MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • Chikkaballapur: ಹಿಂದು ಹುಡುಗನ ಜೊತೆ ಮುಸ್ಲಿಂ ಹುಡುಗಿ ಮದುವೆ, ಪೊಲೀಸರ ಭದ್ರತೆ ಕೋರಿದ ನವ ಜೋಡಿ!

Chikkaballapur: ಹಿಂದು ಹುಡುಗನ ಜೊತೆ ಮುಸ್ಲಿಂ ಹುಡುಗಿ ಮದುವೆ, ಪೊಲೀಸರ ಭದ್ರತೆ ಕೋರಿದ ನವ ಜೋಡಿ!

ಚಿಕ್ಕಬಳ್ಳಾಪುರದಲ್ಲಿ ಹಿಂದೂ ಹುಡುಗ ಮತ್ತು ಮುಸ್ಲಿಂ ಹುಡುಗಿಯ ಅಂತರ್‌ಧರ್ಮೀಯ ವಿವಾಹ ನಡೆದಿದ್ದು, ಕುಟುಂಬದ ವಿರೋಧದ ಹಿನ್ನೆಲೆಯಲ್ಲಿ ನವವಿವಾಹಿತ ಜೋಡಿ ಪೊಲೀಸ್ ಭದ್ರತೆ ಕೋರಿದೆ. ನಾಲ್ಕು ವರ್ಷಗಳ ಪ್ರೀತಿಯ ನಂತರ ದೇವಸ್ಥಾನವೊಂದರಲ್ಲಿ ಸರಳವಾಗಿ ವಿವಾಹ ನೆರವೇರಿದೆ.

1 Min read
Santosh Naik
Published : May 16 2025, 07:53 PM IST
Share this Photo Gallery
  • FB
  • TW
  • Linkdin
  • Whatsapp
15

Chikkaballapur  ಜಿಲ್ಲೆಯಲ್ಲಿ ಅಂತರ್‌ ಧರ್ಮೀಯ ವಿವಾಹ ನಡೆದಿದ್ದು, ನವವಿವಾಹಿತ ಜೋಡಿ ಈಗ ಪೊಲೀಸ್‌ ಭದ್ರತೆಗೆ ಮನವಿ ಮಾಡಿದೆ. ಚಿಕ್ಕಬಳ್ಳಾಪುರದಲ್ಲಿ ಹಿಂದೂ ಹುಡುಗನ ಜೊತೆ ಮುಸ್ಲಿಂ ‌ಸಮುದಾಯದ ಹುಡುಗಿ ‌ಮದುವೆ ನಡೆದಿದೆ. ಜಿಲ್ಲೆಯ ಪೋಶೆಟ್ಟಿಹಳ್ಳಿ‌ ಬಳಿಯ ದೇವಸ್ಥಾನವೊಂದರಲ್ಲಿ ಮದುವೆ ನಡೆದಿದೆ.

25

ಗುಡಿಬಂಡೆ  ತಾಲೂಕಿನ  ಸೋಮೇಶ್ವರ ಗ್ರಾಮಕ್ಕೆ ಸೇರಿದ ನಜ್ಮಾ ಎಂಬ ಯುವತಿ ಹಿಂದೂ ಹುಡುಗನನ್ನು ವರಿಸಿದ್ದಾಳೆ. ಕಳೆದ ನಾಲ್ಕು ವರ್ಷಗಳಿಂದ ಈ ಜೋಡಿ ಪ್ರೀತಿಯಲ್ಲಿತ್ತು ಎಂದು ವರದಿಗಳಿ ತಿಳಿಸಿವೆ.

Related Articles

Related image1
ಪತ್ನಿ ಸೇಫ್, ಅಪಾಯದಲ್ಲಿ ಉದ್ಯೋಗ: ಸಂಕಷ್ಟದಲ್ಲಿ ಪಾಕ್ ಮಹಿಳೆಯನ್ನು ಮದುವೆಯಾದ CRPF ಸೈನಿಕ
Related image2
ಯಾವ ಧರ್ಮವು ಕೆಡುಕನ್ನು ಬೋಧಿಸುವುದಿಲ್ಲ: ಶ್ರೀಜಗದ್ಗುರು ಬಸವಲಿಂಗ ಮಹಾಸ್ವಾಮಿ
35

ಚಿಕ್ಕಬಳ್ಳಾಪುರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ ವೇಳೆ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಅಂದಿನಿಂದಲೂ ಇವರು ಸಮಾಜಕ್ಕೆ ಗೊತ್ತಾಗದ ರೀತಿಯಲ್ಲಿ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ

45

ಆದರೆ, ಹಿಂದು ಹುಡುಗನ ಜೊತೆ ಮದುವೆಯಾಗಲಿ ನಜ್ಮಾ ಮನೆಯಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಬೇರೆ ಹುಡುಗನೊಂದಿಗೆ ಮದುವೆ ಫಿಕ್ಸ್‌ ಆಗುವ ಮುನ್ನವೇ ಹಿಂದು ಹುಡುಗನ ಜೊತೆ ನಜ್ಮಾ ಹಸೆಮಣೆ ಏರಿದ್ದಾರೆ.

55

ಪ್ರಿಯಕರ ಹರೀಶ್ ಬಾಬು ಜೊತೆ ನಜ್ಮಾ ಮದುವೆ ಪೋಶೆಟ್ಟಿಹಳ್ಳಿ ಬಳಿಕ ದೇವಸ್ಥಾನದಲ್ಲಿ ಬಹಳ ಸರಳವಾಗಿ ನಡೆದಿದೆ. ಚಿಕ್ಕಬಳ್ಳಾಪುರ ತಾಲೂಕು ಯಾಪಲಹಳ್ಳಿ ಗ್ರಾಮದ ಹರೀಶ್ ಖುಷಿಯಿಂದ ವಿವಾಹ ಜೀವನಕಕ್ಕೆ ಕಾಲಿಟ್ಟಿದ್ದಾರೆ. ಮದುವೆಗೆ ಹುಡುಗಿಯ ಮನೆಯಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಅನ್ಯ ಧರ್ಮ ಮದುವೆ ಹಿನ್ನೆಲೆ ರಕ್ಷಣೆ ಕೋರಿ ನವ ಜೋಡಿ ಪೊಲೀಸರ ಮೊರೆ ಹೋಗಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಚಿಕ್ಕಬಳ್ಳಾಪುರ
ಕರ್ನಾಟಕ ಸುದ್ದಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved