MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಭಾರತದ ಅದ್ಧೂರಿ ಮದುವೆಯಲ್ಲಿ ಜನಾರ್ದನ ರೆಡ್ಡಿ ಮಗಳ ಮದುವೆಯೂ ಒಂದು!

ಭಾರತದ ಅದ್ಧೂರಿ ಮದುವೆಯಲ್ಲಿ ಜನಾರ್ದನ ರೆಡ್ಡಿ ಮಗಳ ಮದುವೆಯೂ ಒಂದು!

ಭಾರತದಲ್ಲಿ ಮದುವೆಗಳು ಯಾವಾಗಲೂ ಅದ್ದೂರಿಯಾಗಿ ನಡೆಯುತ್ತವೆ. ಮದುವೆ ದಿನವನ್ನು ಸ್ಮರಣೀಯವಾಗಿಸಲು ಜನರು ಕೊಟ್ಯಾಂತರ ರೂಪಾಯಿ ಖರ್ಚು ಮಾಡ್ತಾರೆ. ಭಾರತದಲ್ಲಿ ನಡೆದ ಭಾರಿ ಐಷಾರಾಮಿ ಮದುವೆಗಳು ಯಾವುವು ಅನ್ನೋದು ನಿಮಗೆ ಗೊತ್ತಾ? ಇಲ್ಲಿದೆ ನೋಡಿ ಆ ಬಗ್ಗೆ ಡಿಟೇಲ್ಸ್.. 

2 Min read
Author : Suvarna News
Published : Mar 28 2023, 07:50 PM IST
Share this Photo Gallery
  • FB
  • TW
  • Linkdin
  • Whatsapp
16

ಭಾರತದಲ್ಲಿ ಮದುವೆಗಳು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತೆ. ಐಷಾರಾಮಿ ಅಲಂಕಾರಗಳಿಂದ ಹಿಡಿದು, ದುಬಾರಿ ಉಡುಗೊರೆಗಳವರೆಗೆ, ಜನರು ಈ ಕಾರ್ಯಕ್ರಮವನ್ನು ಒಂದು ಭವ್ಯ ಸಮಾರಂಭವಾಗಿ ಮಾಡಲು ಸಾಕಷ್ಟು ಖರ್ಚು ಮಾಡುತ್ತಾರೆ, ಇದರಿಂದ ಅದು ದೀರ್ಘಕಾಲದವರೆಗೆ ನೆನಪಿನಲ್ಲಿ ಉಳಿಯುತ್ತದೆ. ಆರ್ಥಿಕ ಹಿಂಜರಿತದ ಸಮಯದಲ್ಲೂ, ಕುಟುಂಬಗಳು ಮದುವೆಗಳ ವಿಷಯಕ್ಕೆ ಬಂದಾಗ ಸಾಲ ಮಾಡಿಯಾದರೂ ಸರಿ, ಅದ್ಧೂರಿಯಾಗಿ ಮದುವೆ ಮಾಡುತ್ತಾರೆ. ಇನ್ನೂ ಜನಪ್ರಿಯ ವ್ಯಕ್ತಿಗಳಂತೂ ಹಣವನ್ನು ನೀರಿನಂತೆ ಖರ್ಚು ಮಾಡಿ (most expensive Indian Wedding) ವಿಶೇಷ ರೀತಿಯಲ್ಲಿ ಮದುವೆಯಾಗುತ್ತಾರೆ. 

26

 2016ರಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ (Janardhana Reddy )ಪುತ್ರಿ ಮದುವೆಗೆ 500 ಕೋಟಿ ರೂ. ಖರ್ಚು ಮಾಡಲಾಗಿತ್ತು. ವಿಜಯನಗರ ಸಾಮ್ರಾಜ್ಯವನ್ನೆ ಮತ್ತೆ ಸೃಷ್ಟಿಸಿದಂತೆ ಆ ಜಾಗವನ್ನು ಸೃಷ್ಟಿ ಮಾಡಲಾಗಿತ್ತು. ಏಸಿ ಟೆಂಟ್ ನ ಪ್ರವೇಶ ಧ್ವಾರದಲ್ಲಿ ಎರಡು ದೊಡ್ಡ ಕಲ್ಲಿನ ಆನೆಗಳು ತಮ್ಮ ಸೊಂಡಿಲುಗಳನ್ನು ಎತ್ತಿ ನಿಂತಿದ್ದವು. ಈ ಸ್ಥಳವು 30ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ ಮತ್ತು ಅನೇಕ ಬಾಲಿವುಡ್ ಮಾದರಿಯ ಸೆಟ್ ಗಳನ್ನು ಒಳಗೊಂಡಿದೆ. 50,000 ಅತಿಥಿಗಳು, 3,000 ಭದ್ರತಾ ಸಿಬ್ಬಂದಿ ಮತ್ತು ಬೌನ್ಸರ್ ಗಳು ಇದ್ದರು.

36

2018 ರಲ್ಲಿ ಮುಕೇಶ್ ಅಂಬಾನಿ (Mukesh Ambani) ಅವರ ಮಗಳು ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್ ಅವರ ವಿವಾಹಕ್ಕೆ ಮುಂಚಿತವಾಗಿ ಉದಯಪುರದಲ್ಲಿ ಗಾಯಕ ಬೆಯಾನ್ಸ್ ಅವರ ಖಾಸಗಿ ಸಂಗೀತ ಕಚೇರಿ ನಡೆಯಿತು. 100 ಕ್ಕೂ ಹೆಚ್ಚು ಚಾರ್ಟರ್ಡ್ ವಿಮಾನಗಳು ಅತಿಥಿಗಳನ್ನು ಕರೆದೊಯ್ಯುತ್ತಾ ಉದಯಪುರ ವಿಮಾನ ನಿಲ್ದಾಣದಲ್ಲಿ ಇಳಿದವು. ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರಲ್ಲಿ ಒಬ್ಬರು. ಬಿಜೆಪಿ ಅಭ್ಯರ್ಥಿ ದೇವೇಂದ್ರ ಫಡ್ನವೀಸ್, ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

46

2011 ರಲ್ಲಿ ಕಾಂಗ್ರೆಸ್ ಮುಖಂಡ ಕನ್ವರ್ ಸಿಂಗ್ ತನ್ವಾರ್ (Kanwar Lal Singh Tanwar) ಅವರ ಪುತ್ರ ಲಲಿತ್ ಅವರು ಸೊಹ್ನಾದ ಮಾಜಿ ಶಾಸಕ ಸುಖ್ಬೀರ್ ಸಿಂಗ್ ಜೌನಪುರಿಯಾ ಅವರ ಪುತ್ರಿ ಯೋಗಿತಾ ಅವರನ್ನು ಹರಿಯಾಣದ ಜೌನಾಪುರ ಗ್ರಾಮದಲ್ಲಿ ವಿವಾಹವಾದರು. ಸಮಾರಂಭದಲ್ಲಿ ಸುಮಾರು 15,000 ಜನರು ಭಾಗವಹಿಸಿದ್ದರು. ಉಡುಗೊರೆಗಳಲ್ಲಿ ಹೆಲಿಕಾಪ್ಟರ್ ಮತ್ತು ₹ 21 ಕೋಟಿ ಕೂಡ ಸೇರಿದೆ. ಒಂದು ವಾರದ ಸಂಭ್ರಮಾಚರಣೆಯಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಕಲಾವಿದರೊಂದಿಗೆ ಪ್ರಸಿದ್ಧ ಜಾನಪದ ಪ್ರದರ್ಶನಗಳೊಂದಿಗೆ ಸಂಗೀತ ರಾತ್ರಿಯನ್ನು ಒಳಗೊಂಡಿತ್ತು. ಸಮಾರಂಭದಲ್ಲಿ ಭಾಗವಹಿಸಿದ ಎಲ್ಲಾ ಅತಿಥಿಗಳಿಗೆ 30 ಗ್ರಾಂ ಬೆಳ್ಳಿ ಬಿಸ್ಕತ್ತು, ಸಫಾರಿ ಸೂಟ್ ಸೆಟ್, ಶಾಲು ಮತ್ತು 2,100 ರೂ.ಗಳ ನಗದು ಒಳಗೊಂಡ ಪ್ಯಾಕೆಟ್ ಅನ್ನು ಉಡುಗೊರೆಯಾಗಿ ನೀಡಲಾಯಿತು.
 

56

ಕೆಲವು ತಿಂಗಳುಗಳ ಹಿಂದೆ, ನ್ಯೂಜಿಲೆಂಡ್ ಮೂಲದ ಉದ್ಯಮಿ ಎಸ್ ರವೀಂದ್ರ ಅವರು ತಮ್ಮ ಪುತ್ರರಾದ ಎಸ್ ರೋಹಿತ್ ಮತ್ತು ಎಸ್ ರಂಜಿತ್ ಅವರ ಮದುವೆಯನ್ನು ಹೈದರಾಬಾದ್‌ನಲ್ಲಿ ಮಾಡಿದರು. ಇದು "ದಕ್ಷಿಣ ಭಾರತದ ಅತ್ಯಂತ ದುಬಾರಿ ಮದುವೆ" (South Indias most ecxpensive wedding) ಎಂದು ಹೇಳಲಾಗುತ್ತಿದೆ. ಸಹೋದರರು ಸೋದರಸಂಬಂಧಿಗಳಾದ ಶ್ರುತಿ ಮತ್ತು ದಿವ್ಯಾ ಅವರನ್ನು ವರಿಸಿದರು. ಮಂಗಳಸೂತ್ರಗಳಿಗಾಗಿ ಪ್ಲಾಟಿನಂ ಮತ್ತು ಚಿನ್ನದ ಸರಗಳನ್ನು ನೀಡಿದರು. ವಧುಗಳು ಮನೀಶ್ ಮಲ್ಹೋತ್ರಾ ರಚಿಸಿದ ಉಡುಪುಗಳನ್ನು ಧರಿಸಿದ್ದರು. ಹೈದರಾಬಾದ್ದ್ನ‌ನ  ಜಿಎಂಆರ್ ಗಾರ್ಡನ್ಸ್ನಲ್ಲಿ 15,000 ಅತಿಥಿಗಳು ಭಾಗವಹಿಸಿದ್ದರು ಮತ್ತು ಸಮಾರಂಭದಲ್ಲಿ ಬಂಗಾಳಿ, ರಾಜಸ್ಥಾನಿ, ಪಂಜಾಬಿ ಮತ್ತು ಜೋಧಾ ಅಕ್ಬರ್, ಅಂಡರ್ ವಾಟರ್ ಮತ್ತು ಅರೇಬಿಯನ್ ನೈಟ್ಸ್‌ನಂಥ ವಿವಿಧ ಆಚರಣೆಗಳನ್ನು ಪ್ರದರ್ಶಿಸಲಾಯಿತು. ವಧುಗಳನ್ನು ಗುಲಾಬಿ ಬಣ್ಣದ ಮರ್ಸಿಡಿಸ್ ಕಾರಿನಲ್ಲಿ ಪಟ್ಟಣದ ಸುತ್ತಲೂ ಮೆರವಣಿಗೆ ಮಾಡಲಾಯಿತು..

66

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಗಾಯಕ ನಿಕ್ ಜೋನಸ್ 2018 ರಲ್ಲಿ ವಿವಾಹವಾದರು. 105 ಕೋಟಿ ವೆಚ್ಚದಲ್ಲಿ ಉದಯಪುರದ ಉಮ್ಮೇದ್ ಅರಮನೆಯಲ್ಲಿ ಸಮಾರಂಭಗಳನ್ನು ಆಯೋಜಿಸಲಾಗಿತ್ತು. ಅದೇ ರೀತಿ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಮದುವೆಗೆ 90 ಕೋಟಿ ರೂ.
 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಮದುವೆ
ಭಾರತ

Latest Videos
Recommended Stories
Recommended image1
'ನನ್ನ ಹೆಸರಲ್ಲಿ ಕೋಟ್ಯಂತರ ಸಾಲ ಮಾಡಿದ್ದ..' ವಿಚ್ಛೇದನದ ಬಗ್ಗೆ ಮೊದಲ ಬಾರಿ ಮಾತನಾಡಿದ ಮೇರಿ ಕೋಮ್‌
Recommended image2
"ನನ್ನ ಪಾಲಿನ ಸಾಕ್ಷಾತ್ ದೇವರು ಇವರೇ!"- ತಂದೆಯ ಹುಟ್ಟುಹಬ್ಬದಂದು ಮಗ ಅಲ್ಲು ಅರ್ಜುನ್ ಭಾವುಕ ಪತ್ರ!
Recommended image3
ಅರಟ್ಟೈ ಆ್ಯಪ್ ಆರಂಭಿಸಿದ ಶ್ರೀಧರ್ ವೆಂಬುಗೆ ಶಾಕ್, ಪತ್ನಿಗೆ ನೀಡಬೇಕು ₹15000 ಕೋಟಿ ವಿಚ್ಛೇದನ ಬಾಂಡ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved