MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಫೀಸ್ ಎದುರು ಗನ್ ಪತ್ತೆ; ಕಚೇರಿ ಸಿಬ್ಬಂದಿಗೆ ಆತಂಕ!

ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಫೀಸ್ ಎದುರು ಗನ್ ಪತ್ತೆ; ಕಚೇರಿ ಸಿಬ್ಬಂದಿಗೆ ಆತಂಕ!

ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಬೆಂಗಳೂರಿನ ವಸಂತನಗರದಲ್ಲಿರುವ ಕಚೇರಿ ಎದುರು ಗನ್ ಪತ್ತೆಯಾಗಿದೆ. ಇದರಿಂದ ಸಚಿವರ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಸ್ಥಳೀಯ ನಿವಾಸಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

1 Min read
Sathish Kumar KH
Published : Jun 11 2025, 04:46 PM IST
Share this Photo Gallery
  • FB
  • TW
  • Linkdin
  • Whatsapp
14
Image Credit : Asianet News

ಬೆಂಗಳೂರು (ಜೂ. 11): ರಾಜ್ಯದ ಕಾರ್ಮಿಕರ ಕಲ್ಯಾಣ ಸಚಿವ ಸಂತೋಷ್ ಲಾಡ್ ಅವರ ಆಫೀಸ್ ಎದುರು ಅನೇಕ ನಿಮಿಷಗಳ ಕಾಲ ಭಯಭೀತ ವಾತಾವರಣ ನಿರ್ಮಾಣಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ. ರಾಜಧಾನಿಯ ವಸಂತನಗರದಲ್ಲಿರುವ ಲಾಡ್ ಅವರ ಆಫೀಸ್ ಎದುರು ಆಕಸ್ಮಿಕವಾಗಿ ಪತ್ತೆಯಾದ ಗನ್‌ಗೆ ಸಂಬಂಧಿಸಿದಂತೆ ಕೆಲ ಕಾಲ ಭೀತಿ ಮಡುಗಟ್ಟಿದ ಸಂದರ್ಭ ಉಂಟಾಯಿತು.

24
Image Credit : Asianet News

ಸಚಿವ ಲಾಡ್ ಅವರ ಆಫೀಸ್ ಎದುರು ಸಾರ್ವಜನಿಕರೊಬ್ಬರು ಗನ್ ಬಿದ್ದಿರುವುದನ್ನು ಗಮನಿಸಿದರು. ಕೂಡಲೇ ಪರಿಸರದಲ್ಲಿ ಆತಂಕವೊಂದು ವ್ಯಕ್ತವಾಯಿತು ಮತ್ತು ಈ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಯಿತು. ಬೆಳ್ಳಂಬೆಳಿಗ್ಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಕೂಡಲೇ ಗನ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು.

Related Articles

Related image1
ಬಿಜೆಪಿಗೆ ಪಾಕ್-ಮುಸ್ಲಿಂ ಬಿಟ್ಟರೆ ಬೇರೆ ವಿಷಯವೇ ಇಲ್ಲ: ಸಂತೋಷ ಲಾಡ್‌ ಕಿಡಿ
Related image2
Santosh Lad: ಸಂಚಾರಿ ಆರೋಗ್ಯ ಘಟಕ ವಾಹನಕ್ಕೆ ಚಾಲನೆ, ಸಂತೋಷ ಲಾಡ್‌ರಿಂದ ಪೂಜೆಗೆ ಹಿಂದೇಟು!
34
Image Credit : Asianet News

ನಂತರದ ತನಿಖೆಯಲ್ಲಿ ಇದು ನಿಜವಾದ ಗನ್ ಅಲ್ಲ, ಮಕ್ಕಳ ಆಟಿಕೆ ಗನ್ ಎಂಬುದು ಸ್ಪಷ್ಟವಾಯಿತು. ಈ ಆಟಿಕೆ ಗನ್ ಒಂದು ಆಟೋದಲ್ಲಿ ಬಿದ್ದಿದ್ದಂತೆ ತೋರಿ, ಮಕ್ಕಳ ಆಟದಲ್ಲಿ ಭಾಗವಾಗಿರಬಹುದೆಂಬ ನಿಗಾಧೆ ವ್ಯಕ್ತವಾಗಿದೆ. ಈ ಘಟನೆ ಕೆಲ ಕಾಲ ಸಾರ್ವಜನಿಕರಲ್ಲಿ ಗೊಂದಲ ಹಾಗೂ ಆತಂಕವನ್ನು ಹುಟ್ಟಿಸಿದರೂ, ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮ ಕೈಗೊಂಡಿದ್ದಾರೆ. ಪೊಲೀಸರು ಸಾರ್ವಜನಿಕರಲ್ಲಿ ಭಯಪಡದೇ ಶಾಂತವಾಗಿರುವಂತೆ ಮನವಿ ಮಾಡಿದ್ದಾರೆ.

44
Image Credit : Asianet News

ಒಟ್ಟಾರೆ ನಡೆದ ಘಟನೆ ಪ್ರಮುಖಾಂಶ:

  • ವಸಂತನಗರದಲ್ಲಿ ಸಚಿವ ಲಾಡ್ ಆಫೀಸ್ ಎದುರು ಪತ್ತೆಯಾದ ಗನ್
  • ಪ್ರಾಥಮಿಕವಾಗಿ ನಿಜವಾದ ಗನ್ ಎನ್ನುವ ಭ್ರಮೆ
  • ಹೈಗ್ರೌಂಡ್ಸ್ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವನೆ
  • ಪರಿಶೀಲನೆ ಬಳಿಕ ಅದು ಮಕ್ಕಳ ಆಟಿಕೆ ಗನ್ ಎಂದು ಖಚಿತ
  • ಯಾವುದೇ ಅಪಾಯವಿಲ್ಲ ಎಂದು ಪೊಲೀಸ್ ದೃಢೀಕರಣ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಸಂತೋಷ್ ಲಾಡ್
ಕರ್ನಾಟಕ ಸುದ್ದಿ
ಬೆಂಗಳೂರು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved