MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • BBK 12: ನಾನ್‌ ಯಾರ ತಂಟೆಗೂ ಹೋಗಲ್ಲ, ನನ್ನ‌ ತಂಟೆಗೆ ಬಂದ್ರೆ ಬಿಡಲ್ಲ: ಫಸ್ಟ್‌ ಟೈಮ್‌ ರೆಬೆಲ್‌ ಆದ ಮಲ್ಲಮ್ಮ

BBK 12: ನಾನ್‌ ಯಾರ ತಂಟೆಗೂ ಹೋಗಲ್ಲ, ನನ್ನ‌ ತಂಟೆಗೆ ಬಂದ್ರೆ ಬಿಡಲ್ಲ: ಫಸ್ಟ್‌ ಟೈಮ್‌ ರೆಬೆಲ್‌ ಆದ ಮಲ್ಲಮ್ಮ

Bigg Boss Kannada Season 12: ನನಗೆ ಮಾತಾಡೋಕೆ ಬರಲ್ಲ, ನಾವು ಹಳ್ಳಿಯಿಂದ ಬಂದವರು, ಬಿಗ್‌ ಬಾಸ್‌ ಮನೆ ಆಟ ಗೊತ್ತಿಲ್ಲ ಎಂದು ಮುಗ್ಧತೆಯಿಂದಲೇ ಜನರ ಮನಸ್ಸು ಗೆದ್ದಿದ್ದ ಮಲ್ಲಮ್ಮ ಈಗ ರೆಬೆಲ್‌ ಆಗಿದ್ದಾರೆ. ಮಲ್ಲಮ್ಮ ‘ನಾನ್‌ ಯಾರ ಸುದ್ದಿಗೋ ಹೋಗಲ್ಲ, ನನ್ನ ಸುದ್ದಿಗೆ ಬಂದ್ರೆ ಬಿಡಲ್ಲʼ ಎಂದಿದ್ದಾರೆ. 

2 Min read
Padmashree Bhat
Published : Oct 09 2025, 11:41 PM IST
Share this Photo Gallery
  • FB
  • TW
  • Linkdin
  • Whatsapp
17
ರಕ್ಷಿತಾ ಶೆಟ್ಟಿ, ಮಂಜುಭಾಷಿಣಿ ಜಗಳ
Image Credit : Asianet News

ರಕ್ಷಿತಾ ಶೆಟ್ಟಿ, ಮಂಜುಭಾಷಿಣಿ ಜಗಳ

ಊಟದ ವಿಚಾರಕ್ಕೆ ಮಂಜುಭಾಷಿಣಿ ಹಾಗೂ ರಕ್ಷಿತಾ ಶೆಟ್ಟಿ ನಡುವೆ ಜಗಳ ಆಗಿದೆ. ದೊಡ್ಡಮಟ್ಟದಲ್ಲಿ ಇವರು ಗಲಾಟೆ ಮಾಡಿಕೊಂಡಿದ್ದಾರೆ. ಕಾಕ್ರೋಚ್‌ ಸುಧಿ ಇದಕ್ಕೆ ಮೂಲ ಕಾರಣ. ರಕ್ಷಿತಾ ಶೆಟ್ಟಿ ಊಟಕ್ಕೆ ಕಾಕ್ರೋಚ್‌ ಸುಧಿ ಅವರು ನೀರು ಹಾಕಿದರು, ಹೀಗಾಗಿ ಹನ್ನೆರಡು ಜನರಿಗೋಸ್ಕರ ಮಾಡಿದ್ದ ಚಿಕನ್‌ಗೆ ರಕ್ಷಿತಾ ಶೆಟ್ಟಿ ಅವರು ಗ್ರೀನ್‌ ಟೀ ಹಾಕಿದ್ದಾರೆ. ಇದೇ ವಿಚಾರಕ್ಕೆ ಜಗಳ ಶುರುವಾಗಿದೆ. ಆಮೇಲೆ ರಕ್ಷಿತಾ ಶೆಟ್ಟಿ ಅವರು, ಅಶ್ವಿನಿ ಗೌಡ ಬಳಿ ಈ ವಿಷಯವನ್ನು ಮಾತನಾಡಿದ್ದಾರೆ. ಅದನ್ನು ಮಲ್ಲಮ್ಮ ಕೇಳಿಸಿಕೊಂಡಿದ್ದಾರೆ.

