- Home
- Entertainment
- Sandalwood
- ನಾನು ಚಿರಋಣಿಯಾಗಿದ್ದೇನೆ, ವಾಮನ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ: ಸ್ಯಾಂಡಲ್ವುಡ್ ಶೋಕ್ದಾರ್ ಧನ್ವೀರ್
ನಾನು ಚಿರಋಣಿಯಾಗಿದ್ದೇನೆ, ವಾಮನ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ: ಸ್ಯಾಂಡಲ್ವುಡ್ ಶೋಕ್ದಾರ್ ಧನ್ವೀರ್
ಇದು ನನ್ನ ನಾಲ್ಕನೇ ಸಿನಿಮಾ. ನನ್ನ ಮೊದಲ ಚಿತ್ರದಿಂದಲೂ ಎಲ್ಲರೂ ನೀಡುತ್ತಿರುವ ಪ್ರೋತ್ಸಾಹಕ್ಕೆ ನಾನು ಚಿರಋಣಿಯಾಗಿದ್ದೇನೆ. ವಾಮನ ಚಿತ್ರಕ್ಕೂ ಪ್ರೋತ್ಸಾಹವಿರಲಿ ಎಂದರು ಧನ್ವೀರ್.

ಧನ್ವೀರ್ ನಾಯಕನಾಗಿ ನಟಿಸಿರುವ, ಶಂಕರ್ ರಾಮನ್ ಎಸ್ ನಿರ್ದೇಶನದ ‘ವಾಮನ’ ಚಿತ್ರದ ತಾಯಿ- ಮಗನ ಬಾಂಧವ್ಯದ ಹಾಡು ಬಿಡುಗಡೆಯಾಗಿದೆ. ಈ ಸಿನಿಮಾ ಏ.10ರಂದು ರಿಲೀಸ್ ಆಗುತ್ತಿದೆ.
ಈ ಕುರಿತು ನಿರ್ದೇಶಕ ಶಂಕರ್ ರಾಮನ್, ‘ಕಂದ ಕನಸ ರೂಪ ಎಂಬ ಈ ಹಾಡನ್ನು ಎಲ್ಲಾ ತಾಯಂದಿರಿಗೆ ಅರ್ಪಿಸುತ್ತೇನೆ. ‘ಕೈ ತುತ್ತು ಕೊಟ್ಟವಳೇ ಐ ಲವ್ ಯು ಮದರ್ ಇಂಡಿಯಾ’, ‘ಬೇಡುವೆನು ವರವನು ಕೊಡೆ ತಾಯಿ ಜನುಮವನು’ ಎಂಬ ಹಾಡುಗಳು ನನಗಿಷ್ಟ. ಅದಕ್ಕೆ ಅಂಥದ್ದೇ ಒಂದು ಹಾಡು ಮಾಡಿಸಿದ್ದೇವೆ. ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎಂದರು.
ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಈ ಹಾಡಿಗೆ ಪ್ರಮೋದ್ ಮರವಂತೆ ಗೀತ ರಚನೆ ಮಾಡಿದ್ದಾರೆ. ಚೇತನ್ ಗೌಡ ಹಾಗೂ ರೂಪಾ ಚೇತನ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಧನ್ವೀರ್, ‘ಇದು ನನ್ನ ನಾಲ್ಕನೇ ಸಿನಿಮಾ. ನನ್ನ ಮೊದಲ ಚಿತ್ರದಿಂದಲೂ ಎಲ್ಲರೂ ನೀಡುತ್ತಿರುವ ಪ್ರೋತ್ಸಾಹಕ್ಕೆ ನಾನು ಚಿರಋಣಿಯಾಗಿದ್ದೇನೆ. ವಾಮನ ಚಿತ್ರಕ್ಕೂ ಪ್ರೋತ್ಸಾಹವಿರಲಿ’ ಎಂದರು.
ರೀಷ್ಮಾ ನಾಣಯ್ಯ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಗಾಯಕ ವೆಂಕಟೇಶ್ ಡಿ.ಸಿ, ಪೆಟ್ರೋಲ್ ಪ್ರಸನ್ನ, ಶಿವರಾಜ್ ಕೆ.ಆರ್ ಪೇಟೆ, ಕಾಕ್ರೋಚ್ ಸುಧಿ ಇದ್ದರು.