ಯೋಗರಾಜ್ ಭಟ್ ರಚನೆಯ ಕೊರೋನಾ ವಾರಿಯರ್ಸ್ ಹಾಡನ್ನು ಬಿಡುಗಡೆ ಮಾಡಿದ ಸಿಎಂ!
ಕೋವಿಡ್ 19 ತಡೆಯಲು ಹಗಲಿರುಳು ಶ್ರಮಿಸುತ್ತಿರುವ ಕರೋನ ವಾರಿಯರ್ಸ್ ಗೆ ನಮನ ಸಲ್ಲಿಸೋ ಹಾಡನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಿಡುಗಡೆ ಮಾಡಿದ್ದಾರೆ. ವಿಶೇಷ ಅಂದರೆ ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್ ರಚಿಸಿ ನಿರ್ದೇಶನ ಮಾಡಿರೋ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರೆ ವಿಜಯ್ ಪ್ರಕಾಶ್ ಹಾಡಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಕೊರೋನಾ ವಾರಿಯರ್ಸ್ ಕುರಿತು ಹಾಡು ಬರೆದ ನಿರ್ದೇಶನ ಮಾಡಿದ ಯೋಗರಾಜ್ ಭಟ್
ಅರ್ಜುನ್ ಜನ್ಯ ಸಂಗೀತಾ ಹಾಗೂ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಡಿರುವ ಹಾಡು ಬಿಡುಗಡೆ
ಗೃಹ ಕಚೇರಿ ಕೃಷ್ಣಾ ದಲ್ಲಿ ಹಾಡು ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಕೋವಿಡ್ 19 ತಡೆಯಲು ಹಗಲಿರುಳು ಶ್ರಮಿಸುತ್ತಿರುವ ಪೊಲೀಸರ, ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ವಾರಿಯರ್ಸ್ ಕುರಿತ ಹಾಡು
ಬಿಡುಗಡೆ ಕಾರ್ಯಕ್ರಮದಲ್ಲಿ ನಗರ ಪೋಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಕೂಡ ಹಾಜರಿದ್ದರು
ಯೋಗರಾಜ್ ಭಟ್ ಜೊತೆ ಗಾಯಕ ವಿಜಯ್ ಪ್ರಕಾಶ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಉಪಸ್ಥಿತಿ
ಊರಿಗೂರೇ ಖಾಲಿ, ದಾರಿ ತುಂಬಾ ಬೇಲಿ, ತಿಳಿದುಕೊಳ್ಳುವ ಬನ್ನಿ, ಬಾನ ಬಣ್ಣ ನೀಲಿ ಎಂಬ ಹಾಡು
ತಿರುಗುತಿರುವ ಭೂಮಿ ಇಂದು, ನಿಲ್ಲಬಹುದೇ ಜ್ವರವೂ ಬಂದು ಎಂದು ಕೊರೋನಾ ಕುರಿತು ಉಲ್ಲೇಖಿಸಿರುವ ಯೋಗರಾಜ್ ಭಟ್
ಪೊಲೀಸ್, ಆಸ್ಪತ್ರೆ ಸಿಬ್ಬಂದಿ, ಪೌರ ಕಾರ್ಮಿಕರುು ಆ್ಯಂಬುಲೆನ್ಸ್ ಸಿಬ್ಬಂದಿ, ಮಾಧ್ಯಮ, ನಿರ್ಗತಿಕರಿಗೆ ಸಹಾಯ ಮಾಡಿದ ದಾನಿಗಳ ಕುರಿತು ಹಾಡು