MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಪುರಿ ದೇವಾಲಯ ಭೇಟಿ, ಜಗನ್ನಾಥನ 11 ನಿಗೂಢ ರಹಸ್ಯಗಳಿವು

ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಪುರಿ ದೇವಾಲಯ ಭೇಟಿ, ಜಗನ್ನಾಥನ 11 ನಿಗೂಢ ರಹಸ್ಯಗಳಿವು

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಪುರಿ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿದರು. ಈ ದೇವಾಲಯವು ಕೇವಲ ತೀರ್ಥಕ್ಷೇತ್ರವಲ್ಲ,  ಗಾಳಿಗೆ ವಿರುದ್ಧವಾಗಿ ಹಾರುವ ಧ್ವಜ, ನೆರಳಿಲ್ಲದ ಗೋಪುರ, ಮತ್ತು ಎಂದಿಗೂ ವ್ಯರ್ಥವಾಗದ ಮಹಾಪ್ರಸಾದದಂತಹ ವಿಜ್ಞಾನಕ್ಕೂ ಮೀರಿದ ಹಲವಾರು ನಿಗೂಢ ರಹಸ್ಯಗಳನ್ನು ಹೊಂದಿದೆ. 

3 Min read
Gowthami K
Published : Nov 20 2025, 07:09 PM IST
Share this Photo Gallery
  • FB
  • TW
  • Linkdin
  • Whatsapp
18
ಪುರಿ ಜಗನ್ನಾಥ ದೇಗುಲಕ್ಕೆ ಹೆಚ್‌ಡಿಕೆ ಭೇಟಿ
Image Credit : Asianet News

ಪುರಿ ಜಗನ್ನಾಥ ದೇಗುಲಕ್ಕೆ ಹೆಚ್‌ಡಿಕೆ ಭೇಟಿ

ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಶ್ರೀ HD ಕುಮಾರಸ್ವಾಮಿ ಅವರು ತಮ್ಮ ಕುಟುಂಬ ಸಮೇತ ಒಡಿಶಾದ ಪುರಿ ಶ್ರೀ ಜಗನ್ನಾಥ ದೇವಾಲಯಕ್ಕೆ ತೆರಳಿ ಭಗವಂತನ ದರ್ಶನ ಪಡೆದರು. ಪತ್ನಿ ಅನಿತಾ ಕುಮಾರಸ್ವಾಮಿ ಜೊತೆಯಲ್ಲಿದ್ದರು. ಜಗನ್ನಾಥ ದೇವಾಲಯವು ಹಿಂದೂ ಧರ್ಮದಲ್ಲಿ ವಿಷ್ಣುವಿನ ರೂಪವಾದ ಜಗನ್ನಾಥ ದೇವರಿಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದೆ. ಇದು ಭಾರತದ ಪೂರ್ವ ಕರಾವಳಿಯಲ್ಲಿ ನೆಲೆಗೊಂಡಿರುವ ಒಡಿಶಾ ರಾಜ್ಯದ ಪುರಿಯಲ್ಲಿದೆ. ಜಗನ್ನಾಥ ದೇವಾಲಯವು ಕೇವಲ ತೀರ್ಥಸ್ಥಳವಲ್ಲ.ಇದು ವಿಜ್ಞಾನಕ್ಕೂ ಮೀರಿದ ನಿಗೂಢತೆ, ಭಕ್ತಿಗೆ ಜೀವ ತುಂಬುವ ತಾಣ, ಭಾರತೀಯ ವಾಸ್ತುಶಿಲ್ಪದ ಅಮೂಲ್ಯ ಹೆಮ್ಮೆಯ ಪರಂಪರೆ ಹೊಂದಿದೆ.

28
ದೇಗುಲದ 11 ರಹಸ್ಯಗಳು
Image Credit : Asianet News

ದೇಗುಲದ 11 ರಹಸ್ಯಗಳು

ಒಡಿಶಾದಲ್ಲಿರುವ ಪ್ರಸಿದ್ಧ ಪುರಿಯ ಜಗನ್ನಾಥ ದೇವಾಲಯದ ಬೃಹತ್ ಗೋಡೆಗಳನ್ನು ಇಟ್ಟಿಗೆಗಳಿಂದ ಕೆತ್ತಲು ಮೂರು ತಲೆಮಾರುಗಳ ಸಮಯ ಮತ್ತು ಶ್ರಮ ಬೇಕಾಯಿತು. ಈ ದೇವಾಲಯವು “ಚಾರ್ ಧಾಮ್” ಯಾತ್ರೆಯ ಪ್ರಮುಖ ಭಾಗವಾಗಿರುವ 1078ರಲ್ಲಿ ನಿರ್ಮಿಸಲ್ಪಟ್ಟ ಐತಿಹಾಸಿಕ ಅದ್ಭುತ ಕಲಾಕೃತಿ. ಮೂರು ತಲೆಮಾರುಗಳಷ್ಟು ಕಾಲ ಈ ದೇವಾಲಯದ ಬೃಹತ್ ಗೋಡೆಗಳು ಕಲ್ಲಿನಲ್ಲಿ ಕೆತ್ತಲ್ಪಟ್ಟಿವೆ. ವರ್ಷಂಪ್ರತಿ ಲಕ್ಷಾಂತರ ಭಕ್ತರು ಜಗನ್ನಾಥನ ಆಶೀರ್ವಾದಕ್ಕಾಗಿ ಈ ಪವಿತ್ರ ಸ್ಥಳಕ್ಕೆ ಆಗಮಿಸುತ್ತಾರೆ. ರಥಯಾತ್ರೆ, ಸಂಪ್ರದಾಯ, ದೇವಾಲಯದ ಗಾತ್ರ ಇವೆಲ್ಲಕ್ಕಿಂತ ಮಿಗಿಲಾದ ಕುತೂಹಲಕಾರಿ ನಿಗೂಢತೆಗಳು ಇಲ್ಲಿ ಅಡಗಿವೆ. ವಿಜ್ಞಾನಕ್ಕೂ ಉತ್ತರ ಕೆಲವು ನಂಬಲಾಗದ ವಿಚಿತ್ರ ಸಂಗತಿಗಳು ಇಲ್ಲಿವೆ:

Related Articles

Related image1
Puri Jagannath Rath Yatra: ಪುರಿ ಜಗನ್ನಾಥನ ರಥ ಯಾತ್ರೆಯಂದು ಚಿನ್ನದ ಪೊರಕೆಯಲ್ಲಿ ಗುಡಿಸೋದು ಸಂಪ್ರದಾಯವಂತೆ!
Related image2
ಒಡಿಶಾದ ಜಗತ್ಪ್ರಸಿದ್ಧ ಪುರಿ ಜಗನ್ನಾಥ ದೇಗುಲದ ರಹಸ್ಯ ರತ್ನ ಭಂಡಾರ ಸ್ಥಳಾಂತರ ಪೂರ್ಣ
38
1 ಗಾಳಿಯ ವಿರುದ್ಧ ಹಾರುವ ಧ್ವಜ
Image Credit : Asianet News

1 ಗಾಳಿಯ ವಿರುದ್ಧ ಹಾರುವ ಧ್ವಜ

ಜಗನ್ನಾಥ ದೇವಾಲಯದ ಗುಮ್ಮಟದ ಮೇಲೆ ಹಾರುವ ಧ್ವಜ ಗಾಳಿಗೆ ವಿರುದ್ಧವಾಗಿ ಹಾರುತ್ತವೆ. ಯಾವ ದಿಕ್ಕಿನಿಂದ ಗಾಳಿ ಬೀಸಿದರೂ, ಧ್ವಜವು ಗಾಳಿಯ ವಿರುದ್ಧ ದಿಕ್ಕಿನಲ್ಲಿ ಹಾರುತ್ತದೆ. ಈ ಅಚ್ಚರಿಯ ಘಟನೆಗೆ ಇಂದಿಗೂ ವೈಜ್ಞಾನಿಕ ಕಾರಣ ಸಿಕ್ಕಿಲ್ಲ.

2.ಪ್ರತೀದಿನ ದ್ವಜ ಬದಲಾವಣೆ

ಪ್ರತಿದಿನ ಒಬ್ಬ ಅರ್ಚಕ ದೇವಾಲಯದ ಗೋಪುರದ ಮೇಲಿನ ಧ್ವಜವನ್ನು ಬದಲಾಯಿಸಲು 45 ಅಂತಸ್ತಿನಷ್ಟು ಎತ್ತರದ ಗುಮ್ಮಟವನ್ನು ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಹತ್ತುತ್ತಾರೆ. ಈ ಸಂಪ್ರದಾಯವು ಸಾವಿರ ವರ್ಷಗಳ ಹಿಂದಿನಿಂದಲೂ ನಿರಂತರವಾಗಿ ಮುಂದುವರಿದಿದೆ. ಒಂದು ದಿನ ತಡವಾದರೆ, ದೇವಾಲಯವು 18 ವರ್ಷ ಮುಚ್ಚಲ್ಪಡುತ್ತದೆ ಎಂಬ ನಂಬಿಕೆ ಇದೆ!

