ಹೊಸ ಬಾಬ್ ಲುಕ್ನಲ್ಲಿ ಕನ್ನಡದ ಖ್ಯಾತ ಗಾಯಕಿ ಅರ್ಚನಾ ಉಡುಪ
ಭಾವಗೀತೆ ಪ್ರಪಂಚದಲ್ಲಿ ಹೊಸ ಛಾಪು ಮೂಡಿಸಿದವರು, ಹೊಸ ತಲೆಮಾರಿನ ಗಾಯಕಿ ಅರ್ಚನಾ ಉಡುಪ. ಚಿಕ್ಕಂದಿನಿಂದಲೇ ಸಂಗೀತದ ಜೊತೆಯಲ್ಲೇ ಬೆಳೆದವರು. ಸಾಕಷ್ಟು ಚಿತ್ರಗೀತೆಗಳು, ಭಾವಗೀತೆಗಳನ್ನು ಹಾಡಿದ್ದಾರೆ. ಸದ್ಯ ಜೀ ಕನ್ನಡದಲ್ಲಿ ಬರುತ್ತಿರುವ ಹಾಡಿತು ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದಾರೆ. ಅವರ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ.
ಅರ್ಚನಾ ಉಡುಪ ಶಿವಮೊಗ್ಗ ಜಿಲ್ಲೆಯ ಹೊಸನಗರ ಮೂಲದವರು
ಇದುವರೆಗೂ ಒಂದು ಸಾವಿರಕ್ಕೂ ಹೆಚ್ಚು ಭಕ್ತಿಗೀತೆಗಳು, ಶಾಸ್ತ್ರೀಯ ಗೀತೆಗಳು ಹಾಗೂ ಚಿತ್ರಗೀತೆಗಳನ್ನು ಹಾಡಿದ್ದಾರೆ.
2012 ರಲ್ಲಿ ಭಾಗೀರಥಿ ಚಿತ್ರದ ಗಾಯನಕ್ಕೆ ರಾಜ್ಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ತಂ ನಂ ನಂ ಮನಸು ಮಿಡಿಯುತಿದೆ, ತನುವೂ ಮನವೂ ಎಲ್ಲ ನಿಂದೆಂದಿದೆ, ಪೆಹಲಾ ಪೆಹಲಾ ಪ್ಯಾರ್, ಸಾಗರ್ ಕಿನಾರೆ.. ಹೀಗೆ ಕನ್ನಡ, ಹಿಂದಿ ಎರಡರಲ್ಲೂ ಹಾಡಿದ್ದಾರೆ.
ತಂದೆ ಶ್ರೀನಿವಾಸ ಉಡುಪ ಸಂಗೀತ ಗುರು.
ಶಿವಮೊಗ್ಗ ಸುಬ್ಬಣ್ಣರ ಮನೆ ಸೊಸೆ. ತವರು ಮನೆ, ಗಂಡನ ಮನೆ ಎರಡೂ ಕಡೆ ಸಂಗೀತಕ್ಕೆ ಬೆಂಬಲ ಸಿಕ್ಕಿತು.
'ಗಾಂಧಾರ' ಎನ್ನುವ ಸಂಗೀತ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ.
ಜೀ ಟಿವಿ ಸರಿಗಮಪ ಗೆದ್ದ ಮೊದಲ ದಕ್ಷಿಣ ಭಾರತದ ಗಾಯಕಿ ಇವರು. ವೇದಿಕೆ ಮೇಲೆ ತೀರ್ಪುಗಾರರು ಸಂಗೀತದ ಅರ್ಚನೆ ಜಾಸ್ತಿ ಇರುವ ಅರ್ಚನಾರನ್ನೇ ವಿಜೇತೆಯಾಗಿ ಘೋಷಿಸಿದರು.
'ಮಗಳು ಜಾನಕಿ' ಧಾರಾವಾಹಿಯಲ್ಲಿ ಜಡ್ಜ್ ಪಾತ್ರ ಮಾಡಿದ್ದಾರೆ.
ಜೀ ಕನ್ನಡ 'ಹಾಡಿತು ಕನ್ನಡ ಕೋಗಿಲೆ'ಯಲ್ಲಿ ಜಡ್ಜ್ ಆಗಿದ್ದಾರೆ.