ರಾಜವೀರ ಮದಕರಿನಾಯಕ ಶೂಟಿಂಗ್ ನವೆಂಬರ್ನಲ್ಲಿ ಆರಂಭ
ರಾಜವೀರ ಮದಕರಿನಾಯಕ ಶೂಟಿಂಗ್ ನವೆಂಬರ್ನಲ್ಲಿ ಆರಂಭ | ದರ್ಶನ್ ಕೈಯಲ್ಲಿ ಸಾಲು ಸಾಲು ಸಿನಿಮಾ

<p>ದರ್ಶನ್ ಮುಂದೆ ಸಾಲು ಸಾಲು ಸಿನಿಮಾಗಳಿವೆ. ಅದರಲ್ಲಿ ಎರಡು ಐತಿಹಾಸಿಕ ಸಿನಿಮಾಗಳು.</p>
ದರ್ಶನ್ ಮುಂದೆ ಸಾಲು ಸಾಲು ಸಿನಿಮಾಗಳಿವೆ. ಅದರಲ್ಲಿ ಎರಡು ಐತಿಹಾಸಿಕ ಸಿನಿಮಾಗಳು.
<p>ಒಂದು ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ರಾಜವೀರ ಮದಕರಿನಾಯಕ’, ಇನ್ನೊಂದು ತರುಣ್ ಸುಧೀರ್ ನಿರ್ದೇಶನದ ‘ಸಿಂಧೂರ ಲಕ್ಷ್ಮಣ’.</p>
ಒಂದು ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ರಾಜವೀರ ಮದಕರಿನಾಯಕ’, ಇನ್ನೊಂದು ತರುಣ್ ಸುಧೀರ್ ನಿರ್ದೇಶನದ ‘ಸಿಂಧೂರ ಲಕ್ಷ್ಮಣ’.
<p>ಇವುಗಳಲ್ಲಿ ಸಿಂಧೂರ ಲಕ್ಷ್ಮಣ ಸಿನಿಮಾ ಶೂಟಿಂಗ್ ಆರಂಭವಾಗಲಿದೆ, ರಾಜವೀರ ಮದಕರಿನಾಯಕ ಮುಂದಕ್ಕೆ ಹೋಗಲಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಡಿತ್ತು. ಆದರೆ ಆ ಸುದ್ದಿಯನ್ನು ರಾಜೇಂದ್ರಸಿಂಗ್ ಬಾಬು ಅಲ್ಲಗಳೆದಿದ್ದಾರೆ.</p>
ಇವುಗಳಲ್ಲಿ ಸಿಂಧೂರ ಲಕ್ಷ್ಮಣ ಸಿನಿಮಾ ಶೂಟಿಂಗ್ ಆರಂಭವಾಗಲಿದೆ, ರಾಜವೀರ ಮದಕರಿನಾಯಕ ಮುಂದಕ್ಕೆ ಹೋಗಲಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಡಿತ್ತು. ಆದರೆ ಆ ಸುದ್ದಿಯನ್ನು ರಾಜೇಂದ್ರಸಿಂಗ್ ಬಾಬು ಅಲ್ಲಗಳೆದಿದ್ದಾರೆ.
<p>‘ನವೆಂಬರ್ 15 ಅಥವಾ ನವೆಂಬರ್ ತಿಂಗಳ ಕೊನೆಯಿಂದ ಚಿತ್ರೀಕರಣ ಆರಂಭವಾಗುತ್ತಿದೆ. ನಮ್ಮ ಚಿತ್ರಕ್ಕೂ ಮೊದಲೇ ಮತ್ತೊಂದು ಸಿನಿಮಾ ಶೂಟಿಂಗ್ ಮಾಡಿಕೊಳ್ಳಲಿದೆ ಎಂಬುದು ಗಾಳಿ ಸುದ್ದಿ.</p>
‘ನವೆಂಬರ್ 15 ಅಥವಾ ನವೆಂಬರ್ ತಿಂಗಳ ಕೊನೆಯಿಂದ ಚಿತ್ರೀಕರಣ ಆರಂಭವಾಗುತ್ತಿದೆ. ನಮ್ಮ ಚಿತ್ರಕ್ಕೂ ಮೊದಲೇ ಮತ್ತೊಂದು ಸಿನಿಮಾ ಶೂಟಿಂಗ್ ಮಾಡಿಕೊಳ್ಳಲಿದೆ ಎಂಬುದು ಗಾಳಿ ಸುದ್ದಿ.
<p>ಕೆಲಸಕ್ಕೆ ಬಾರದವರು, ಬೈಟೂ ಕಾಫಿ ಕುಡಿದುಕೊಂಡು ಬೇಕಾಬಿಟ್ಟಿಯಾಗಿ ಮಾತನಾಡುವವರ ಸುದ್ದಿ ಅದು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಸಿಂಗ್ ಬಾಬು.</p>
ಕೆಲಸಕ್ಕೆ ಬಾರದವರು, ಬೈಟೂ ಕಾಫಿ ಕುಡಿದುಕೊಂಡು ಬೇಕಾಬಿಟ್ಟಿಯಾಗಿ ಮಾತನಾಡುವವರ ಸುದ್ದಿ ಅದು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಸಿಂಗ್ ಬಾಬು.
<p>ಈ ಕುರಿತು ಕೇಳಿದರೆ ಸಿಂಧೂರ ಲಕ್ಷ್ಮಣ ನಿರ್ಮಾಪಕ ಉಮಾಪತಿಯವರು, ‘ದರ್ಶನ್ ಅವರ ಕಡೆಯಿಂದ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಅವರು ಯಾವ ಸಿನಿಮಾ ಹೇಳುತ್ತಾರೋ ಅದೇ ಶೂಟಿಂಗ್ಗೆ ಹೋಗುತ್ತದೆ. ಈಗ ನಾನು ಏನೂ ಹೇಳಲಾರೆ’ ಎಂದಿದ್ದಾರೆ.</p>
ಈ ಕುರಿತು ಕೇಳಿದರೆ ಸಿಂಧೂರ ಲಕ್ಷ್ಮಣ ನಿರ್ಮಾಪಕ ಉಮಾಪತಿಯವರು, ‘ದರ್ಶನ್ ಅವರ ಕಡೆಯಿಂದ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಅವರು ಯಾವ ಸಿನಿಮಾ ಹೇಳುತ್ತಾರೋ ಅದೇ ಶೂಟಿಂಗ್ಗೆ ಹೋಗುತ್ತದೆ. ಈಗ ನಾನು ಏನೂ ಹೇಳಲಾರೆ’ ಎಂದಿದ್ದಾರೆ.