ಮೋದಿಗೆ ರಾಜಾತಿಥ್ಯ, ಅರಮನೆಯಲ್ಲಿ ಪ್ರಧಾನಿಗೆ ಬಗೆ-ಬಗೆಯ ತಿಂಡಿ
ಯೋಗ ದಿನಾಚರಣೆ ಪ್ರಯುಕ್ತ ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜವಂಶಸ್ಥರು ಉಪಾಹಾರದ ವ್ಯವಸ್ಥೆ ಮಾಡಿದ್ರು. ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರ ಆಹ್ವಾನದ ಉಪಹಾರಕೂಟದಲ್ಲಿ ಭಾಗಿಯಾದ ಮೋದಿ ಅವರಿಗೆ ದಕ್ಷಿಣ ಭಾರತ ಶೈಲಿಯ ತರೇಹವಾರಿ ತಿಂಡಿಗಳನ್ನು ಸಿದ್ಧಪಡಿಸಲಾಗಿದ್ದು, ಬಳ್ಳಿ ತಟ್ಟೆಯಲ್ಲಿ ಬಡಿಸಲಾಯಿತು. ತಿಂಡಿ ಮೆನುನಲ್ಲಿ ಏನೆಲ್ಲಾ ಇತ್ತು ಎನ್ನವ ಮಾಹಿತಿ ಇಲ್ಲಿದೆ ನೋಡಿ.

ಯೋಗ ದಿನಾಚರಣೆ ಪ್ರಯುಕ್ತ ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜವಂಶಸ್ಥರು ಉಪಾಹಾರದ ವ್ಯವಸ್ಥೆ ಮಾಡಿದ್ರು.
ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರ ಆಹ್ವಾನದ ಉಪಹಾರಕೂಟದಲ್ಲಿ ಪ್ರಧಾನಿ ನರೇಂದ್ರ ಮೊದಿ ಭಾಗಿಯಾದರು
ಸ್ಪೆಷಲ್ ಮೈಸೂರು ಪಾಕ್, ಇಡ್ಲಿ ಸಾಂಬರ್, ಅವಲಕ್ಕಿ, ಉಪ್ಪಿಟ್ಟು ಸೇರಿದಂತೆ ಮೋದಿ ಅವರಿಗೆ ದಕ್ಷಿಣ ಭಾರತ ಶೈಲಿಯ ತರೇಹವಾರಿ ತಿಂಡಿಗಳನ್ನು ಸಿದ್ಧಪಡಿಸಲಾಗಿತ್ತು.
ಮೋದಿ ಅವರಿಗೆ ದಕ್ಷಿಣ ಭಾರತ ಶೈಲಿಯ ತರೇಹವಾರಿ ತಿಂಡಿಗಳನ್ನು ಸಿದ್ಧಪಡಿಸಲಾಗಿದ್ದು, ಬಳ್ಳಿ ತಟ್ಟೆಯಲ್ಲಿ ಬಡಿಸಲಾಯಿತು.
ಪ್ರಧಾನಿಗಾಗಿ ಶುದ್ಧ ಸಸ್ಯಹಾರದ ಖಾದ್ಯಗಳನ್ನು ರಾಜಮಾತೆ ಪ್ರಮೋದಾ ದೇವಿ ಅವರ ನೇತೃತ್ವದಲ್ಲಿ ತಯಾರಿಸಲಾಗಿತ್ತು.
ಅರಮನೆ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಸತತ 45 ನಿಮಿಷ ಕಾಲ ಸಾವಿರಾರು ಯೋಗಪಟುಗಳ ಜತೆ ಯೋಗ ಪ್ರದರ್ಶನ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ನಂತರ ಡಿಜಿಟಲ್ ಯೋಗ ಕೇಂದ್ರವನ್ನು ಉದ್ಘಾಟಿಸಿದರು. ಬಳಿಕ ಅಂಬಾವಿಲಾಸ ಅರಮನೆಗೆ ತೆರಳಿದ ಮೋದಿ ಅವರು ರಾಜಮನೆತನದ ಆತಿಥ್ಯ ಸ್ವೀಕರಿಸಿದರು.
ಪ್ರಧಾನಿ ನರೇಂದ್ರ ಮೋದಿಗಾಗಿ ಸ್ಪೆಷಲ್ ಮೈಸೂರು ಪಾಕ್, ಇಡ್ಲಿ ಸಾಂಬರ್, ಅವಲಕ್ಕಿ, ಉಪ್ಪಿಟ್ಟು ಕೂಡ ಈ ಮೆನುವಿನಲ್ಲಿತ್ತು.
ರಾಜವಂಶಸ್ಥರ ಜತೆ ಪ್ರಧಾನಿ ಉಪಹಾರ ಸೇವಿದ್ರು. ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಹ ಇದ್ದರು.
ಅರಮನೆಯಲ್ಲಿ ನರೇಂದ್ರ ಮೋದಿ ಅವರು ಮೈಸೂರು ರಾಜವಂಶದ ಜೊತೆ ಒಂದು ಫೋಟ್ ತೆಗೆಸಿಕೊಂಡರು.
ಉಪಹಾರಕ್ಕೆ ಅರಮನೆಗೆ ಆಗಮಿಸಿದ ನರೇಂದ್ರ ಮೊದಿ ಅವರು ಯದವೀರ್ ಅವರ ಪುತ್ರ ಆದ್ಯವೀರ್ಗೆ ಹೂವಿನ ಹಾರ ಹಾಕಿದರು.
ಆಹ್ವಾನದ ಮೇರೆ ಅರಮನೆಗೆ ಆಗಮಿಸಿ ಉಪಹಾರ ಸೇವಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿಅ ಅವರಿಗೆ ಚಾಮುಂಡೇಶ್ವರಿ ಫೋಟೋ ಫ್ರೇಮ್ ನೀಡಿ ಬೀಳ್ಕೊಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