ಮುತ್ತಪ್ಪ ರೈ ಸಾವಿನ ಬೆನ್ನಲ್ಲೇ ಜಯರಾಜ್ ಪುತ್ರನ ಫೇಸ್ಬುಕ್ ಪೋಸ್ಟ್ ವೈರಲ್!
ಒಂದು ಕಾಲದ ಮಾಜಿ ಡಾನ್ , ಭೂಗತ ಲೋಕದ ಅಧಿಪತಿಯಾಗಿದ್ದ ಮುತ್ತಪ್ಪ ರೈ ಅವರು ಕ್ಯಾನ್ಸರ್ ರೋಗದಿಂದಾಗಿ ಸುಮಾರು ಎರಡು ವರ್ಷಗಳ ಕಾಲ ಸಾವಿನೊಟ್ಟಿಗೆ ಹೋರಾಟ ಮಾಡಿ ದಿನಾಂಕ 15-05-2020 ಶುಕ್ರವಾರ ಬೆಳಗಿನಜಾವ ನಿಧನರಾಗಿದ್ದಾರೆ.ಅವರ ನಿಧನದ ಬಳಿಕ ಮತ್ತೊಬ್ಬ ಡಾನ್ ಜಯರಾಜ್ ಅವರ ಪುತ್ರ ಸಾಮಾಜಿಕ ಮಾಧ್ಯಮ ಫೇಸ್ಬುಕ್ ನಲ್ಲಿ ಬರೆದುಕೊಂಡಿರುವ ಪೋಸ್ಟ್ ಒಂದು ಇದೀಗ ಚರ್ಚೆಯ ವಸ್ತುವಾಗಿ ವೈರಲ್ ಆಗುತ್ತಿದೆ.

<p>ಮುತ್ತಪ್ಪ ರೈ ಒಬ್ಬ ದೊಡ್ಡ ಡಾನ್ ಆಗಿ ಈ ಮಟ್ಟಕ್ಕೆ ಬೆಳೆಯಲು ಕಾರಣರಾದ ಜಯರಾಜ್ ಅವರ ಕೊಲೆಯ ಘಟನೆ ಇನ್ನೂ ಹಲವು ಜನರ ನೆನಪಿನಿಂದ ಮಾಸಿಲ್ಲ.ಇಂದಿಗೂ ಅಲ್ಲಲ್ಲಿ ಆ ಘಟನೆ ಬಗ್ಗೆ ಮಾತುಗಳು,ಚರ್ಚೆಗಳು ಆಗುತ್ತಲೇ ಇರುತ್ತವೆ.ಸಿನಿಮಾರಂಗದಲ್ಲಿ ಹೆಚ್ಚು ಚಾಲ್ತಿಯಲ್ಲಿರುತ್ತದೆ ಈ ಹೆಸರು. </p>
ಮುತ್ತಪ್ಪ ರೈ ಒಬ್ಬ ದೊಡ್ಡ ಡಾನ್ ಆಗಿ ಈ ಮಟ್ಟಕ್ಕೆ ಬೆಳೆಯಲು ಕಾರಣರಾದ ಜಯರಾಜ್ ಅವರ ಕೊಲೆಯ ಘಟನೆ ಇನ್ನೂ ಹಲವು ಜನರ ನೆನಪಿನಿಂದ ಮಾಸಿಲ್ಲ.ಇಂದಿಗೂ ಅಲ್ಲಲ್ಲಿ ಆ ಘಟನೆ ಬಗ್ಗೆ ಮಾತುಗಳು,ಚರ್ಚೆಗಳು ಆಗುತ್ತಲೇ ಇರುತ್ತವೆ.ಸಿನಿಮಾರಂಗದಲ್ಲಿ ಹೆಚ್ಚು ಚಾಲ್ತಿಯಲ್ಲಿರುತ್ತದೆ ಈ ಹೆಸರು.
<p>ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆಕ್ಟಿವ್ ಇರುವ ಜಯರಾಜ್ ಪುತ್ರ ಅಜಿತ್ ಜಯರಾಜ್ ತಮ್ಮ ಒಂದು ಫೇಸ್ಬುಕ್ ಪೋಸ್ಟ್ ಮೂಲಕ ಸುದ್ದಿಯಲ್ಲಿದ್ದಾರೆ. </p>
ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆಕ್ಟಿವ್ ಇರುವ ಜಯರಾಜ್ ಪುತ್ರ ಅಜಿತ್ ಜಯರಾಜ್ ತಮ್ಮ ಒಂದು ಫೇಸ್ಬುಕ್ ಪೋಸ್ಟ್ ಮೂಲಕ ಸುದ್ದಿಯಲ್ಲಿದ್ದಾರೆ.
<p>ಮುತ್ತಪ್ಪ ರೈ ನಿಧನರಾಗುವ ಕೆಲವೇ ಗಂಟೆಗಳ ಮುಂಚೆ ಅವರ ಆಜನ್ಮ ವೈರಿ ಜಯರಾಜ್ ಪುತ್ರ ಅಜಿತ್ ಜಯರಾಜ್ ಮೇ 14 ರ ರಾತ್ರಿ ಫೇಸ್ಬುಕ್ ನಲ್ಲಿ ಬರೆದುಕೊಂಡಿರುವ ವಿಷಯ ಈಗ ಎಲ್ಲೆಡೆ ಸಡ್ಡು ಮಾಡುತ್ತಿದೆ. </p>
ಮುತ್ತಪ್ಪ ರೈ ನಿಧನರಾಗುವ ಕೆಲವೇ ಗಂಟೆಗಳ ಮುಂಚೆ ಅವರ ಆಜನ್ಮ ವೈರಿ ಜಯರಾಜ್ ಪುತ್ರ ಅಜಿತ್ ಜಯರಾಜ್ ಮೇ 14 ರ ರಾತ್ರಿ ಫೇಸ್ಬುಕ್ ನಲ್ಲಿ ಬರೆದುಕೊಂಡಿರುವ ವಿಷಯ ಈಗ ಎಲ್ಲೆಡೆ ಸಡ್ಡು ಮಾಡುತ್ತಿದೆ.
<p>ಜಯರಾಜ್ ಪುತ್ರ ಅಜಿತ್ ಜಯರಾಜ್ ಅವರು ಫೇಸ್ಬುಕ್ನಲ್ಲಿ ಜಯರಾಜ್ ಅವರ ಚಿತ್ರವೊಂದನ್ನು ಹಂಚಿಕೊಂಡು, 'ಕೆಲವೊಮ್ಮೆ ರಾಜ ಮೂರ್ಖರಿಗೆ ನೆನಪಿಸಬೇಕಾಗುತ್ತದೆ, ತಾನೇಕೆ ರಾಜ ಎಂದು' ಎಂದು ಅಜಿತ್ ಜಯರಾಜ್ ಬರೆದಿದ್ದಾರೆ. ಜೊತೆಗೆ ಅಪ್ಪನ ಚಿತ್ರ ಮತ್ತು ಗರೀಬಿ ಹಟಾವೋ ಪತ್ರಿಕೆಯ ಮುಖಪುಟವನ್ನು ಹಂಚಿಕೊಂಡಿದ್ದಾರೆ.</p>
ಜಯರಾಜ್ ಪುತ್ರ ಅಜಿತ್ ಜಯರಾಜ್ ಅವರು ಫೇಸ್ಬುಕ್ನಲ್ಲಿ ಜಯರಾಜ್ ಅವರ ಚಿತ್ರವೊಂದನ್ನು ಹಂಚಿಕೊಂಡು, 'ಕೆಲವೊಮ್ಮೆ ರಾಜ ಮೂರ್ಖರಿಗೆ ನೆನಪಿಸಬೇಕಾಗುತ್ತದೆ, ತಾನೇಕೆ ರಾಜ ಎಂದು' ಎಂದು ಅಜಿತ್ ಜಯರಾಜ್ ಬರೆದಿದ್ದಾರೆ. ಜೊತೆಗೆ ಅಪ್ಪನ ಚಿತ್ರ ಮತ್ತು ಗರೀಬಿ ಹಟಾವೋ ಪತ್ರಿಕೆಯ ಮುಖಪುಟವನ್ನು ಹಂಚಿಕೊಂಡಿದ್ದಾರೆ.
<p>ಮುತ್ತಪ್ಪ ರೈ ಸಾವನ್ನಪ್ಪಿದ್ದಾರೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿರುವ ಸಮಯದಲ್ಲಿ ಈ ಪೋಸ್ಟ್ ಅನ್ನು ಅಜಿತ್ ಪೋಸ್ಟ್ ಮಾಡಿದ್ದಾರೆ.ಆದ್ದರಿಂದ ಮುತ್ತಪ್ಪ ರೈ ಸಾವನ್ನು ಉದ್ದೇಶಿಸಿಯೇ ಅಜಿತ್ ಈ ಪೋಸ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. </p>
ಮುತ್ತಪ್ಪ ರೈ ಸಾವನ್ನಪ್ಪಿದ್ದಾರೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿರುವ ಸಮಯದಲ್ಲಿ ಈ ಪೋಸ್ಟ್ ಅನ್ನು ಅಜಿತ್ ಪೋಸ್ಟ್ ಮಾಡಿದ್ದಾರೆ.ಆದ್ದರಿಂದ ಮುತ್ತಪ್ಪ ರೈ ಸಾವನ್ನು ಉದ್ದೇಶಿಸಿಯೇ ಅಜಿತ್ ಈ ಪೋಸ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.
<p>ಈ ಬಗ್ಗೆ ಮಾತನಾಡಿರುವ ಅಜಿತ್ ಜಯರಾಜ್ ಆ ಫೇಸ್ಬುಕ್ ಪೋಸ್ಟ್ ನ ವಿವಾದದ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. </p>
ಈ ಬಗ್ಗೆ ಮಾತನಾಡಿರುವ ಅಜಿತ್ ಜಯರಾಜ್ ಆ ಫೇಸ್ಬುಕ್ ಪೋಸ್ಟ್ ನ ವಿವಾದದ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.
<p>ಮುತ್ತಪ್ಪ ರೈ ಸಾವಿಗೂ ನನ್ನ ಫೇಸ್ಬುಕ್ ಪೋಸ್ಟ್ಗೂ ಸಂಬಂಧವಿಲ್ಲ.ನಾನು ನನ್ನ ಅಪ್ಪನ ವಿಡಿಯೋಗಳನ್ನು ನೋಡುತ್ತಿದ್ದೆ.ಅಲ್ಲಿ ಕೆಲವರು ಅಪ್ಪನ ಬಗ್ಗೆ ನೆಗೆಟಿವ್ ಕಮೆಂಟ್ ಹಾಕಿದ್ದರು ಹಾಗಾಗಿ ಈ ಪೋಸ್ಟ್ ಹಾಕಿದೆ ಎಂದು ಹೇಳಿಕೆ ನೀಡಿದ್ದಾರೆ.</p>
ಮುತ್ತಪ್ಪ ರೈ ಸಾವಿಗೂ ನನ್ನ ಫೇಸ್ಬುಕ್ ಪೋಸ್ಟ್ಗೂ ಸಂಬಂಧವಿಲ್ಲ.ನಾನು ನನ್ನ ಅಪ್ಪನ ವಿಡಿಯೋಗಳನ್ನು ನೋಡುತ್ತಿದ್ದೆ.ಅಲ್ಲಿ ಕೆಲವರು ಅಪ್ಪನ ಬಗ್ಗೆ ನೆಗೆಟಿವ್ ಕಮೆಂಟ್ ಹಾಕಿದ್ದರು ಹಾಗಾಗಿ ಈ ಪೋಸ್ಟ್ ಹಾಕಿದೆ ಎಂದು ಹೇಳಿಕೆ ನೀಡಿದ್ದಾರೆ.
<p>ಮುತ್ತಪ್ಪ ರೈ ಸಾವಿನ ಬಗ್ಗೆ ಅಜಿತ್ ಜಯರಾಜ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.'ಯಾರೇ ಆಗಲಿ ಅದು ಒಂದು ಜೀವ, ಆ ಜೀವ ಮರಳಿ ಬರುವುದಿಲ್ಲ ಎನ್ನುವುದು ಎಲ್ಲರಿಗೂ ಬೇಸರದ ಸಂಗತಿಯೇ' ಎಂದು ಅಜಿತ್ ಹೇಳಿದ್ದಾರೆ. ಅಷ್ಟೇ ಅಲ್ಲ,ತಾವು ಸಿನಿಮಾರಂಗದಲ್ಲಿ ಭವಿಷ್ಯ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ,ಇಲ್ಲಿಯೇ ನೆಲೆಯೂರಲು ಬಯಸುತ್ತೇನೆ ಎಂದು ತಮ್ಮ ಕನಸಿನ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. </p>
ಮುತ್ತಪ್ಪ ರೈ ಸಾವಿನ ಬಗ್ಗೆ ಅಜಿತ್ ಜಯರಾಜ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.'ಯಾರೇ ಆಗಲಿ ಅದು ಒಂದು ಜೀವ, ಆ ಜೀವ ಮರಳಿ ಬರುವುದಿಲ್ಲ ಎನ್ನುವುದು ಎಲ್ಲರಿಗೂ ಬೇಸರದ ಸಂಗತಿಯೇ' ಎಂದು ಅಜಿತ್ ಹೇಳಿದ್ದಾರೆ. ಅಷ್ಟೇ ಅಲ್ಲ,ತಾವು ಸಿನಿಮಾರಂಗದಲ್ಲಿ ಭವಿಷ್ಯ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ,ಇಲ್ಲಿಯೇ ನೆಲೆಯೂರಲು ಬಯಸುತ್ತೇನೆ ಎಂದು ತಮ್ಮ ಕನಸಿನ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ.
<p>ಅಜಿತ್ ಜಯರಾಜ್ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು ತ್ರಾಟಕ ಸಿನಿಮಾದಲ್ಲಿ ಎರಡು ಭಿನ್ನ ಶೇಡ್ನ ಪಾತ್ರದಲ್ಲಿ ಅವರು ಅಭಿಯಿಸಿದ್ದರು.ಅಲ್ಲದೆ ಹನಿ ಹನಿ ಇಬ್ಬನಿ ಎಂಬ ಚಿತ್ರದಲ್ಲೂ ನಟಿಸಿದ್ದರು.</p>
ಅಜಿತ್ ಜಯರಾಜ್ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು ತ್ರಾಟಕ ಸಿನಿಮಾದಲ್ಲಿ ಎರಡು ಭಿನ್ನ ಶೇಡ್ನ ಪಾತ್ರದಲ್ಲಿ ಅವರು ಅಭಿಯಿಸಿದ್ದರು.ಅಲ್ಲದೆ ಹನಿ ಹನಿ ಇಬ್ಬನಿ ಎಂಬ ಚಿತ್ರದಲ್ಲೂ ನಟಿಸಿದ್ದರು.
<p>ರೈಮ್ಸ್ ಚಿತ್ರದ ಮೂಲಕ ಅಜಿತ್ ಅವರು ನಾಯಕ ನಟನಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.</p>
ರೈಮ್ಸ್ ಚಿತ್ರದ ಮೂಲಕ ಅಜಿತ್ ಅವರು ನಾಯಕ ನಟನಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
<p>ಇನ್ನೂ ಹೆಚ್ಚೆಚ್ಚು ಕನ್ನಡ ಸಿನಿಮಾಗಳು ಇವರ ಪಾಲಿಗೆ ಸಿಗಲಿ.ಯಶಸ್ಸಿನೊಂದಿಗೆ ಇವರ ಭವಿಷ್ಯ ಇನ್ನು ಎತ್ತರಕ್ಕೆ ಬೆಳೆಯಲಿ.ಕನ್ನಡ ಸಿನಿರಸಿಕರನ್ನು ಉತ್ತಮ ರೀತಿಯಲ್ಲಿ ರಂಜಿಸಲಿ.ಈ ಮೂಲಕ ಕನ್ನಡಕ್ಕೊಬ್ಬ ಭರವಸೆಯ ನಟ ದೊರಕಲಿ.</p>
ಇನ್ನೂ ಹೆಚ್ಚೆಚ್ಚು ಕನ್ನಡ ಸಿನಿಮಾಗಳು ಇವರ ಪಾಲಿಗೆ ಸಿಗಲಿ.ಯಶಸ್ಸಿನೊಂದಿಗೆ ಇವರ ಭವಿಷ್ಯ ಇನ್ನು ಎತ್ತರಕ್ಕೆ ಬೆಳೆಯಲಿ.ಕನ್ನಡ ಸಿನಿರಸಿಕರನ್ನು ಉತ್ತಮ ರೀತಿಯಲ್ಲಿ ರಂಜಿಸಲಿ.ಈ ಮೂಲಕ ಕನ್ನಡಕ್ಕೊಬ್ಬ ಭರವಸೆಯ ನಟ ದೊರಕಲಿ.