ಅವಳು ಹಾಗೆ ಸುಖ ಕಂಡಾಳ ಎಂದುಬಿಟ್ಟರು, ಪ್ರೀತಿ ಪ್ರೇಮಾ ಚಟಕ್ಕೆ ಮಾಡಬೇಡಿ: ಪತ್ನಿ ಬಗ್ಗೆ ಸಂಜು ಬಸಯ್ಯ
ಗಿಡ್ಡ ಇರುವುದಕ್ಕೆ ಯಾವ ರೀತಿ ಅವಮಾನಗಳನ್ನು ಎದುರಿಸಿದರು ಎಂದು ಬೇಸರ ಮಾಡಿಕೊಂಡ ಸಂಜು ಬಸಯ್ಯ ..
ಕುಳ್ಳಗಿದ್ದರೂ ನಮಗೆ ಹೆಮ್ಮೆ ತಂದ ಅಂತ ಖುಷಿ ಆಯ್ತು. ಮಾತನಾಡುತ್ತಿದ್ದ ಜನರ ಬಾಯಿಗೆ ಈಗ ಹೊಡೆದ ಹಾಗೆ ಆಗಿದೆ' ಎಂದು ಸಂಜು ಬಸಯ್ಯ ತಾಯಿ ಕಣ್ಣೀರಿಟ್ಟಿರು.
ಸಂಜುನ ಯಾಕೆ ಹೆತ್ತೆ? ಗಿಡ್ಡ ಯಾಕೆ ಬೇಕು? ಕೊಂದು ಸಾಯಿಸಿಬಿಡು ಇವನಿಂದ ಏನು ಉಪಯೋಗ ಇದೆ? ನಿಮಗೆ ಏನು ತಂದು ಹಾಕುತ್ತಾನೆಂದು ಇವನನ್ನು ಹೆತ್ತೆ ದೊಡ್ಡವನಿದ್ದಾನಲ್ಲ ಅವನಿಂದ ಜೀವನ ಮಾಡಿಕೊಳ್ಳಿ ಇವನ್ನು ಕೊಂಡು ಹಾಕು ಅಂತಿದ್ದರು ಜನರು.
ಇವತ್ತು ಒಂದು ಹಂತಕ್ಕೆ ಬಂದಿದ್ದೇವೆ ಇವತ್ತು ಹಾಗೆಲ್ಲಾ ಮಾತನಾಡಿದ ಜನರೇ ನಮಗೆ ಕೈ ಮುಗಿದು ಹೇಗಿದ್ದೀರಾ ಅಪ್ಪಾಜಿ ಎಂದು ಕೇಳ್ತಾರೆ' ಎಂದು ಸಂಜು ಹೇಳಿದ್ದರು.
ನಾನು ಕಲೆ ಕ್ಷೇತ್ರಕ್ಕೆ ಕಾಲಿಟ್ಟಗ ಅನೇಕರು ನನ್ನ ತಂದೆಗೂ ಅವಮಾನ ಮಾಡಿದ್ದರು ನಿಮ್ಮ ಮಗ ಗಿಡ್ಡ ಇದ್ದಾನೆ ಅವನಿಂದ ನೀನು ದುಡಿಮೆ ಮಾಡಿಸಿ ಹಣ ತಿನ್ನುತ್ತಿರುವೆ ಎಂದು.
ನಾನು 7ನೇ ವರ್ಷದಿಂದ ಆರ್ಕೇಸ್ಟ್ರ ಬ್ಯಾಂಡ್ ಕಂಪನಿಯಲ್ಲಿ ಕೆಲಸ ಮಾಡಿ ದುಡಿಯಲು ಅರಂಭಿಸಿದೆ. ಅಲ್ಲಿಂದ ಅವಮಾನ ಆರಂಭವಾಗಿತ್ತು. ಪಲ್ಲವಿಯನ್ನು ಪ್ರೀತಿಸುತ್ತಿರುವಾಗ ಅನೇಕರು ಸೂಪರ್ ಜೋಡಿ ಹಾಗೆ ಹೀಗೆ ಎನ್ನುತ್ತಿದ್ದರು ಆದರೆ ಹಿಂದೆ ಕೆಟ್ಟದಾಗಿ ಮಾತನಾಡಿದ್ದಾರೆ.
ಅವಳು ಹಾಗೆ ಹೀಗೆ ಸುಖ ಕಂಡಾಳ ಎಂದು ಎಲ್ಲ ರೀತಿ ಮಾತನಾಡುತ್ತಿದ್ದರು. ಆಕೆ ನನ್ನ ಅರ್ಥ ಮಾಡಿಕೊಂಡಿದ್ದಾರೆ ನಾನು ಆಕೆ ಅರ್ಥ ಮಾಡಿಕೊಂಡಿದ್ದೀನಿ ಪ್ರೀತಿ ಪ್ರೇಮಾ ಚಟಕ್ಕೆ ಮಾಡಬೇಡಿ ಮನಸ್ಸಿನಿಂದ ಪ್ರೀತಿ ಮಾಡಿ' ಎಂದು ಸಂಜು ಮಾತನಾಡಿದ್ದಾರೆ.