27
ಮಂಜಮ್ಮ ವಿರುದ್ಧ ಮಲ್ಲಮ್ಮಗೆ ಸಿಟ್ಟು
Image Credit : Asianet News

ಮಂಜಮ್ಮ ವಿರುದ್ಧ ಮಲ್ಲಮ್ಮಗೆ ಸಿಟ್ಟು

ಮಲ್ಲಮ್ಮ ಅವರು, “ಮಂಜುಭಾಷಿಣಿಗೆ ಆಟಕ್ಕೆ ಹಾಕಬೇಕು, ಬರೀ ಪಿಟ್ಟಿಂಗ್‌ ಇಡೋದು ಬುದ್ಧಿ ಆಗಿದೆ, ಬೇರೆ ಏನೂ ಕೆಲಸ ಮಾಡಲ್ಲ, ಅದರಿಂದ ಎಲ್ಲರೂ ಹಾಳಾಗಿದ್ದಾರೆ” ಎಂದು ಅಶ್ವಿನಿ ಗೌಡ ಜೊತೆ ಮಾತನಾಡಿದ್ದಾರೆ.

Related Articles

Related image1
ಚಿನ್ನವನ್ನು ಅಡ ಇಟ್ಟು Bigg Bossಗೆ ಬಟ್ಟೆ ಖರೀದಿಸಿದ್ದೆ: ಕರಿಬಸಪ್ಪ ಭಾವುಕ- ಹೇಳಿದ್ದೇನು ಕೇಳಿ
Related image2
ವಿವಾದಗಳ ಮಧ್ಯೆ ಗೆದ್ದ Bigg Boss Kannada 12; ಲಾಂಚಿಂಗ್‌, ವೀಕೆಂಡ್‌ ಎಪಿಸೋಡ್‌ಗೆ ಇಷ್ಟು TRP?
37
ಕಾವ್ಯ ಶೈವ ಬೆವರಿಳಿಸಿದ ಮಲ್ಲಮ್ಮ
Image Credit : Asianet News

ಕಾವ್ಯ ಶೈವ ಬೆವರಿಳಿಸಿದ ಮಲ್ಲಮ್ಮ

ಎಲ್ಲರ ಮುಂದೆ ಕೂತಿದ್ದಾಗ ವಾಶ್‌ ರೂಮ್‌ನಲ್ಲಿ ಫ್ಲಶ್‌ ಮಾಡಬೇಕು ಎಂದು ಕಾವ್ಯ ಶೈವ ಅವರು ಹೇಳಿದ್ದಾರೆ. ಆಗ ಮಲ್ಲಮ್ಮ ಅವರು, “ನನ್ನ ಬಗ್ಗೆ ನೀನು ಮಾತನಾಡುತ್ತಿದ್ದೀಯಾ ಎಂದು ಹೇಳುತ್ತಿದ್ಯಾ ಅಂತ ನನಗೆ ಗೊತ್ತು. ನೀನು ಒಂದು ಅಂತಸ್ತು ನೋಡಿ ಬಂದಿದ್ದೀಯಾ, ನಾನು ಐದು ಅಂತಸ್ತನ್ನು ನೋಡಿ ಬಂದಿದ್ದೀಯಾ. ನಾನು ಹಳ್ಳಿಯಿಂದ ಬಂದಿದ್ದೀನಿ ಅಂತ ಹೇಳ್ತೀನಿ” ಎಂದು ಕೂಗಾಡಿದ್ದಾರೆ.

47
ನಾನ್‌ ಮಾತ್ರ ಹಾಗಲ್ಲ
Image Credit : Asianet News

ನಾನ್‌ ಮಾತ್ರ ಹಾಗಲ್ಲ

“ನಾನು ಇಲ್ಲಿಗೆ ಬಂದು ಐದು ವರ್ಷವಾಯ್ತು. ಎಲ್ಲರನ್ನು ಒಂದು ಥರ ನೋಡ್ತೀಯಾ, ನನ್ನನ್ನು ಮಾತ್ರ ಬೇರೆ ಥರ ನೋಡುತ್ತೀಯಾ, ಎಲ್ಲರೂ ಐಟಮ್‌ನ್ನು ಅಲ್ಲೇ ಬಿಟ್ಟು ಬರುತ್ತೀರಾ, ಆದರೆ ನಾನು ಮಾತ್ರ ಎಲ್ಲವನ್ನೂ ತಗೊಂಡು ಬರ್ತೀನಿ” ಎಂದು ಹೇಳಿದ್ದಾರೆ.

57
ಕಾವ್ಯ ಶೈವ ಸಮರ್ಥನೆ
Image Credit : Asianet News

ಕಾವ್ಯ ಶೈವ ಸಮರ್ಥನೆ

“ನಾಮಿನೇಶನ್‌ ಮಾಡುವಾಗ ಹಳ್ಳಿಯವರು ಅಂತ ಹೇಳ್ತಾರೆ, ಹೀಗಾಗಿ ನಾನು ಇದನ್ನು ಅವರ ಬಗ್ಗೆ ಹೇಳಿದೀನಿ ಅಂತ ತಲೆಯಲ್ಲಿ ಇರಬಹುದು. ನಾವು ಬಾತ್‌ರೂಮ್‌ ಏರಿಯಾ ನೋಡಬೇಕು, ಕೆಲವರಿಗಂತೂ ನಾನು ವೈಯಕ್ತಿಕವಾಗಿ ಹೋಗಿ ಹೇಳಿದೀನಿ” ಎಂದು ಕಾವ್ಯ ಶೈವ ಸಮರ್ಥನೆ ನೀಡಿದ್ದರು. ಆದರೂ ಕೂಡ ಮಲಮ್ಮ ಸುಮ್ಮನಾಗಲಿಲ್ಲ.

67
ನನ್ನ ತಂಟೆಗೆ ಬಂದ್ರೆ ಅಷ್ಟೇ
Image Credit : Asianet News

ನನ್ನ ತಂಟೆಗೆ ಬಂದ್ರೆ ಅಷ್ಟೇ

“ಚಪಾತಿ ಮಾಡೋ ಜಾಗವನ್ನು ತೊಳೆದಿಲ್ಲ ಅಂತ ಹೇಳ್ತಾರೆ, ನಾನು ನೆಲದ ಮೇಲೆ ಚಪಾತಿ ಮಾಡಿದ್ನಾ? ನನಗೆ ಅಷ್ಟು ಗೊತ್ತಾಗಿಲ್ವಾ? ನಾನು ಯಾರ ತಂಟೆಗೂ ಹೋಗಲ್ಲ, ನನ್ನ ತಂಟೆಗೆ ಬಂದ್ರೆ ಬಿಡೋದಿಲ್ಲ” ಎಂದು ಮಲ್ಲಮ್ಮ ಹೇಳಿದ್ದಾರೆ.

77
ದಮ್ಮಯ್ಯ ಬಿಡು ಎಂದ ಗಿಲ್ಲಿ ನಟ
Image Credit : Asianet News

ದಮ್ಮಯ್ಯ ಬಿಡು ಎಂದ ಗಿಲ್ಲಿ ನಟ

ಅಶ್ವಿನಿ ಹಾಗೂ ಸ್ಪಂದನಾ ಸೋಮಣ್ಣ ಕೂಡ ಕಾವ್ಯ ಅವರನ್ನು ಸಮರ್ಥನೆ ಮಾಡಿಕೊಂಡು ಮಾತನಾಡಿದರು. ಅದು ಮಲ್ಲಮ್ಮಗೆ ಸಿಟ್ಟು ತರಿಸಿತು, “ಅವರನ್ನು ಸಪೋರ್ಟ್‌ ಮಾಡಿಕೊಂಡು ಮಾತನಾಡಬೇಡಿ” ಎಂದಿದ್ದಾರೆ. ಆಗ ಗಿಲ್ಲಿ ನಟ ಅವರು, “ಕಾಲಿಗೆ ಬೀಳ್ತೀನಿ, ದಮ್ಮಯ್ಯ, ಮಲ್ಲು ಬಿಟ್ಟು ಬಿಡಿ” ಎಂದು ಹೇಳಿದ್ದಾರೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಟಿವಿ ಶೋ
Latest Videos
Recommended Stories
Related Stories
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved