MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • Photos: ಗೋಕರ್ಣದ ಬೀಚ್‌ನಲ್ಲಿ ಹಿಂದೂ ಪದ್ಧತಿಯಂತೆ ವಿದೇಶಿ ಜೋಡಿಯ ವಿವಾಹ!

Photos: ಗೋಕರ್ಣದ ಬೀಚ್‌ನಲ್ಲಿ ಹಿಂದೂ ಪದ್ಧತಿಯಂತೆ ವಿದೇಶಿ ಜೋಡಿಯ ವಿವಾಹ!

ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಕುಡ್ಲೆ ಬೀಚ್‌ನ ಕೆಫೆ ಪ್ಯಾರಡೈಸ್ ರೆಸಾರ್ಟ್ ಆವರಣದಲ್ಲಿ ವಿದೇಶಿ ಜೋಡಿ ಭಾರತೀಯ ಪದ್ದತಿಯಂತೆ ಸಪ್ತಪದಿ ತುಳಿದು ವಿವಾಹವಾಗಿದ್ದಾರೆ. ವಿದೇಶಿ ಜೋಡಿಯ ಸುಂದರ ಫೋಟೊಗಳು ಕೆಳಗಿವೆ ನೋಡಿ.

2 Min read
Ravi Janekal
Published : Nov 29 2025, 07:16 PM IST
Share this Photo Gallery
  • FB
  • TW
  • Linkdin
  • Whatsapp
19
ಪುಣ್ಯಭೂಮಿಯಲ್ಲಿ ಪ್ರೇಮಸಂಗಮ
Image Credit : Asianet News

ಪುಣ್ಯಭೂಮಿಯಲ್ಲಿ ಪ್ರೇಮಸಂಗಮ

ನಾರ್ವೆ ದೇಶದ ಸ್ಯಾಮ್ ಮತ್ತು ಆರ್ಟಿಮಾ ಜೋಡಿ, ಉತ್ತರಕನ್ನಡದ ಗೋಕರ್ಣದ ಕುಡ್ಲೆ ಬೀಚ್‌ನಲ್ಲಿ ಭಾರತೀಯ ಸಂಪ್ರದಾಯದಂತೆ ವಿವಾಹವಾಗುವ ಮೂಲಕ ಗಮನಸೆಳೆದಿದ್ದಾರೆ.

29
ಸಾಂಪ್ರದಾಯಿಕ ಸಿದ್ಧತೆ:
Image Credit : Asianet News

ಸಾಂಪ್ರದಾಯಿಕ ಸಿದ್ಧತೆ:

ನಾರ್ವೆ ದೇಶದ ಸ್ಯಾಮ್ ವೃತ್ತಿಯಲ್ಲಿ ಮುಖ್ಯ ಅಡುಗೆ ತಯಾರಕರಾಗಿದ್ದು, ಇದೇ ದೇಶದ ಆರ್ಟಿಮಾ ಜೊತೆ ನವಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಆರಂಭಕ್ಕೂ  ಮಂಟಪ ಸುಂದರವಾಗಿ ಡೆಕೊರೇಶನ್ ಮಾಡಿ ಅಲಂಕೃತಗೊಳಿಸಲಾಗಿತ್ತು.ಈ ಮಂಟಪದಲ್ಲಿ ಕುಳಿತ ನವ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದು ಪುಣ್ಯ ಕ್ಷೇತ್ರದಲ್ಲಿ ನೆರವೇರಿದ ಪವಿತ್ರ ವಿವಾಹ.

Related Articles

Related image1
ಉಡುಪಿ, ಗೋಕರ್ಣ ಮಠಗಳಿಂದ ದೇಶಕ್ಕೆ ಸಾಂಸ್ಕೃತಿಕ ಶಕ್ತಿ : ಮೋದಿ
Related image2
ಸ್ಮೃತಿ ಮಂಧನಾ-ಪಲಾಶ್‌ ಮದುವೆ ಯಾವಾಗ? ಹುಡುಗನ ತಾಯಿ ನೀಡಿದ್ರು ಬಿಗ್‌ ಅಪ್‌ಡೇಟ್‌
39
ವೇದಮಂತ್ರಗಳ ಘೋಷಣೆ
Image Credit : Asianet News

ವೇದಮಂತ್ರಗಳ ಘೋಷಣೆ

ವೇ.ಪ್ರಸನ್ನ ಜೋಗಭಟ್, ವೇ. ಮಹೇಶ ಅಡಿ ಸೇರಿದಂತೆ ಇತರ ವೈದಿಕರ ಮಂತ್ರ ಘೋಷಗಳೊಂದಿಗೆ ವಿವಾಹ ವಿಧಿವಿಧಾನಗಳ ಮೂಲಕ ವಿದೇಶಿ ಜೋಡಿ ವಿವಾಹವಾಗಿರುವುದು ವಿಶೇಷವಾಗಿದೆ.

49
ಸಪ್ತಪದಿ ತುಳಿದ ಸ್ಯಾಮ್ ಆರ್ಟಿಮಾ
Image Credit : Asianet News

ಸಪ್ತಪದಿ ತುಳಿದ ಸ್ಯಾಮ್ ಆರ್ಟಿಮಾ

ಭಾರತೀಯ ಸಂಸ್ಕೃತಿಯನ್ನು ಮೆಚ್ಚಿದ ವಿದೇಶಿ ಜೋಡಿ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ವೇಳೆ ಜೋಡಿ ಭಾವುಕರಾದಂತೆ ಕಾಣಿಸಿತ್ತು. ಈ ವಿದೇಶಿ ಜೋಡಿ ಭಾರತೀಯ ಸಂಪ್ರದಾಯ ಮೆಚ್ಚಿಕೊಂಡರು.

59
ಮಾಂಗಲ್ಯ ಧಾರಣೆ:
Image Credit : Asianet News

ಮಾಂಗಲ್ಯ ಧಾರಣೆ:

ಸ್ಯಾಮ್ ಅವರು ಆರ್ಟಿಮಾ ಅವರ ಕುತ್ತಿಗೆಗೆ ಮಂಗಳ ಸೂತ್ರ ಕಟ್ಟಿದ ದೃಶ್ಯ. ಈ ಅಪೂರ್ವ ಬಂಧಕ್ಕೆ ಗೋಕರ್ಣ ಸಾಕ್ಷಿಯಾಯಿತು. ಇದು ಹಿಂದೂಗಳ ಮದುವೆ ಎಂಬಂತೆ ಭಾಸವಾಗಿದ್ದು ಸುಳ್ಳಲ್ಲ. ನೆರೆದಿದ್ದ ಎಲ್ಲರೂ ಅಕ್ಷತ ಕಾಳು ಹಾಕಿ ಹಾರೈಸಿದರು.

69
ಪುಷ್ಪಾರ್ಚನೆ
Image Credit : Asianet News

ಪುಷ್ಪಾರ್ಚನೆ

ಹಿಂದೂ ವಿವಾದ ಪದ್ಧತಿಯಂತೆ ವಿವಾಹದ ಭಾಗವಾಗಿ ದೇವರಿಗೆ ಮತ್ತು ಬಂಧುಗಳಿಗೆ ಹೂವುಗಳನ್ನು ಅರ್ಪಿಸುತ್ತಿರುವ ನಾರ್ವೆಯ ನವ ವಧು-ವರರು. ಈ ಸಂದರ್ಭದಲ್ಲಿ ಹಲವು ವರ್ಷಗಳಿಂದ ಗೋಕರ್ಣಕ್ಕೆ ಭೇಟಿ ನೀಡುತ್ತಿದ್ದ ಸ್ಯಾಮ್, ಕೆಫೆ ಪ್ಯಾರಡೈಸ್ ರೆಸಾರ್ಟ್‌ನ ಮಾಲಕ ಮುರಳಿ ಕಾಮತ್ ಕುಟುಂಬದವರೊಂದಿಗೆ ಆತ್ಮೀಯವಾಗಿ ಪಾಲ್ಗೊಂಡರು.

