ರೈಸ್, ದಾಲ್ ಗೊತ್ತು, ಡ್ರಗ್ಸ್ ಗೊತ್ತಿಲ್ಲ ಎಂದ ಕಿಚ್ಚ: ಸಿದ್ದಗಂಗಾ ಮಠಕ್ಕೆ ಭೇಟಿ
ನಮಗೆ ರೈಸ್ ದಾಲ್ ಗೊತ್ತು. ಜೀವನ ಅದರಲ್ಲಿ ಸಾಗಿಸ್ತಿವಿ, ಬಟ್ ಡ್ರಗ್ಸ್ ಬಗ್ಗೆ ಗೊತ್ತಿಲ್ಲ. ಏನ್ಗೊತ್ತಿಲ್ಲ ಅದರ ಬಗ್ಗೆ ಚರ್ಚೆ ಮಾಡಲ್ಲ ಅದು ತಪ್ಪಾಗುತ್ತೆ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.
ಈ ಬಾರಿ ಸರಳವಗಾಗಿ ನನ್ನ ಹುಟ್ಟುಹಬ್ಬ ಆಚರಿಸಲು ನಿರ್ಧರಿಸಿದ್ದೇನೆ. ಅಭಿಮಾನಿಗಳು ಯಾರು ಮನೆ ಬಳಿ ಬರೋದು ಬೇಡ. ಅಲ್ಲಿ ಸೇರಿದ್ರೇ ಎಲ್ರೂ ಹತ್ತಿರನೇ ನಿಲ್ತಾರೆ. ವಾಪಸ್ ಮನೆಗಳಿಗೆ ಸುರಕ್ಷಿತವಾಗಿ ಹೋಗ್ತಾರೆ ಅನ್ನೋ ನಂಬಿಕೇನು ನನಗಿಲ್ಲ. ನನ್ನ ತಂದೆ ತಾಯಿನಾ ನೋಡಿ ತುಂಬಾ ದಿನವೇ ಆಯ್ತು. ದಿನಾ ಅವ್ರ ಆರ್ಶಿವಾದ ಇಲ್ಲದೇ ಮನೆಯಿಂದ ಹೊರಗೇ ಬರ್ತಿಲಿಲ್ಲ ಎಂದು ಹೇಳಿದ್ದಾರೆ.
ಸ್ಯಾಂಡಲ್ ವುಡ್ ಡ್ರಗ್ಸ್ ಮಾಫೀಯಾ ವಿಚಾರವಾಗಿ ಪ್ರತಿಕ್ರಿಯಿಸಿ, ಅದರ ಕುರಿತಾಗಿ ನಾನು ಮಠದಲ್ಲಿ ಮಾತಾಡೋದಿಲ್ಲ. ಇಂದ್ರಜಿತ್ ನನಗೆ ತುಂಬಾ ವರ್ಷದ ಪರಿಚಯ. ಸಿನಿಮಾ ರಂಗಕ್ಕೆ ಬರೋ ಮೊದಲಿನಿಂದಲೂ ಒಟ್ಟಿಗಿದ್ದೇವೆ. ಅವರೊಟ್ಟಿಗೆ ಕಾಣಿಸಿಕೊಂಡ ಮಾತ್ರಕ್ಕೇ ಏನು ಆಗಿಲ್ಲ. ಅವ್ರ ಒಳ್ಳೆ ಕೆಲ್ಸ,ಕೆಟ್ಟ ಕೆಲ್ಸ ಎಲ್ಲದ್ರಲ್ಲೂ ನಾನು ಭಾಗಿ ಆಗಿದ್ದೀನಿ ಅಂತಾನ..? ಎಂದು ಪ್ರಶ್ನಿಸಿದ್ದಾರೆ.
ನಮಗೆ ರೈಸ್ ದಾಲ್ ಗೊತ್ತು. ಜೀವನ ಅದರಲ್ಲಿ ಸಾಗಿಸ್ತಿವಿ, ಬಟ್ ಡ್ರಗ್ಸ್ ಬಗ್ಗೆ ಗೊತ್ತಿಲ್ಲ. ಏನ್ಗೊತ್ತಿಲ್ಲ ಅದರ ಬಗ್ಗೆ ಚರ್ಚೆ ಮಾಡಲ್ಲ ಅದು ತಪ್ಪಾಗುತ್ತೆ ಎಂದಿದ್ದಾರೆ.
ನಮಗೆ ರೈಸ್ ದಾಲ್ ಗೊತ್ತು. ಜೀವನ ಅದರಲ್ಲಿ ಸಾಗಿಸ್ತಿವಿ, ಬಟ್ ಡ್ರಗ್ಸ್ ಬಗ್ಗೆ ಗೊತ್ತಿಲ್ಲ. ಏನ್ಗೊತ್ತಿಲ್ಲ ಅದರ ಬಗ್ಗೆ ಚರ್ಚೆ ಮಾಡಲ್ಲ ಅದು ತಪ್ಪಾಗುತ್ತೆ ಎಂದಿದ್ದಾರೆ.
ಚಿರಂಜೀವಿ ನನ್ನ ತಮ್ಮನ ತರ. ಡ್ರಗ್ನಲ್ಲಿ ಅವರ ಹೆಸರು ಥಳಕು ಬೇಡ ಎಂದಿದ್ದಾರೆ. ನಟ ಚೇತನ್ ಟ್ವಿಟ್ ವಿಚಾರವಾಗಿ ಪ್ರತಿಕ್ರಿಯಿಸಿ, ಬಹುಶಃ ಅವರು ಪ್ರಧಾನಿ ಮೋದಿ ಬಗ್ಗೆ ಮಾತಾಡಿರಬೇಕು ಎಂದು ಲೇವಡಿ ಮಾಡಿದ್ದಾರೆ. ನಟ ಚೇತನ್ ರಮ್ಮಿ ಆಡೋರು, ಗುಟ್ಕಾ ತಿನ್ನೋರ ಬಗ್ಗೆ ಯಾರೂ ಹೇಳಲ್ಲ ಎಂದು ಟ್ವಿಟ್ ಮಾಡಿದ್ದರು.
ಮಾಧ್ಯಮಗಳು ಕೆಲ ಅನಾವಶ್ಯಕ ವಿಚಾರಗಳನ್ನು ಜೀವಂತ ಇಡುತ್ತಿದೆ ಎಂದು ಸುದೀಪ್ ಹೇಳಿದ್ದಾರೆ. ಇಂದ್ರಜಿತ್ಗೆ ಬೆದರಿಕೆ ಕರೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರಿಗೆ ಬೆಂಬಲಕ್ಕೆ ನಿಲ್ತಿರಾ ಎಂಬ ಪ್ರಶ್ನೆಗೆ ಇಂದ್ರಜಿತ್ ಅವರ ಇಡೀ ಲೈಫ್ ನಾನಿಲ್ಲದೆ ಸಾಗಿದೆ. ಅವರು ನನಗಾಗಿ ಇಲ್ಲ...ನಾನೂ ಅವರಿಗಾಗಿ ಇಲ್ಲ. ಬಟ್ ಅದಕ್ಕೆಲ್ಲಾ ಅವರು ಹೆದರಲ್ಲ. ಕೋರೋನಾದಿಂದಾಗಿ ಚಿತ್ರರಂಗ ತುಂಬಾ ನಷ್ಟದಲ್ಲಿದೆ. ನಿರ್ಮಾಪಕರು, ಕಾರ್ಮಿಕರು ಎಲ್ಲರೂ ಸಂಕಷ್ಟದಲ್ಲಿ ಇದ್ದಾರೆ ಎಂದಿದ್ದಾರೆ.