ಮೊಮ್ಮಗ ಆಗಮನದ ನಂತರ ಹರಿಕೆ ತೀರಿಸಿದ ಸುಂದರ್ ರಾಜ್!
ಜೂನಿಯರ್ ಚಿರಂಜೀವಿ ಬರ ಮಾಡಿಕೊಂಡ ನಂತರ ತಾತ ಸುಂದರ್ ರಾಜ್ ತಿರುಮಲ ತಿರುಪತಿ ವೆಂಕಟೇಶ್ವರನಿಗೆ ಹರಿಕೆ ತೀರಿಸಿದ್ದಾರೆ.
ಅಕ್ಟೋಬರ್ 22ರಂದು ಜೂನಿಯರ್ ಚಿರು ಅಲಿಯಾಸ್ ಚಿಂಟುನನ್ನು ಬರ ಮಾಡಿಕೊಂಡ ಸರ್ಜಾ ಹಾಗೂ ಸುಂದರ್ ರಾಜ್ ಫ್ಯಾಮಿಲಿ.
ಮಗಳು ಮೇಘನಾ ರಾಜ್ ಹಾಗೂ ಹೊಟ್ಟೆಯಲ್ಲಿದ್ದ ಜೂನಿಯರ್ಗೆ ಯಾವುದೇ ತೊಂದರೆ ಆಗದೆ, ಇಬ್ಬರೂ ಆರೋಗ್ಯವಾಗಿರಲಿ ಎಂದು ತಿಮ್ಮಪ್ಪನ ಬಳಿ ಬೇಡಿಕೊಂಡಿದ್ದ ಸುಂದರ್ ರಾಜ್.
ನವೆಂಬರ್ 1ರಂದು ದೇವಾಲಯಕ್ಕೆ ಭೇಟಿ ನೀಡಿ ಮುಡಿ ಹರಿಕೆ ತೀರಿಸಿದ್ದಾರೆ.
ಸಹೋದರಿ ಹಾಗೂ ತಾಯಿಯ ಜೊತೆ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಹಲವು ತಿಂಗಳಿಂದ ಬೆಳಿಸಿದ ಗಡ್ಡವನ್ನು ತಿಮ್ಮಪ್ಪನಿಗೆ ಅರ್ಪಿಸಿದ್ದಾರೆ.
ಮೇಘನಾ ರಾಜ್ ಸೀಮಂತದಲ್ಲಿ ಸೆರೆ ಹಿಡಿದ ಸಾಲ್ಟ್ ಆಂಡ್ ಪೆಪರ್ ಲುಕ್ ಇದು.
ಜೂನಿಯರ್ ಆಗಮನವನ್ನು ಇಡೀ ಕರುನಾಡೇ ಸಂಭ್ರಮಿಸಿತ್ತು.