ಅಗಲಿದ ನಟ ಚಿರಂಜೀವಿ,ಸುಶಾಂತ್ ಸಿಂಗ್ ನೆನಪಿನಲ್ಲಿ ಬಡವರಿಗೆ ದವಸ-ಧಾನ್ಯ ವಿತರಿಸಿದ ನಟಿ!
ಅಗಲಿದ ನಟ ಚಿರಂಜೀವಿ ಸರ್ಜಾ ಹಾಗೂ ಸುಶಾಂತ್ ಸಿಂಗ್ ನೆನಪಿನಲ್ಲಿ ನಟಿ ಪ್ರಣೀತಾ ಸುಭಾಷ್ ತಮ್ಮ ಫೌಂಡೇಶನ್ನಿಂದ 150 ಆಹಾರ ಕಿಟ್ ವ್ಯೆಶ್ಯೆಯರಿಗೆ ಹಾಗೂ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ವಿತರಿಸಿದ್ದಾರೆ.
ಲಾಕ್ಡೌನ್ ಪ್ರಾರಂಭದಿಂದಲ್ಲೂ ವಲಸೆ ಕಾರ್ಮಿಕರಿಗೆ ಸಹಾಯ ಮಾಡುತ್ತಿರುವ ನಟಿ ಪ್ರಣೀತಾ ಫೌಂಡೇಶನ್.
ಚಿತ್ರರಂಗ ಕಂಡಂತ ಅದ್ಭುತ ಕಲಾವಿದರ ನೆನೆಪಿನಲ್ಲಿ ವಲಸೆ ಬಂದಂತ ಕಾರ್ಮಿಕರಿಗೆ ಹಾಗೂ ವ್ಯೆಶ್ಯೆಯರಿಗೆ ಸಹಾಯ ಮಾಡಿದ್ದಾರೆ ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಚಿರಂಜೀವಿ ಸರ್ಜಾ ಹಾಗೂ ಸುಶಾಂತ್ ಸಿಂಗ್ ಹೆಸರಲ್ಲಿ 150 ಫುಡ್ ಕಿಟ್ ಹಾಗೂ ಸ್ಯಾನಿಟರಿ ಪ್ಯಾಡ್ ವಿತರಿಸಿದ್ದಾರೆ.
ಈ ಬಗ್ಗೆ ಪ್ರಣೀತಾ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಶೇರ್ ಮಾಡಿಕೊಂಡಿದ್ದಾರೆ.
ಫೋಟೋದಲ್ಲಿ ವಲಸೆ ಕಾರ್ಮಿಕರ ಮುಖ ಮಾತ್ರ ತೋರಿಸಲಾಗಿದೆ.( ವ್ಯೆಶ್ಯೆಯರ ಗುರುತು ತಡೆದ ಕಾರಣ ಫೋಟೋ ಶೇರ್ ಮಾಡಿಲ್ಲ)
ಜೂನ್ 11ರಂದು ತಮಿಳು ನಾಡಿನ ನೆಲ್ಲೂರಿನಲ್ಲಿ ಪೊಲೀಸರಿಗೆ ಸುಮಾರು 1500ಕ್ಕೂ ಹೆಚ್ಚು ರಕ್ಷಣ ಕಿಟ್ ನೀಡಲಾಗಿತ್ತು.
ಜೂನ್ 7ರಂದು ನಟ ಚಿರಂಜೀವಿ ಹೃದಯಘಾತದಿಂದ ಇಹ ಲೋಕಕ್ಕೆ ತ್ಯಜಿಸಿದ್ದರು.
ಜೂನ್ 14ರಂದು ನಟ ಸುಶಾಂತ್ ಸಿಂಗ್ ಮುಂಬೈ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಪ್ರಣೀತಾ ತಮ್ಮ ಫೌಂಡೇಶನ್ನಿಂದ ಇಂತಹ ಅನೇಕ ಸಂದರ್ಭಗಳಲ್ಲಿ ಜನರಿಗೆ ಸಹಾಯ ಮಾಡಿದ್ದಾರೆ.
ಒಂದು ಕಿಟ್ನಲ್ಲಿ ವಾರಕ್ಕೆ ಸಾಕಾಗುಷ್ಟು ರೇಷನ್ ಇರುತ್ತದೆ.