'ವಿಷ್ಣು ಅಪ್ಪಾಜಿಯೊಂದಿಗೆ ನನ್ನ ಹೋಲಿಕೆ ಮಾಡಬಾರದು'
ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ 3 ಸಖತ್ ಸದ್ದು ಮಾಡುತ್ತಿದೆ. ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಕಿಚ್ಚ ಸುದೀಪ್ ಬಾಂಧವ್ಯದ ಬಗ್ಗೆ ಹೊಸದಾಗಿ ಹೇಳುವುದು ಏನೂ ಇಲ್ಲ. ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರದಲ್ಲಿ ಇಬ್ಬರು ದಿಗ್ಗಜರು ಒಟ್ಟಾಗಿ ಕಾಣಿಸಿಕೊಂಡಿದ್ದರು. ಬಹಳ ಕಾಲದಿಂದಲೂ ಅಭಿಮಾನಿಗಳು ಕಿಚ್ಚ ಸುದೀಪ್ ಅವರನ್ನು ಸಾಹಸಸಿಂಹರೊಂದಿಗೆ ಹೋಲಿಕೆ ಮಾಡಿಕೊಂಡೆ ಬಂದಿದ್ದಾರೆ. ಆದರೆ ಸುದೀಪ್ ಈಗ ಒಂದು ಮಾತು ಹೇಳಿದ್ದಾರೆ.
ಸುದೀಪ್ ಮೊದಲ ಸಾರಿ ನಿರ್ದೇಶನ ಮಾಡಿದಾಗ ವಿಷ್ಣು ಬೆನ್ನು ತಟ್ಟಿದ್ದರು.
ಕಿಚ್ಚ ಸುದೀಪ್ ವಿಷ್ಣುವರ್ಧನ ಎಂಬ ಟೈಟಲ್ ಸಿನಿಮಾದಲ್ಲಿ ಕಾಣಿಸಿಕೊಂಡಾಗ ಅಭಿಮಾನಿಗಳು ದೊಡ್ಡದಾಗಿ ಸ್ವೀಕಾರ ಮಾಡಿದ್ದರು.
ಕೋಟಿಗೊಬ್ಬ ಚಿತ್ರ ವಿಷ್ಣುವರ್ಧನ್ ಅವರ ಸೂಪರ್ ಹಿಟ್ ಚಿತ್ರ
ಕೋಟಿಗೊಬ್ಬ-2 ಚಿತ್ರ ಸುದೀಪ್ ಅವರಿಗೆ ಹೊಸ ಇಮೇಜ್ ತಂದುಕೊಟ್ಟಿತ್ತು
ನಟನಾಗಿ ಮಾತ್ರವಲ್ಲದೆ ನಿರೂಪಕ, ಗಾಯಕ ಹಾಗೂ ನಿರ್ದೇಶಕನಾಗಿ ಸುದೀಪ್ ಗುರುತಿಸಿಕೊಂಡಿದ್ದಾರೆ.
ಸುದೀಪ್ ನೆಚ್ಚಿನ ಆಹಾರ ತರಕಾರಿ ಪಲಾವ್, ರಾಗಿ ಮುದ್ದೆ ಹಾಗೂ ರೋಟಿ.
ಸಹಜವಾಗಿಯೇ ಅಭಿಮಾನಿಗಳು ಸುದೀಪ್ ರಲ್ಲಿ ವಿಷ್ಣುವರ್ಧನ್ ಕಾಣಲು ಆರಂಭಿಸಿದ್ದರು.
ನನ್ನನ್ನು ವಿಷ್ಣು ಅಪ್ಪಾಜಿಯೊಂದಿಗೆ ಹೋಲಿಸಬೇಡಿ ಕಿಚ್ಚ ಸುದೀಪ್ ಮನವಿ
ಸಾಹಸಸಿಂಹ ವಿಷ್ಣುವರ್ಧನ್ ಅಭಿನಯ ಇಂದಿಗೂ ಹಸಿರಾಗಿದೆ.
ನನ್ನನ್ನು ವಿಷ್ಣು ಅಪ್ಪಾಜಿಯೊಂದಿಗೆ ಹೋಲಿಸಬೇಡಿ ಕಿಚ್ಚ ಸುದೀಪ್ ಮನವಿ ಮಾಡಿಕೊಂಡಿದ್ದಾರೆ.