48
3.ನೆರಳು ಬೀಳದ ದೇವಾಲಯ
Image Credit : Asianet News

3.ನೆರಳು ಬೀಳದ ದೇವಾಲಯ

ಜಗನ್ನಾಥ ದೇವಾಲಯಕ್ಕೆ ದಿನದ ಯಾವ ಹೊತ್ತಿನಲ್ಲೂ, ಯಾವ ದಿಕ್ಕಿನಿಂದ ನೋಡಿದರೂ ನೆರಳು ಕಾಣುವುದಿಲ್ಲ. ವಾಸ್ತುಶಿಲ್ಪದ ಅದ್ಭುತವೇ? ದೇವರ ಕೃಪೆಯೇ? ಇದಕ್ಕೆ ಇಂದಿಗೂ ಖಚಿತ ಉತ್ತರ ಇಲ್ಲ.

4. ಸುದರ್ಶನ ಚಕ್ರದ ಎರಡು ರಹಸ್ಯಗಳು

ದೇವಾಲಯದ ಶಿಖರದಲ್ಲಿರುವ ಸುದರ್ಶನ ಚಕ್ರ ಎರಡು ನಿಗೂಢ ರಹಸ್ಯಗಳನ್ನು ಹೊಂದಿದೆ. ಒಂದು ಟನ್ ಲೋಹದ ಚಕ್ರವನ್ನು ಯಂತ್ರಗಳಿಲ್ಲದೆ ಹೇಗೆ ಮೇಲೇರಿಸಿದರು? 1000 ವರ್ಷಗಳ ಹಿಂದೆ, ಯಂತ್ರೋಪಕರಣಗಳಿಲ್ಲದ ಕಾಲದಲ್ಲಿ ಇಷ್ಟು ಭಾರವಾದ ಚಕ್ರವನ್ನು ಎತ್ತರಕ್ಕೆ ಹೇಗೆ ತೆಗೆದುಕೊಂಡು ಹೋದರು ಎಂಬುದು ಇಂದಿಗೂ ರಹಸ್ಯ. ಇನ್ನೊಂದು ಎಲ್ಲ ದಿಕ್ಕಿನಿಂದ ನೋಡಿದರೂ ‘ಒಂದೇ ರೀತಿ’ ಕಾಣುತ್ತದೆ. ಯಾವ ದಿಕ್ಕಿಗೆ ತಿರುಗಿದರೂ, ಚಕ್ರವು ನಿಮ್ಮನ್ನು ನೇರವಾಗಿ ನೋಡುವಂತೆ ಕಾಣುತ್ತದೆ. ಇದು ವಾಸ್ತುಶಿಲ್ಪದ ಅದ್ಭುತ ಕೌಶಲ್ಯ.

58
5. ದೇವಾಲಯದ ಮೇಲೆ ಏನೂ ಹಾರುವುದಿಲ್ಲ
Image Credit : Asianet News

5. ದೇವಾಲಯದ ಮೇಲೆ ಏನೂ ಹಾರುವುದಿಲ್ಲ

ಈ ದೇವಾಲಯದ ಮೇಲೆ ಪಕ್ಷಿಗಳು ಕುಳಿತುಕೊಳ್ಳುವುದಿಲ್ಲ, ಹಾರುವುದಿಲ್ಲ. ವಿಮಾನಗಳೂ ಕೂಡ ದೇವಾಲಯದ ಮೇಲಿನಿಂದ ಹಾರಾಡುವುದಿಲ್ಲ. ಈ ಪ್ರದೇಶವು ಅನಾಯಾಸವಾಗಿ “ನೋ-ಫ್ಲೈ-ಜೋನ್” ಆಗಿದೆ!

