'ಸಾಂಗ್ಲಿಯಾನ'ನಿಗೆ 65ರ ಸಂಭ್ರಮ! ಎಂದೂ ನೋಡಿರದ ಶಂಕರ್ ಫೋಟೋಗಳಿವು!
ಕನ್ನಡ ಚಿತ್ರರಂಗದ ಮೇರು ನಟ, ನಿರ್ದೇಶಕ, ಚಿತ್ರಕಥೆಗಾರ ಹಾಗೂ ನಿರ್ಮಾಪಕ ಶಂಕರ್ ನಾಗ್. ನಗರ ಅಭಿವೃದ್ಧಿಯಿಂದ ಹಿಡಿದು ಥಿಯೇಟರ್ ಅನ್ನು ಮತ್ತೊಂದು ಲೆವೆಲ್ಗೆ ಕೊಂಡೊಯ್ಯುವ ತನಕ ಯೋಜನೆ ಹೊಂದಿದ ಮಹಾ ಕನಸುಗಾರ ಶಂಕರ್ ನಾಗ್. ಅವರ ಬಗ್ಗೆ ತಿಳಿಯದ ವಿಚಾರ ಹಾಗೂ ಎಂದೂ ನೋಡಿರದ ಫೋಟೋಗಳು ಇಲ್ಲಿವೆ....
ಶಂಕರ್ ನಾಗ್ ಹುಟ್ಟಿದ್ದು ನವೆಂಬರ್ 9, 1954 ರಂದು ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಸಣ್ಣ ಹಳ್ಳಿಯಲ್ಲಿ
ವಿದ್ಯಾಬ್ಯಾಸದ ನಂತರ ಮುಂಬೈಗೆ ತೆರಳಿ ಮರಾಠಿ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುತ್ತಾರೆ.
ಶಂಕರ್ ನಾಗ್ ತಬಲ, ಕೊಳಲು,ಹಾರ್ಮೋನಿಯಂ ಹೀಗೆ ಹಲವಾರು ವಾದ್ಯಗಳನ್ನು ನುಡಿಸಲು ಕಲಿತಿದ್ದರು
ಗಿರೀಶ್ ಕಾರ್ನಾಡರ 'ಒಂದಾನೊಂದು ಕಾಲದಲ್ಲಿ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದರು
ಕನ್ನಡ ಚಿತ್ರರಂಗದ 12 ವರ್ಷ ಪಯಣದಲ್ಲಿ 90 ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಆರ್.ಕೆ. ನಾರಾಯಣ್ ಬರೆದಿರುವ 'ಮಾಲ್ಗುಡಿ ಡೇಸ್' ಧಾರಾವಾಹಿಯನ್ನು ನಿರ್ದೇಶಿಸಿದ್ದಾರೆ.
ವಿಶೇಷ ಎಂದರೆ ಶಂಕರ್ ನಾಗ್ ಬರ್ತಡೇ ದಿನವೇ ಅರುಂಧತಿ ನಾಗ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಗೆ ಕಾವ್ಯಾ ನಾಗ್ ಎಂಬ ಮುದ್ದಾದ ಮಗಳಿದ್ದಾಳೆ.
ರಾಜ್ಕುಮಾರ್ ಅಭಿನಯದ 'ಒಂದು ಮುತ್ತಿನ ಕಥೆ' ಚಿತ್ರವನ್ನು ಶಂಕರ್ ನಾಗ್ ನಿರ್ದೇಶಿಸಿದ್ದರು.
ಸೆಪ್ಟೆಂಬರ್ 30, 1990 ರಂದು ಚಿತ್ರೀಕರಣದಿಂದ ಹಿಂದಿರುಗುವಾಗ ದಾವಣಗೆರೆ ಬಳಿ ಹಳ್ಳಿಯೊಂದರಲ್ಲಿ ಕಾರು ಆಪಘಾತದಲ್ಲಿ ಕೊನೆಯುಸಿರೆಳೆದರು.
ಶಂಕರ್ ನಾಗ್ ಕನಸಿನ ಗೂಡು 'ರಂಗ ಶಂಕರ'ವನ್ನು ಪತ್ನಿ ಹಾಗೂ ಪುತ್ರಿ ನಡೆಸಿಕೊಂಡು ಹೋಗುತ್ತಿದ್ದಾರೆ.