ಕಾಮಿಡಿ ಕಿಂಗ್, ಸಾಮಾಜಿಕ ಕಳಕಳಿಯುಳ್ಳ ಜಗ್ಗೇಶ್ಗೆ ಬರ್ತ್ಡೇ ಸ್ಪೆಷಲ್....
ಸ್ಯಾಂಡಲ್ವುಡ್ನ ನಟ, ನಿರ್ಮಾಪಕ, ನಿರ್ದೇಶಕ ಹಾಗೂ ರಾಜಕಾರಣಿ ಜಗ್ಗೇಶ್ ಅವರ 57ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ನಮ್ಮ ಚಿತ್ರರಂಗದ ನವರಸ ನಾಯಕ ಜಗ್ಗೇಶ್ ತಮ್ಮ ಕಾಮಿಡಿ ರೋಲ್ಗಳಿಂದ ಜನಮನ ಗೆದ್ದವರು. ಯಾರಾದರೂ ಕಷ್ಟದಲ್ಲಿದ್ದಾಗ ತಕ್ಷಣ ಸ್ಪಂದಿಸುವ ದೊಡ್ಡ ಗುಣ ಈ ನಟನದು. ಇತ್ತೀಚಿಗೆ ಜೀ ಕನ್ನಡದ ಸರಿಗಮಪ ಶೋನಲ್ಲಿ ಭಾಗವಹಿಸಿದ ಅಂದಗಾಯಕಿಯರ ಕಷ್ಟಕ್ಕೆ ಕರಗಿ ಸಹಾಯ ಮಾಡಿದ್ದು ಸಖತ್ ಮೆಚ್ಚುಗೆ ಗಳಿಸಿದೆ.
1963 ಮಾರ್ಚ್ 17 ರಂದು ಜನಿಸಿದ ಜಗ್ಗೇಶ್ ಕಾಮಿಡಿ ರೋಲ್ಗಳಿಗೆ ಪ್ರಸಿದ್ಧಿ.
1983ರಲ್ಲಿ ಇಬ್ಬನಿ ಕರಗಿತು ಚಿತ್ರದ ಒಂದು ಸಣ್ಣ ಪಾತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ.
ಭಂಡ ನನ್ನ ಗಂಡ ಫಿಲ್ಮಂನಲ್ಲಿ ಮೊದಲ ಬಾರಿಗೆ ಹೀರೋ ಪಾತ್ರ.
ಇನ್ನೂ ಮೆಜಾರಿಟಿಗೆ ಬಾರದ ಪರಿಮಳಾ ಅವರನ್ನು ಮದುವೆಯಾದ ಕಾರಣಕ್ಕೆ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂ ಮೆಟ್ಟಿಲೇರಿದ ಸೌತ್ ಇಂಡಿಯಾದ ಮೊದಲ ಲವ್ ಕೇಸ್ ಇದು.
ಕಷ್ಟದಲ್ಲಿರುವವರಿಗೆ ಸದಾ ಸಹಾಯ ಮಾಡುವ ಗುಣ ಹೊಂದಿರುವ ಜಗ್ಗೇಶ್.
ಸರಿಗಮಪ ಶೋಗೆ ತುಮಕೂರಿನಿಂದ ಆಗಮಿಸಿದ ರತ್ನಮ್ಮ ಮತ್ತು ಮಂಜಮ್ಮ ಸಹೋದರಿಯರ ಕಷ್ಟಕ್ಕೆ ಮರುಗಿ ಸೂರಿನ ಭರವಸೆ ಇತ್ತ ನಟ.
ಕೊಟ್ಟ ಮಾತಿನಂತೆ ಅಭಿಮಾನಿಗಳು ಮತ್ತು ಫ್ರೆಂಡ್ಸ್ ಸಹಾಯದಿಂದ 35 ದಿನಗಳಲ್ಲಿ ಅಂದಗಾಯಕಿಯರಿಗೆ ಮನೆ ಕಟ್ಟಿಸಿಕೊಟ್ಟರು.
ಇವರು ನಟಿಸಿದ ಲೇಟೆಸ್ಟ್ ಫಿಲ್ಮಂ ಕಾಳಿದಾಸ ಕನ್ನಡ ಮೇಷ್ಟ್ರು ಸಖತ್ ಹಿಟ್ ಆಗಿದೆ.
ನೇರ ನಡೆ ನುಡಿಗಳ ಮೂಲಕ ಸುದ್ದಿಯಲ್ಲಿರುವ ನವರಸ ನಾಯಕ ಜಗ್ಗೇಶ್ ಅವರು ಮಾನವೀಯತೆ ವಿಷಯದಲ್ಲೂ ಸದಾ ಮುಂದು.
'ನೀರ್ ದೋಸೆ' ಇವರ ಅಭಿಮಾನಿಗಳಿಗೆ ಬಾರಿ ಖುಶಿ ಕೊಟ್ಟು ಸುದ್ದಿ ಮಾಡಿದ ಚಿತ್ರಗಳಲ್ಲಿ ಒಂದು.