ವಿಕ್ಟೋರಿಯಾಗೆ ನೋ ಎಂಟ್ರಿ: ಹೊರಗಡೆಯೇ ವೈದ್ಯರ ಜೊತೆ ಡಿಕೆಶಿ ಸಮಾಲೋಚನೆ
ವಿಕ್ಟೋರಿಯಾ ಆಸ್ಪತ್ರೆಗೆ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಸ್ಪತ್ರೆ ಹೊರ ಆವರಣದಲ್ಲೇ ವೈದ್ಯರು ಹಾಗೂ ಸಿಬ್ಬಂದಿ ಜತೆ ಸಮಾಲೋಚನೆ ನಡೆಸಿದರು. ಇಲ್ಲಿವೆ ಫೋಟೋಸ್
ಬೆಂಗಳೂರು ಸೇಋಇದಂತೆ ರಾಜ್ಯದಲ್ಲಿ ಕೊರೋನಾ ಕಾಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಆದರೆ ವಿಕ್ಟೋರಿಯಾ ಆಸ್ಪತ್ರೆ ಒಳಗೆ ಪ್ರವೇಶ ನಿರಾಕರಿಸಲಾಗಿದೆ.
ಡಿ.ಕೆ. ಶಿವಕುಮಾರ್ ಅವರು ಆಸ್ಪತ್ರೆ ಹೊರ ಆವರಣದಲ್ಲೇ ವೈದ್ಯರು ಹಾಗೂ ಸಿಬ್ಬಂದಿ ಜತೆ ಸಮಾಲೋಚನೆ ನಡೆಸಿದರು.
ಆಸ್ಪತ್ರೆ ಸಿಬ್ಬಂದಿ, ಹಾಗೂ ಅಧಿಕಾರಿಗಳು ಡಿಕೆಶಿ ಜೊತೆಗೆ ಹೊರಗೆ ಕುಳಿತು ಮಾತನಾಡಿದರು.
ಆಸ್ಪತ್ರೆಯಲ್ಲಿ ಕೊರೋನಾ ಸೊಂಕಿತರ ಬಗ್ಗೆ, ಅವರ ಸ್ಥಿತಿಗತಿಯ ಬಗ್ಗೆ ಚರ್ಚಿಸಿದರು.
ಆಸ್ಪತ್ರೆ ಭೇಟಿ ಸಂದರ್ಭ ಮಾಸ್ಕ್ ಧರಿಸಿ, ಗ್ಲೌಸ್ ಹಾಕಿಕೊಂಡಿದ್ದರು.