79
ವಿದೇಶಿಗರ ಮೆಚ್ಚುಗೆ:
Image Credit : Asianet News

ವಿದೇಶಿಗರ ಮೆಚ್ಚುಗೆ:

 ಭಾರತೀಯ ಉಡುಗೆ ತೊಟ್ಟು, ಹಿಂದೂ ವಿವಾಹ ಪದ್ಧತಿ, ಸಂಪ್ರದಾಯದಂತೆ ಮದುವೆಯಾದ ಈ ಜೋಡಿಯ ಸಂತಸದ ಕ್ಷಣ. ನಮ್ಮ ಸಂಸ್ಕೃತಿಗೆ ಈ ವಿದೇಶಿ ಜೋಡಿ ಅಷ್ಟೇ ಅಲ್ಲ ಅವರ ಬಂಧುಗಳು ಕೂಡ ಮನಸೋತರು.

89
ಆಪ್ತ ಬಂಧು-ಬಳಗದಿಂದ ಹಾರೈಕೆ
Image Credit : Asianet News

ಆಪ್ತ ಬಂಧು-ಬಳಗದಿಂದ ಹಾರೈಕೆ

ಮದುವೆಯಲ್ಲಿ ಭಾಗವಹಿಸಿದ್ದ ಮುರಳಿ ಕಾಮತ್ ಕುಟುಂಬದವರು ಮತ್ತು ಆಪ್ತರು ನವ ಜೋಡಿಗೆ ಶುಭ ಹಾರೈಸಿದರು.

99
ಸುಂದರ ಹಿನ್ನಲೆ:
Image Credit : Asianet News

ಸುಂದರ ಹಿನ್ನಲೆ:

ಪಶ್ಚಿಮ ಕರಾವಳಿಯ ಗೋಕರ್ಣದ ಸುಂದರ ರಮಣೀಯ ಕುಡ್ಲೆ ಬೀಚ್‌ನ ಹಿನ್ನಲೆಯಲ್ಲಿ  ಸ್ಯಾಮ್ ಮತ್ತು ಆರ್ಟಿಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಯ ವಿವಾಹ ಸೊಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಶುಭ ಹಾರೈಸುತ್ತಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಉತ್ತರ ಕನ್ನಡ
ಮದುವೆ
Latest Videos
Recommended Stories
Recommended image1
ಸಿದ್ದರಾಮಯ್ಯ-ಡಿಕೆಶಿ ಕದನ ವಿರಾಮ ತಾತ್ಕಾಲಿಕನಾ? ಅಧಿಕಾರ ಹಂಚಿಕೆ ಬದಲು ಒಗ್ಗಟ್ಟಾಗಲು 5 ಕಾರಣವಿದು!
Recommended image2
ವಿಜಯಪುರ: ಟ್ಯೂಷನ್ ಕ್ಲಾಸ್ ಮುಗಿಸಿ ಮನೆಗೆ ತೆರಳುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿ ಅಟ್ಯಾಕ್!
Recommended image3
ಬೆಂಗಳೂರಿನ ಸೈಬರ್ ಸುಳಿಯಲ್ಲಿ ಮಾಯವಾದ ಸಾವಿರಾರು ಕೋಟಿ! 45 ತಿಂಗಳಲ್ಲಿ ಬರೋಬ್ಬರಿ 4,341 ಕೋಟಿ ವಂಚನೆ
Related Stories
Recommended image1
ಉಡುಪಿ, ಗೋಕರ್ಣ ಮಠಗಳಿಂದ ದೇಶಕ್ಕೆ ಸಾಂಸ್ಕೃತಿಕ ಶಕ್ತಿ : ಮೋದಿ
Recommended image2
ಸ್ಮೃತಿ ಮಂಧನಾ-ಪಲಾಶ್‌ ಮದುವೆ ಯಾವಾಗ? ಹುಡುಗನ ತಾಯಿ ನೀಡಿದ್ರು ಬಿಗ್‌ ಅಪ್‌ಡೇಟ್‌
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved