MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಕ್ಯಾಬ್ ಕಂಪೆನಿಗಳ ಮೋಸದ ಜೊತೆಗೆ ಆಟೋ ಮೀಟರ್‌ ನಲ್ಲೂ ಗೋಲ್‌ ಮಾಲ್‌: ಬೇಸತ್ತ ಸವಾರರು!

ಕ್ಯಾಬ್ ಕಂಪೆನಿಗಳ ಮೋಸದ ಜೊತೆಗೆ ಆಟೋ ಮೀಟರ್‌ ನಲ್ಲೂ ಗೋಲ್‌ ಮಾಲ್‌: ಬೇಸತ್ತ ಸವಾರರು!

ಬೆಂಗಳೂರಿನಲ್ಲಿ ಆಟೋರಿಕ್ಷಾ ಮೀಟರ್ ಮೋಸದಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಅತಿಯಾದ ದರ, ಮೀಟರ್‌ ತಂತ್ರಗಳು, ಮತ್ತು ಅಸಮರ್ಪಕ ನಿಯಂತ್ರಣಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ. ಇದಕ್ಕೆ ಪರಿಹಾರವೇನು?

3 Min read
Author : Gowthami K
Published : Jun 20 2025, 03:51 PM IST
Share this Photo Gallery
  • FB
  • TW
  • Linkdin
  • Whatsapp
18
Image Credit : Getty

ಬೆಂಗಳೂರು: "ಅಂಜಲಿ" (ಹೆಸರು ಬದಲಾಯಿಸಲಾಗಿದೆ) ಇತ್ತೀಚೆಗೆ ಜಯನಗರದಲ್ಲಿ ಆಟೋ ಹಿಡಿದಳು. ಚಾಲಕನು ಮೀಟರ್ ಬಳಸಲು ಒಪ್ಪಿಕೊಂಡಾಗ ಆಕೆ ಖುಷಿಪಟ್ಟಳು. ಯಾಕೆಂದರೆ ಆಟೋ ಡ್ರೈವರ್ ಮೀಟರ್‌ ಹಾಕುತ್ತೇನೆ ಎನ್ನುವುದು ಈಗ ಅಪರೂಪ. ಅಂಜಲಿ ತಲುಪಬೇಕಾದ ಸ್ಥಳ BTM ಲೇಔಟ್ ಆಗಿತ್ತು. ಅದು ಜಯನಗರದಿಂದ ಸುಮಾರು 4 ಕಿಲೋಮೀಟರ್ ದೂರವಿತ್ತು. ಸವಾರಿ ಆರಂಭದಲ್ಲಿ ಚೆನ್ನಾಗಿಯೇ ಇತ್ತು. ತದನಂತರ ಚಾಲಕ ವಿಚಿತ್ರವಾಗಿ ನಡೆದುಕೊಂಡ, ಟ್ರಾಫಿಕ್ ಕಡಿಮೆಯಿತ್ತು. ಆದರೆ ತಲುಪಬೇಕಾದ ಸ್ಥಳ ತಲುಪಿದಾಗ ಮೀಟರ್ ₹400 ತೋರಿಸಿತು. ಅಂಜಲಿ ಬೆಚ್ಚಿಬಿದ್ದಳು. ಆಘಾತ ಮತ್ತು ಗೊಂದಲಕ್ಕೊಳಗಾದ ಅಂಜಲಿಗೆ ಏನೋ ತಪ್ಪಾಗಿದೆ ಎಂದು ತಡವಾಗಿ ಅರಿವಾಯಿತು. ಇದು ಇವಳೊಬ್ಬಳ ಕಥೆಯಲ್ಲಿ ಬೆಂಗಳೂರಿನಲ್ಲಿ ಪ್ರತೀ ದಿನ ಇಂತಹ ಘಟನೆಗಳು ನಡೆಯುತ್ತಲೇ ಇದೆ. ನಗರದ ಹಲವಾರು ನಿವಾಸಿಗಳು ಆಟೋರಿಕ್ಷಾ ಮೀಟರ್ ಮೋಸದ ಬಗ್ಗೆ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ.

