೆಮಾತಾಗಿರುವ ನಟಿ, ಧಾರಾವಾಹಿಯ ಚಿತ್ರೀಕರಣದ ವೇಳೆಯೇ ಕೊರೋನಾ ವೈರಸ್ ಸೋಂಕಿತರ ಜತೆ ಸಂಪರ್ಕಕ್ಕೆ ಬಂದಿದ್ದಾರೆ ಎಂಬ ಮಾಹಿತಿ ಇದೆ.
ತಲೆನೋವು, ಶೀತ ಸಮಸ್ಯೆ ಎದುರಿಸುತ್ತಿದ್ದ ನಟಿ ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದರು.
ಫಲಿತಾಂಶವು ಪಾಸಿಟಿವ್ ಬಂದಿದ್ದು, ನಟಿ ಸ್ವಯಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಹಾಗೆಯೇ ನಟಿಯೊಂದಿಗೆ ಶೂಟಿಂಗ್ ವೇಳೆ ಸಂಪರ್ಕದಲ್ಲಿದ್ದವರನ್ನು ಪ್ರತ್ಯೇಕವಾಗಿ ಇರುವಂತೆ ಸೂಚಿಸಲಾಗಿದೆ.
ಮೈಸೂರು ಮೂಲದ ನಟಿ ಕನ್ನಡದ ಲಕುಮಿ, ತಂಗಾಳಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು.
ತಮಿಳು, ತೆಲುಗಿನಲ್ಲಿ ಅವಕಾಶ ಗಿಟ್ಟಿಸಿಕೊಂಡು ವಾಣಿ ರಾಣಿ, 'ನಾ ಪೇರು ಮೀನಾಕ್ಷಿ' ಮೂಲಕ ತಮಿಳು- ತೆಲುಗುಗಿನಲ್ಲಿಯೂ ಪ್ರತಿಭೆ ಅನಾವರಣ ಮಾಡಿದ್ದರು.
ನಟಿಯ ಜತೆ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದವರಿಗೂ ಎಚ್ಚರಿಕೆ ನೀಡಲಾಗಿದೆ.
ಹೊರ ರಾಜ್ಯಗಳಲ್ಲಿಯೂ ಪ್ರತಿಭೆ ಅನಾವರಣ ಮಾಡಿರುವ ನಟಿ ಆದಷ್ಟು ಬೇಗ ಗುಣಮುಖರಾಗಿ ಹೊರಬಲಿ ಎನ್ನುವುದೇ ಆಶಯ.