6. ದೇವಾಲಯದಲ್ಲಿ ವಿತರಿಸುವ ಆಹಾರ ಎಂದಿಗೂ ವ್ಯರ್ಥವಾಗುವುದಿಲ್ಲ

ಪ್ರತಿದಿನ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ 2,000 ರಿಂದ 2,00,000ರವರೆಗೆ ಇರುತ್ತದೆ. ಆದರೂ, ಪ್ರತಿದಿನ ತಯಾರಾಗುವ ಮಹಾಪ್ರಸಾದ ಎಂದಿಗೂ ಅಗತ್ಯಕ್ಕಿಂತ ಹೆಚ್ಚು ಆಗುವುದಿಲ್ಲ. ಕಡಿಮೆಯೂ ಆಗುವುದಿಲ್ಲ. ಒಂದು ಚಮಚವೂ ವ್ಯರ್ಥವಾಗುವುದಿಲ್ಲ.ಇದು ಪವಾಡವೇ ಸರಿ.

68
7. ದೇವಾಲಯದೊಳಗೆ ಸಮುದ್ರದ ಶಬ್ದ ಕೇಳಿಸುವುದಿಲ್ಲ
Image Credit : X-Shree Jagannatha Temple Puri

7. ದೇವಾಲಯದೊಳಗೆ ಸಮುದ್ರದ ಶಬ್ದ ಕೇಳಿಸುವುದಿಲ್ಲ

ಸಿಂಘದ್ವಾರದಿಂದ ದೇವಾಲಯದೊಳಗೆ ಕಾಲಿಟ್ಟ ಕ್ಷಣದಲ್ಲಿ, ಸಮೀಪದಲ್ಲಿರುವ ಸಮುದ್ರದ ಅಲೆಗಳ ಶಬ್ದ ಸಂಪೂರ್ಣವಾಗಿ ನಿಂತುಹೋಗುತ್ತದೆ. ಹೊರಗೆ ಬಂದಾಗ ಮಾತ್ರ ಮತ್ತೆ ಕೇಳುತ್ತದೆ. ಸ್ಥಳೀಯರು ಇದು ಸುಭದ್ರಾ ದೇವಿಯ ಆಶೀರ್ವಾದ ಎಂದು ನಂಬುತ್ತಾರೆ.

8. ಪುರಿಯ ತಂಗಾಳಿ, ಮುದ್ರದ ನಿಯಮಕ್ಕೆ ವಿರುದ್ಧ

ಪ್ರಪಂಚದ ಎಲ್ಲೆಡೆ ಹಗಲು ಗಾಳಿ ಸಮುದ್ರದಿಂದ ಭೂಮಿಗೆ ಬರುತ್ತದೆ. ರಾತ್ರಿ ಭೂಮಿಯಿಂದ ಸಮುದ್ರಕ್ಕೆ ಹೋಗುತ್ತದೆ. ಆದರೆ ಪುರಿಯಲ್ಲಿ ಇದಕ್ಕೆ ವಿರುದ್ಧವಾಗಿ ಗಾಳಿ ಬೀಸುತ್ತದೆ. ಇದಕ್ಕೆ ವಿಜ್ಞಾನದಲ್ಲೂ ಉತ್ತರ ಇಲ್ಲ.

78
 ಪ್ರತೀ 14–18 ವರ್ಷಗಳಿಗೊಮ್ಮೆ ದೇವತೆಗಳ ‘ನಾಬಕಲೇವರ’
Image Credit : SOCIAL MEDIA

ಪ್ರತೀ 14–18 ವರ್ಷಗಳಿಗೊಮ್ಮೆ ದೇವತೆಗಳ ‘ನಾಬಕಲೇವರ’

9. ಏಳು ಮಡಕೆಗಳಲ್ಲಿ ಬೇಯುವ ಪ್ರಸಾದ ಇನ್ನೊಂದು ವಿಶೇಷ. ಆದರೆ 7 ಮಡಕೆಯಲ್ಲಿ ಮೇಲಿನ ಮಡಕೆಯಲ್ಲಿರುವ ಪ್ರಸಾದ ಮೊದಲೇ ಬೇಯುತ್ತದೆ ದೇವಾಲಯದಲ್ಲಿ ಮಹಾಪ್ರಸಾದ ಬೇಯಿಸುವಾಗ ಏಳು ಮಡಕೆಗಳನ್ನು ಒಂದರ ಮೇಲೊಂದು ಇಡಲಾಗುತ್ತದೆ. ಆಶ್ಚರ್ಯಕರ ಸಂಗತಿ ಏನೆಂದರೆ. ಮೇಲಿನ ಮಡಕೆ ಮೊದಲೇ ಬೇಯುತ್ತದೆ, ನಂತರ ಕೆಳಗಿನ ಮಡಕೆಗಳು!

10. ಪ್ರತೀ 14–18 ವರ್ಷಗಳಿಗೊಮ್ಮೆ ದೇವತೆಗಳ ‘ನಾಬಕಲೇವರ’

ದೇವಾಲಯದ ಜಗನ್ನಾಥ, ಬಲಭದ್ರ, ಸುಭದ್ರರ ವಿಗ್ರಹಗಳನ್ನು 14-18 ವರ್ಷಗಳಿಗೊಮ್ಮೆ ಸಮಾಧಿಪಡಿಸಿ, ಹೊಸ ವಿಗ್ರಹಗಳನ್ನು ಬದಲಾಯಿಸಲಾಗುತ್ತದೆ. ಹಳೆಯ ಮರದ ವಿಗ್ರಹಗಳು ಅವಾಗಿಯೇ ವಿಘಟನೆಯಾಗುತ್ತವೆ ಎನ್ನುವುದು ದಂತಕಥೆ.

88
11. ದೈತ್ಯ ರಥಯಾತ್ರೆ—ಜಗನ್ನಾಥನ ಮಹಾ ಮೆರವಣಿಗೆ
Image Credit : our own

11. ದೈತ್ಯ ರಥಯಾತ್ರೆ—ಜಗನ್ನಾಥನ ಮಹಾ ಮೆರವಣಿಗೆ

ಜಗನ್ನಾಥನ ವಿಶ್ವಪ್ರಸಿದ್ಧ ರಥಯಾತ್ರೆ ವೇಳೆ ಮೂರು ದೇವತೆಗಳು,ಮೂರು ದೈತ್ಯ ರಥಗಳು, ಲಕ್ಷಾಂತರ ಭಕ್ತರು ಭಗವಂತನ ದರ್ಶನಕ್ಕಾಗಿ ಜಮಾಯಿಸುತ್ತಾರೆ. ಇಂಗ್ಲಿಷ್‌ನ “Juggernaut” ಪದವೇ ಈ ಮೆರವಣಿಗೆಯಿಂದ ಬಂದದ್ದು! ರಥಯಾತ್ರೆಯ ಸಮಯದಲ್ಲಿ ದೇವತೆಗಳನ್ನು ನದಿಯನ್ನು ದಾಟಿಸಿ ಮೌಸಿಮಾ ದೇವಾಲಯಕ್ಕೆ ಕರೆದೊಯ್ಯುವ ಸಂಪ್ರದಾಯ ಅತ್ಯಂತ ಭವ್ಯ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಹೆಚ್.ಡಿ. ಕುಮಾರಸ್ವಾಮಿ
Latest Videos
Recommended Stories
Recommended image1
ವಿಜಯಲಕ್ಷ್ಮೀ ‘ವೈರಲ್’ ಫೀವರ್... ಪತಿಗಾಗಿ ಕಾನೂನು ಕಂಟಕದಲ್ಲಿ ಸಿಲುಕಿಕೊಂಡ್ರಾ ಪತ್ನಿ..?
Recommended image2
ಮುಖ್ಯಮಂತ್ರಿ ಬದಲಾವಣೆಗೆ ಡಿಕೆಶಿ ಬಿಗಿಪಟ್ಟು, ಹೈಕಮಾಂಡ್‌ಗೆ ಒತ್ತಡ ತರಲು ದೆಹಲಿಗೆ ಹಾರಿದ ಡಿಕೆ ಬಣ!
Recommended image3
ಬೆಂಗಳೂರು: ರಾಬರಿಗೂ ಮುನ್ನ ಸ್ಥಳ ಪರಿಶೀಲಿಸಿ ಬಾರ್‌ಗೆ ಬಂದಿದ್ದ ಆರೋಪಿಗಳು ಸಿಸಿಟಿವಿಯಲ್ಲಿ ಸೆರೆ!
Related Stories
Recommended image1
Puri Jagannath Rath Yatra: ಪುರಿ ಜಗನ್ನಾಥನ ರಥ ಯಾತ್ರೆಯಂದು ಚಿನ್ನದ ಪೊರಕೆಯಲ್ಲಿ ಗುಡಿಸೋದು ಸಂಪ್ರದಾಯವಂತೆ!
Recommended image2
ಒಡಿಶಾದ ಜಗತ್ಪ್ರಸಿದ್ಧ ಪುರಿ ಜಗನ್ನಾಥ ದೇಗುಲದ ರಹಸ್ಯ ರತ್ನ ಭಂಡಾರ ಸ್ಥಳಾಂತರ ಪೂರ್ಣ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved