ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗುತಿರುವ ಬಹುಮುಖ ಪ್ರತಿಭೆ ಸುಮನ್ ಭಾರದ್ವಾಜ್!
10 ವರ್ಷಗಳ ಕಾಲ ರಂಗಭೂಮಿಯಲ್ಲಿ ಬಣ್ಣ ಹಚ್ಚಿ, 'ಸುಪರ್ವ' ತಂಡ ರಚಿಸಿ ಭಾರತದಾದ್ಯಂತ 600ಕ್ಕೂ ಹೆಚ್ಚು ನಾಟಕ ಪ್ರದರ್ಶನ ನೀಡಿರುವ ಸುಮನ್ ಭಾರದ್ವಾಜ್ ಈಗ ವಿಭಿನ್ನ ಚಿತ್ರಕಥೆ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ.
ಡಿಪ್ಲೊಮಾ ಇನ್ ಆಕ್ಟಿಂಗ್ ಹಾಗೂ ಡೈರೆಕ್ಷನ್ನಲ್ಲಿ ಪದವೀಧರ .
10 ವರ್ಷಗಳ ಕಾಲ ರಂಗಭೂಮಿಯಲ್ಲಿ ಕೆಲಸ ಮಾಡಿರುವ ಸುಮನ್ ತನ್ನದೇ 'ಸುಪರ್ವ' ಎಂಬ ತಂಡವನ್ನು 2010ರಲ್ಲಿ ಸ್ಥಾಪಿಸಿದ್ದಾರೆ.
ನಟನೆ, ನಿರ್ದೇಶನ ಮಾತ್ರವಲ್ಲದೆ ನೃತ್ಯ, ಮೈಮ್ ಹಾಗೂ ಬ್ಯಾಲೆಟ್ ಕಲಿತಿದ್ದಾರೆ.
ಬೆಂಗಳೂರು, ದೆಹಲಿ, ಮುಂಬೈ, ಕೊಲ್ಕತಾ ಹಾಗೂ ಮುಂತಾದ ಪ್ರಮುಖ ನಗರಗಳಲ್ಲಿ ನಾಟಕ ಪ್ರದರ್ಶನ ನೀಡಿದ್ದಾರೆ.
ಲೈವ್ ಥಿಯೇಟರ್ ಮೂಲಕ 120 ಪ್ರದರ್ಶನ ನೋಡಿದ್ದಾರೆ.
2004ರಲ್ಲಿ ಅಭಿನಯಕ್ಕೆ ಕಾಲಿಟ್ಟ ಸುಮನ್.
ಗುರು ರಾಘವೇಂದ್ರ ವೈಭವ, ಪಡವಾರಳ್ಳಿ ಪಡ್ಡೆಗಳು, ಕಂಜೂಸ್ ಕಮಂಗಿರಾಯ, ಮಾಯದ ಮನೆ ಹಾಗೂ ಪೌರ್ಣಮಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
5 ಶಾರ್ಟ್ ಫಿಲ್ಮ್ಗಳಲ್ಲಿ ಅಭಿನಯಿಸಿದ್ದಾರೆ.
#ArrestCorona ಎಂದು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ಡಾಕ್ಯೂಮೆಂಟ್ರಿ ಮಾಡಿದ್ದಾರೆ.
ಚಿತ್ರರಂಗಕ್ಕೆ ಕಾಲಿಡಲು ವಿಭಿನ್ನ ಪಾತ್ರವನ್ನು ತಯಾರಿ ಮಾಡುತ್ತಿದ್ದಾರೆ. ಈಗಾಗಲೇ ಪ್ರೀ- ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.