MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ಆತಿಯಾ ಶೆಟ್ಟಿ ಮಾಂಗಲ್ಯ ಹಾಕಲ್ಲ, ಕನ್ನಡತಿ ಸೀರಿಯಲ್ ಮತ್ತೆ ಬರಲ್ಲ; ಫೆಬ್ರವರಿಯಲ್ಲಿ ನಡೆದ ಘಟನೆಗಳು!

ಆತಿಯಾ ಶೆಟ್ಟಿ ಮಾಂಗಲ್ಯ ಹಾಕಲ್ಲ, ಕನ್ನಡತಿ ಸೀರಿಯಲ್ ಮತ್ತೆ ಬರಲ್ಲ; ಫೆಬ್ರವರಿಯಲ್ಲಿ ನಡೆದ ಘಟನೆಗಳು!

ಫೆಬ್ರವರಿ 2023 ಸಖತ್ ಬ್ಯುಸಿ ತಿಂಗಳಾಗಿತ್ತು. ಸಿನಿಮಾ ನಟಿ-ನಟಿಯರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿತ್ತು. ಇದೇ ತಿಂಗಳು ಚಿತ್ರರಂಗ ಅಮೂಲ್ಯವಾದ ವ್ಯಕ್ತಿಗಳನ್ನು ಕಳೆದುಕೊಂಡಿತ್ತು. ಫೆಬ್ರವರಿ ತಿಂಗಳಲ್ಲಿ ಏನೆಲ್ಲಾ ಆಯ್ತು ನೋಡಿ.....

2 Min read
Vaishnavi Chandrashekar
Published : Dec 14 2023, 05:00 PM IST
Share this Photo Gallery
  • FB
  • TW
  • Linkdin
  • Whatsapp
19

ಬಹುಭಾಷಾ ನಟಿ ಇಲಿಯಾನಾ ಆರೋಗ್ಯದಲ್ಲಿ ಏರುಪೇರಾಗಿತ್ತು.  ಆಸ್ಪತ್ರೆ ಬೆಡ್ ಮೇಲಿರುವ ಫೋಟೋವನ್ನು ನಟಿ ಇಲಿಯಾನಾ ಶೇರ್ ಮಾಡಿದ್ದಾರೆ. ದಿಢೀರ್ ಆಸ್ಪತ್ರೆ ದಾಖಲಾದ ನಟಿಯನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಫೋಟೋದಲ್ಲಿ ಇಲಿಯಾನಾ ಕೈಗೆ ಡ್ರಿಪ್ ಹಾಕಿರುವುದು ಕೂಡ ಕಾಣಿಸುತ್ತಿದೆ. ಮತ್ತೊಂದು ಫೋಟೋ ಶೇರ್ ಮಾಡಿ, ಸರಿಯಾದ ಸಮಯಕ್ಕೆ ಉತ್ತಮ ವೈದ್ಯಕೀಯ ಸಹಾಯ ಸಿಕ್ಕಿತು' ಎಂದು ಹೇಳಿದ್ದಾರೆ. ಇಲಿಯಾನಾಗೆ ನಿಜಕ್ಕೂ ಏನಾಗಿದೆ ಎನ್ನುವ ಬಗ್ಗೆ ಬಹಿರಂದ ಪಡಿಸಿಲ್ಲ. 
 

29

ಕಾಲಿವುಡ್​ನ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್​  ತಂದೆಯಾದ ಸಂಭ್ರಮದಲ್ಲಿದ್ದಾರೆ. ಅಟ್ಲೀ ಕುಮಾರ್​ ಪತ್ನಿ ಪ್ರಿಯಾ  ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಭಿಮಾನಿಗಳು ಮತ್ತು ಸಿನಿಮಾ ಗಣ್ಯರು ಅಟ್ಲೀ ಕುಮಾರ್ ದಂಪತಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. 2014ರಲ್ಲಿ ಅಟ್ಲೀ ಕುಮಾರ್​ ಪ್ರೇಯಸಿ ಪ್ರಿಯಾ ಜೊತೆ ದಾಂಪತ್ಯ ಜೀವನ ಕಾಲಿಟ್ಟರು. ಇದೀಗ 8 ವರ್ಷಗಳ ಬಳಿಕ ತಂದೆ-ತಾಯಿಯಾಗಿ ಬಡ್ತಿ ಪಡೆದಿದ್ದರು.

39

 ಬಾಲಿವುಡ್ ಸಿಂಪಲ್ ನಟಿ ಆತಿಯಾ ಶೆಟ್ಟಿ ಮತ್ತು ಟೀಂ ಇಂಡಿಯಾ ಕ್ರಿಕೆಟರ್‌ ಕೆಎಲ್‌ ರಾಹುಲ್‌ ಜನವರಿ  23ರಂದು ತಂದೆ ಸುನೀಲ್ ಶೆಟ್ಟಿ  ಖಂಡಾಲ ಫಾರ್ಮ್‌ಹೌಸ್‌ನಲ್ಲಿಅದ್ಧೂರಿಯಾಗಿ ವಿವಾಹವಾದರು. ಆತಿಯಾ ಸಿಂಪಲ್‌ ಲುಕ್‌ನ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ ಆದರೆ ಕೆಲವು ಕಿಡಿಕಾರಿದ್ದಾರೆ. ಸಿಂಧೂರ ಮತ್ತು ತಾಳಿ ಧರಿಸಿಲ್ಲ ಎಂದ ಗರಂ ಆಗಿದ್ದಾರೆ ನೆಗೆಟಿವ್ ಆಗಿ ಕಾಮೆಂಟ್ ಮಾಡಿದ್ದರು. ಸಿಂಧೂರ ಮತ್ತು ಮಾಂಗಲ್ಯ ಧರಿಸುವುದು ತುಂಬಾನೇ ಮುಖ್ಯವಾಗುತ್ತದೆ, ಪತಿ ಆಯಸ್ಸು ಮತ್ತು ಶ್ರೇಯಸ್ಸಿನ ಬಗ್ಗೆ ಚಿಂತಿಸಬೇಕು ಎಂದು ಬುದ್ದಿ ಮಾತು ಹೇಳಿದ್ದರು.

49

ದಕ್ಷಿಣ ಭಾರತದ ಖ್ಯಾತ ಗಾಯಕಿ ವಾಣಿಜಯರಾಂ ಫೆಬ್ರವರಿ 4ರಂದು ಇಹಲೋಕ ತ್ಯಜಿಸಿದ್ದರು.  10 ಸಾವಿರಕ್ಕೂ ಹೆಚ್ಚು ಹಾಡುಗಳ ಮೂಲಕ ಜನರನ್ನು ರಂಜಿಸಿದ ಗಾಯಕಿ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಚೆನ್ನೈ ಹಡ್ಡೊಸ್ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ವಾಣಿ ಜಯರಾಂ ಮೃತಪಟ್ಟಿದ್ದರು ಅವರ ತಲೆ ಹಾಗೂ ಮುಖಕ್ಕೆ ತೀವ್ರವಾಗಿ ಗಾಯವಾಗಿತ್ತು. ಮರಣೋತ್ತರ ಪರೀಕ್ಷೆಯ ವಿವರ ಬಹಿರಂಗವಾಗಿದ್ದು, ಸಾವಿನ ಬಗ್ಗೆ ಇದ್ದ ಅನುಮಾನಗಳೆಲ್ಲಾ ದೂರವಾಗಿದೆ. ಅದರೊಂದಿಗೆ ಮನೆಯ ಹಾಗೂ ಅಕ್ಕಪಕ್ಕದ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಿದ ಪೊಲೀಸರು ಹಿರಿಯ ಗಾಯಕಿ ಸಾವಿನ ಕೇಸ್‌ಅನ್ನು ಮುಗಿಸಿದ್ದರು.

59

ಕಲರ್ಸ್‌ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಕನ್ನಡತಿ 800 ಸಂಚಿಕೆ ಪೂರೈಸಿದ ಸುಖಾಂತ್ಯ ಕಂಡಿತ್ತು. ಫೆಬ್ರವರಿ 2ರಂದು ಕೊನೆಯ ಸಂಚಿಕೆ ಪ್ರಸಾರವಾಗಿತ್ತು. ಕೊನೆ ಸಂಚಿಕೆ ಮುಗಿಸಿ ಇಡೀ ತಂಡ ಭಾವುಕ ವಿದಾಯ ಹೇಳಿದ್ದರು.

69

 ಕನ್ನಡ ಚಿತ್ರರಂಗದಲ್ಲಿ ಸಿಂಪಲ್ ನಾಯಕಿ ಎಂದು ಗುರುತಿಸಿಕೊಂಡಿರುವ ರಿಷಿಕಾ ಸಿಂಗ್ ಎರಡು ವರ್ಷಗಳ ನಂತರ ಫೆಬ್ರವರಿಯಲ್ಲಿ ಜನರ ಮುಂದೆ ಕಾಣಿಸಿಕೊಂಡರು. ಭೀಕರ ಕಾರು ಅಪಘಾತದಲ್ಲಿ ಬೆನ್ನು ಮೂಲೆಗೆ ಪೆಟ್ಟು ಮಾಡಿಕೊಂಡು ಎರಡು ವರ್ಷಗಳ ಕಾಲ ಬೆಡ್‌ ರೆಸ್ಟ್‌ನಲ್ಲಿದ್ದು ಫಿಸಿಯೋಥೆರಪಿ ಮೂಲಕ ಓಡಾಡಲು ಶುರು ಮಾಡಿದ್ದಾರೆ.

79

ಕನ್ನಡ ಕಿರುತೆರೆ ಸೆಲೆಬ್ರಿಟಿ ಲವ್ ಬರ್ಡ್ಸ್‌  ಪ್ರಿಯಾ ಆಚಾರ್ ಮತ್ತು ಸಿದ್ದು ಮೂಲಿಮನಿ ಫೆಬ್ರವರಿ 12ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿರು. ಬೆಂಗಳೂರಿನ ಐಷಾರಾಮಿ ರೆಸಾರ್ಟ್‌ನಲ್ಲಿ ಮದುವೆಯಾಗಿರುವ ಈ ಜೋಡಿಗೆ ಆಶೀರ್ವಾದ ಮಾಡಲು ಕಿರುತೆರೆ ಮತ್ತು ಬೆಳ್ಳಿ ತೆರೆ ಸೆಲೆಬ್ರಿಟಿಗಳು ಆಗಮಿಸಿದ್ದರು. ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ನವೆಂಬರ್ ತಿಂಗಳಿನಲ್ಲಿ ಗುರು ಹಿರಿಯರು ಒಪ್ಪಿಗೆ ಪಡೆದು ನಿಶ್ಚಿತಾರ್ಥ ಮಾಡಿಕೊಂಡಿದ್ದರು.

89

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಫೆಬ್ರವರಿ 17ರಂದು ರಾಜಕಾರಣಿ ಫಹಾದ್ ಅಹ್ಮದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸ್ವರಾ ಜನವರಿ 6ರಂದು ದಾಂಪತ್ಯಕ್ಕೆ ಕಾಲಿಟ್ಟರು. ಸರಳವಾಗಿ ವಿವಾಹವಾಗಿರುವ ಸ್ವರಾ ಮತ್ತು ಫಹಾದ್ ಅಹ್ಮದ್ 1 ತಿಂಗಳ ಬಳಿಕ ಫೋಟೋಗಳನ್ನು ಶೇರ್ ಮಾಡಿ ಮದುವೆ ವಿಚಾರ ಬಹಿರಂಗ ಪಡಿಸಿದರು. 2023 ಜನವರಿ 6 ರಂದು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಸ್ವರಾ ಮತ್ತು ಫಹಾದ್ ನ್ಯಾಯಾಲಯದಲ್ಲಿ ವಿವಾಹ ನೋಂದಾಯಿಸಿದ್ದ

99

ನಟ ತಾರಕರತ್ನ ಬೆಂಗಳೂರಿನ ನಾರಾಯಣ ಹೃದಯಾಲದಯಲ್ಲಿ ಫೆಬ್ರವರಿ 18ರಂದು ನಿಧನರಾಗಿದ್ದರು. 39ರ ಹರೆಯದ ತಾರಕತ್ನ ಜನವರಿ 27ರಂದು ಆಸ್ಪತ್ರೆ ದಾಖಲಾಗಿದ್ದರು. ಸತತ ಚಿಕಿತ್ಸೆ ಬಳಿಕವೂ ತಾರಕರತ್ನ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. 23 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಜೊತೆಗೆ ಆರೋಗ್ಯದಲ್ಲಿ ಚೇತರಿಕೆ ಕಂಡಿರಲಿಲ್ಲ. ಇಂದು ಚಿಕಿತ್ಸೆ ಫಲಕಾರಿಯಾದೇ ನಿಧನರಾಗಿದ್ದರು. 

About the Author

VC
Vaishnavi Chandrashekar
6 ವರ್ಷಗಳ ಹಿಂದೆ ಸುವರ್ಣ ನ್ಯೂಸಲ್ಲಿ ಕೆಲಸ ಆರಂಭ. ಹಿರಿಯ ಉಪ ಸಂಪಾದಕಿ. ಕಥೆ, ಕವನ ಓದೋದು ಇಷ್ಟ. ಸೋಷಿಯಲ್ ಮೀಡಿಯಾ ತುಂಬಾ ಇಷ್ಟ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರು. ಸಿಲಿಕಾನ್ ಸಿಟಿ ಬಗ್ಗೆ ವಿಪರೀತ ಅಭಿಮಾನ, ಹೆಮ್ಮೆ. ಲೈಫ್‌ಸ್ಟೈಲ್ ಸುದ್ದಿ ಮೊದಲ ಆಯ್ಕೆ ಆಗಿತ್ತು. ಆದರೀಗ ಸಿನಿಮಾ, ಸೀರಿಯಲ್ ಕಡೆ ಹೆಚ್ಚು ಫೋಕಸ್ ಮಾಡುತ್ತೇನೆ. ಸುದ್ದಿಯ ಎಳೆ ಸಿಕ್ಕರೂ ಡೆವಲಪ್ ಮಾಡೋದು ಗೊತ್ತು. ಗಾಸಿಪ್ ಸಿಕ್ರಂತೂ ಖುಷಿಯೋ ಖುಷಿ. ಕೆಲವು ಸುದ್ದಿಗಳು ನಾನು ಬರೆದ ಮೇಲೆಯೇ ಗಾಸಿಪ್ ಆಗೋದೂ ಇದೆ.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved