ಸೃಜನ್ ಲೋಕೇಶ್ ನಿರ್ಮಾಣದ 'ಇವಳು ಸುಜಾತಾ' ಧಾರಾವಾಹಿ ಅಂತ್ಯ!
ಬೆಂಗಳೂರು (ಜು. 05) ಕೊರೋನಾ ವೈರಸ್ ಲಾಕ್ ಡೌನ್ ಕಾರಣ ಕಿರುತೆರೆ ಮೇಲೆ ಪರಿಣಾಮ ಬೀರಿದೆ. ಈಗಾಗಲೇ ಲಾಕ್ಡೌನ್ ಕಾರಣದಿಂದ ಟಿಆರ್ಪಿ ಕಡಿಮೆ ಇರುವುದಕ್ಕೆ ಸಾಕಷ್ಟು ಧಾರಾವಾಹಿಗಳು ಮುಕ್ತಾಯವಾಗಿವೆ. ಇದೆಲ್ಲದರ ನಡುವೆ ಸೃಜನ್ ಲೋಕೇಶ್ ನಿರ್ಮಾಣದ ಧಾರಾವಾಹಿ ಪ್ರಸಾರ ನಿಲ್ಲಿಸಿದೆ.
'ಇವಳು ಸುಜಾತಾ' ಧಾರಾವಾಹಿ ಮುಕ್ತಾಯವಾಗುತ್ತಿದೆ.
ಸೃಜನ್ 'ಲೋಕೇಶ್ ಪ್ರೊಡಕ್ಷನ್ಸ್' ಬ್ಯಾನರ್ನಡಿಯಲ್ಲಿ ತಯಾರಾದ ಈ ಸೀರಿಯಲ್ಗೆ ತೇಜಸ್ವಿ ನಿರ್ದೇಶನ ಮಾಡಿದ್ದರು.
ಮರಾಠಿ ಧಾರಾವಾಹಿ 'ಮನ ಬಾವರೆ'ದ ರಿಮೇಕ್ ಆಗಿದ್ದ ಧಾರಾವಾಹಿಯಲ್ಲಿ ಬಿಗ್ ಬಾಸ್ ಖ್ಯಾತಿಯ ನಟಿ ಮೇಘಶ್ರೀ, ಯಶವಂತ್, ಅಪರ್ಣಾ, ಗಿರಿಜಾ ಲೋಕೇಶ್ ಕಾಣಿಸಿಕೊಂಡಿದ್ದರು.
ವರ್ಷಗಳ ನಂತರ ಖ್ಯಾತ ನಿರೂಪಕಿ ಅಪರ್ಣಾ ಧಾರಾವಾಹಿಯಲ್ಲಿ ಬಣ್ಣ ಹಚ್ಚಿ ಮಿಂಚಿದ್ದರು.
Meghana
ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದ ಮೇಘಶ್ರೀ ಪ್ರಖ್ಯಾತಿ ಪಡೆದುಕೊಂಡಿದ್ದರು.
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಟಿ.ಎನ್.ಸೀತಾರಾಮ್ ನಿರ್ದೇಶನದ ಮಗಳು ಜಾನಕಿ ಧಾರಾವಾಹಿ ಸಹ ಬಂದ್ ಆಗಿದ್ದು ವೀಕ್ಷಕರು ಅನೇಕ ಪ್ರಶ್ನೆ ಎತ್ತಿದ್ದರು.