28
Image Credit : Social Media

ಇಷ್ಟು ಮಾತ್ರವಲ್ಲ ಬೆಂಗಳೂರಿನಲ್ಲಿ ಸೇವೆ ನೀಡುತ್ತಿರುವ ಆ್ಯಪ್‌  ಆಧಾರಿತ ಸಂಸ್ಥೆಗಳಾದ ಓಲಾ, ಊಬರ್, ರ್ಯಾಪಿಡೋ ಕೂಡ ತನ್ನ ಮಾಮೂಲಿ ಹಣಕ್ಕಿಂತ ಹೆಚ್ಚಿನ ಶುಲ್ಕ ವಿಧಿಸುತ್ತಿದೆ. 2 ಕಿ.ಮೀಟರ್‌ ಗೆ 80 ರೂ ನಿಂದ 100ರೂ ಸಾಮಾನ್ಯವಾಗಿದೆ. ಇನ್ನು ಮಳೆ ಬಂದರೆ ಶುಲ್ಕ ದುಪ್ಪಟ್ಟು ಆಗುತ್ತಿದೆ. ಇದರ ಜೊತೆಗೆ ಆಟೋಗೆ ಕೈ ಹಿಡಿದು ಹತ್ತಿದರೆ ಮೀಟರ್ ಹಾಕೋದಿಲ್ಲ 1 ಕಿಮೀ 50 ರೂ ಕೊಟ್ಟರೆ ಬರುತ್ತೇವೆ ಎಂಬ ಉತ್ತರಗಳು ಕೂಡ ಬರುತ್ತವೆ. ಅಂದರೆ ಬೆಂಗಳೂರಿನಲ್ಲಿ 2 ಕೀಮಿ ಹೋಗಲು ಆಟೋಗಳ ಮಿನಿಮಮ್ ಚಾರ್ಚ್ 30ರೂ ಇದೆ. ಆದರೆ ಆಟೋ ಡೈವರ್‌ ಗಳು ಮಿನಿಮಮ್ ಚಾರ್ಜ್ 40 ರಿಂದ 50 ರೂ ಕೊಡಲೇಬೇಕು ಇಲ್ಲದಿದ್ದರೆ ಮೀಟರ್‌ ಹಾಕೋದಿಲ್ಲ ಎಂದು ಹೇಳುತ್ತಿದ್ದಾರೆ.

Related Articles

Related image1
ಬೆಂಗಳೂರಿನಲ್ಲಿ ಹೆಚ್ಚಾಗಲಿದೆಯಾ ಆಟೋ ಪ್ರಯಾಣ ದರ ? ಡಿಸಿಗೆ ಪತ್ರ
Related image2
ಬೈಕ್ ಟ್ಯಾಕ್ಸಿಗಳಿಗೆ ಹೈಕೋರ್ಟ್ ಶಾಕ್: ಓಲಾ, ಉಬರ್, ರಾಪಿಡೋ ಸೇವೆ ನಿಷೇಧ ಮುಂದುವರಿಕೆ!
38
Image Credit : Social Media

ಮೀಟರ್ ನಲ್ಲಿ ಮೋಸ ಮಾತ್ರ!

ಹಲವಾರು ಆಟೋಗಳು ಮೀಟರ್ ಇರದೆ ಸಂಚರಿಸುತ್ತಿವೆ. ಮಾತ್ರವಲ್ಲ ಆಟೋ ಹತ್ತಿದ ನಂತರ ಮೀಟರ್ ಮೇಲೆ 20 ರೂ ಕೊಡಿ 50 ರೂ ಕೊಡಿ ಎಂದೂ ಡಿಮ್ಯಾಂಡ್ ಮಾಡುತ್ತಾರೆ. 1 ಕಿ.ಮೀ ದೂರ ಇದೆ ಎಂದರೆ ಆಟೋದವರು ಬರಲು ಒಪ್ಪುವುದೇ ಇಲ್ಲ. ಮಾತ್ರವಲ್ಲ 100 ರೂ ಡಿಮ್ಯಾಂಡ್ ಮಾಡುತ್ತಾರೆ ಎಂದರೆ ನಂಬಲೇಬೇಕು. ಕೆಲವು ಆಟೋಗಳಲ್ಲಿ ಮೀಟರ್ ಇದ್ದರೂ, ನವೀಕೃತ ಮೀಟರ್‌ಗಳು ಹಾಕಿಲ್ಲ. ಹೀಗಾಗಿ ಹಳೆ ಮೀಟರ್‌ ಗಳು ಅಸಾಧಾರಣ ವೇಗದಲ್ಲಿ ಓಡುತ್ತದೆ. ಹೆಚ್ಚು ಬಿಲ್‌ ತೋರಿಸುತ್ತದೆ. ಇದರಿಂದಾಗಿ ಸಣ್ಣದಾದ ಪ್ರಯಾಣಗಳಿಗೂ ಅನಗತ್ಯ ಹೆಚ್ಚುವರಿ ಹಣ ಪಾವತಿಸಲು ಪ್ರಯಾಣಿಕರು ಹಿಂದು ಮುಂದೂ ನೋಡುತ್ತಿದ್ದಾರೆ

48
Image Credit : Social Media

ಇತ್ತೀಚೆಗೆ ಪ್ರತಿಯೊಬ್ಬ ಪ್ರಯಾಣಿಕಗೂ ಸಾಮಾನ್ಯ ದರಕ್ಕಿಂತ ಎರಡುಪಟ್ಟು ಹೆಚ್ಚು ಹಣ ನೀಡುವ ಅನಿವಾರ್ಯ ಸ್ಥಿತಿ ಎದುರಾಗುತ್ತಿದೆ. ಇದು ನಿರಂತರ ನಡೆಯುತ್ತಿದ್ದು. ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. "ಎಷ್ಟು ದೂರ ಹೋಗಬೇಕು ಅನ್ನೋದಕ್ಕಿಂತ ಎಷ್ಟು ಹಣ ಕೊಡಬೇಕು ಅನ್ನೋದನ್ನೇ ಹೆಚ್ಚು ಯೋಚಿಸಬೇಕಾಗಿದೆ" ಎಂಬದು ಹಲವರ ಅಭಿಪ್ರಾಯ. ಸಾಮಾನ್ಯವಾಗಿ ₹60–₹80 ಗೆ ಹೋಗುವ ಸ್ಥಳಕ್ಕೆ ₹200–₹300 ಕೊಡಬೇಕಾದರೆ, ಸಾರ್ವಜನಿಕರು ಆಟೋ ಸೇವೆ ಬಳಕೆಗೆ ಹಿಂದೇಟು ಹಾಕುತ್ತಾರೆ. ಈ ತೊಂದರೆ ಇಡೀ ಸಾರಿಗೆ ವ್ಯವಸ್ಥೆಯ ಮೇಲೆಯೇ ನಂಬಿಕೆ ಕಳೆದುಹೋಗುವ ಸ್ಥಿತಿಗೆ ಬಂದು ತಲುಪಿದೆ.

58
Image Credit : Freepik

ವಿಪರ್ಯಾಸವೆಂದರೆ, ವಿಶೇಷವಾಗಿ ಬೈಕ್ ಟ್ಯಾಕ್ಸಿ ಕರ್ನಾಟಕದಲ್ಲಿ ನಿಷೇಧಗೊಂಡ ನಂತರ ಆಟೋ ಚಾಲಕರು ತಮಗೆ ಬೇಕಾದ ರೀತಿಯಲ್ಲಿ ಬೇಕಾಬಿಟ್ಟಿ ದಂಡ ವಿಧಿಸುತ್ತಿದ್ದಾರೆ, ಸಾರಿಗೆ ಇಲಾಖೆಯು ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳತ್ತ ಕಣ್ಣು ಮುಚ್ಚಿಕೊಂಡಿದೆ. ಬೈಕ್‌ಗಳನ್ನು ನಿಷೇಧಗೊಳಿಸುವ ಬದಲು, ಮೀಟರ್‌ನಿಂದ ಕಾರ್ಯನಿರ್ವಹಿಸದ, ಹೆಚ್ಚುವರಿ ಶುಲ್ಕಕ್ಕಾಗಿ ಮತ್ತು ಓಡಿಸಲು ನಿರಾಕರಿಸಿದ್ದಕ್ಕಾಗಿ ಪ್ರಯಾಣಿಕರನ್ನು ಸುಲಿಗೆ ಮಾಡುವ ಆಟೋರಿಕ್ಷಾಗಳ ಮೇಲೆ ಸಾರಿಗೆ ಇಲಾಖೆ ಸಿಬ್ಬಂದಿ ಏಕೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.

68
Image Credit : X

ಇದಕ್ಕೆ ಪರಿಹಾರವೇನು?

  • ಪ್ರಾಮಾಣಿಕ ಮೀಟರ್ ನಿರ್ವಹಣೆಗೆ ಕಟ್ಟುನಿಟ್ಟಾದ ನಿಯಂತ್ರಣ ಅಗತ್ಯ.
  • ಆಟೋ ಫೇರ್‌ಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಾಗಬೇಕು.
  • ನಿಯಮ ಉಲ್ಲಂಘನೆ ಮಾಡಿದ ಚಾಲಕರ ವಿರುದ್ಧ ತಕ್ಷಣದ ಕ್ರಮ, ದಂಡ, ಲೈಸೆನ್ಸ್ ಸ್ಥಗಿತ ಮಾಡಬೇಕು
  • ಜನಸಹಭಾಗಿತ್ವದ ದೂರವಾಣಿ ಲೈನ್ ಅಥವಾ ಆಪ್ ಮೂಲಕ ಸಾರ್ವಜನಿಕರಿಂದ ನೇರ ದೂರು ಸ್ವೀಕರಿಸಬಹುದಾಗಿದೆ.

ಬೆಂಗಳೂರು ಎಂಬ ಅಭಿವೃದ್ಧಿ ಪಟ್ಟಣದಲ್ಲಿ, ಆಟೋರಿಕ್ಷಾ ಮೀಟರ್ ಸಮಸ್ಯೆ ಎಂದಿಗೂ ಮುಕ್ತಿಯೇ ಇಲ್ಲದ ದ್ವಂದ್ವವಾಗುತ್ತಿದೆ. ಸಮರ್ಪಕ ಕ್ರಮವಿಲ್ಲದಿದ್ದರೆ, ಸಾರ್ವಜನಿಕರ ನಂಬಿಕೆ ಕಳೆದುಹೋಗುವುದು ಮಾತ್ರವಲ್ಲ, ನಗರ ಸಾರಿಗೆ ವ್ಯವಸ್ಥೆಯ ಮೆರೆಗೂ ಕಳೆದುಹೋಗುತ್ತದೆ

78
Image Credit : Getty

ಇಂದಿರಾನಗರದಿಂದ ಎಂಜಿ ರೋಡ್‌ಗೆ ಪ್ರಯಾಣಿಸಲು ನನಗೆ 180 ರೂ. ಶುಲ್ಕ ವಿಧಿಸಲಾಗುತ್ತಿತ್ತು. ನಾನು ಆಗಾಗ ಇದೇ ಮಾರ್ಗದಲ್ಲಿ ಸಂಚರಿಸುತ್ತೇನೆ ಮತ್ತು ಸಾಮಾನ್ಯವಾಗಿ 80–90 ರೂ. ಮೀಟರ್‌ ತೋರಿಸುತ್ತದೆ. ನಾನು ಚಾಲಕನನ್ನು ಪ್ರಶ್ನಿಸಿದಾಗ, ಅವನು ಮೀಟರ್ ಕಡೆಗೆ ಬೆರಳು ತೋರಿಸಿ. ಹೆಗಲು ಮೇಲೆ ಮಾಡಿ ನೀವು ಅಸಹಾಯಕರಾಗಿದ್ದೀರಿ ಮತ್ತು ಮೋಸ ಹೋಗಿದ್ದೀರಿ ಎಂದು ಭಾವಿಸಿದರೆ ಪ್ರಯೋಜನವಿಲ್ಲ" ಎಂದು ಎಂಜಿ ರಸ್ತೆಯ ವಿದ್ಯಾರ್ಥಿನಿ ಅಕ್ಷರ ಶ್ರೀವಾಸ್ತವ್ ಹೇಳಿದರು.

88
Image Credit : KittKittGuddeHaakonu r/Bengaluru reddit

ಇನ್ನು ಜಯನಗರದ ಹಿರಿಯ ವ್ಯಕ್ತಿಯೊಬ್ಬರಾದ ಸುಬ್ರಮಣಿಯಂ ಶಾಸ್ತ್ರಿ ಅವರಿಗೂ ಇದೇ ರೀತಿಯ ಅನುಭವವಾಗಿದೆ. "ನಾನು ಮತ್ತು ನನ್ನ ಹೆಂಡತಿ ಕೇವಲ 3 ಕಿ.ಮೀ ದೂರದಲ್ಲಿರುವ ಹತ್ತಿರದ ಕ್ಲಿನಿಕ್‌ಗೆ ಆಟೋ ಹತ್ತಿದೆವು. ಮೀಟರ್ 210 ರೂ. ತೋರಿಸಿದೆ! ನಾನು ಇದನ್ನು ಪ್ರಶ್ನಿಸಿದ್ದಕ್ಕೆ ಚಾಲಕ ಸಿಟ್ಟಾದ. ನಮ್ಮ ವಯಸ್ಸಿನಲ್ಲಿ, ವಾದ ಮಾಡುವುದು ಸುಲಭವಲ್ಲ. ನಾವು ಈಗ ತೀರಾ ಅಗತ್ಯವಿಲ್ಲದಿದ್ದರೆ ಮಾತ್ರ ಆಟೋಗಳನ್ನು ಹಿಡಿಯುತ್ತೇವೆ. ಅಧಿಕಾರಿಗಳು ಈ ಬಗ್ಗೆ ಮಧ್ಯಪ್ರವೇಶಿಸಬೇಕು. ಇದು ದೈನಂದಿನ ಹೋರಾಟವಾಗುತ್ತಿದೆ." ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ದಯವಿಟ್ಟು ಕನಿಷ್ಠ ಮೀಟರ್ ಬಳಸುವ ಒಬ್ಬ ಆಟೋ ಚಾಲಕನನ್ನು ನಮಗೆ ಪರಿಚಯಿಸಿ. ಇಂದು ಆನಂದರಾವ್ ವೃತ್ತದಿಂದ ಜೆಪಿ ನಗರ 1 ನೇ ಹಂತಕ್ಕೆ ಹೋಗಲು ನನ್ನಿಂದ 400 ರೂ. ಕೇಳಲಾಯಿತು ಎಂದು ಭವೇಶ್ ಎಂ ವ್ಯಾಸ್ ಎಂಬ ವ್ಯಕ್ತಿ ಪೋಸ್ಟ್ ಹಾಕಿಕೊಂಡಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಆಟೋಮೊಬೈಲ್
ಪ್ರವಾಸ
ಕರ್ನಾಟಕ ಸುದ್ದಿ
ಬೆಂಗಳೂರು

Latest Videos
Recommended Stories
Recommended image1
ಹೂಳಲು ತೆಗೆದಿದ್ದ ಗುಂಡಿ ಮುಚ್ಚಿ, ಮೃತದೇಹ ಸುಟ್ಟಿದ್ದೇಕೆ? ಸಾಕ್ಷಿ ನಾಶದ ಆರೋಪಕ್ಕೆ ಸಿಕ್ಕಿತು ಬಿಗ್ ಟ್ವಿಸ್ಟ್!
Recommended image2
Ballari Clash: ಪವನ್ ನೆಜ್ಜೂರು ಎಲ್ಲಿದ್ದಾರೆ? ಬದುಕಿದ್ದರೆ ಬಂದು ಉತ್ತರಿಸಲಿ: ರಾಮುಲು ಹೊಸ ಬಾಂಬ್!
Recommended image3
ಬಳ್ಳಾರಿ ಗಲಾಟೆಯಲ್ಲಿ ಮೃತಪಟ್ಟ ರಾಜಶೇಖರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಿದ್ದಕ್ಕೆ ಸಚಿವ ಜಮೀರ್ ವಿರುದ್ಧ ದೂರು
Related Stories
Recommended image1
ಬೆಂಗಳೂರಿನಲ್ಲಿ ಹೆಚ್ಚಾಗಲಿದೆಯಾ ಆಟೋ ಪ್ರಯಾಣ ದರ ? ಡಿಸಿಗೆ ಪತ್ರ
Recommended image2
ಬೈಕ್ ಟ್ಯಾಕ್ಸಿಗಳಿಗೆ ಹೈಕೋರ್ಟ್ ಶಾಕ್: ಓಲಾ, ಉಬರ್, ರಾಪಿಡೋ ಸೇವೆ ನಿಷೇಧ ಮುಂದುವರಿಕೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved