ಕರ್ನಾಟಕ - ಮಧ್ಯಪ್ರದೇಶಕ್ಕೆ ನಂಟು ಬೆಸೆದ IAS Srusthi Deshmukh ಲವ್ ಸ್ಟೋರಿ
ಭಾರತದಲ್ಲಿ ಹೆಚ್ಚು ಆಕರ್ಷಣೀಯ ಉದ್ಯೋಗವೆಂದರೆ ಐಎಎಸ್ ಅಫೀಸರ್ಸದ್ದು. ಅವರ ಲೈಫ್ಸ್ಟೈಲ್, ಕಾನ್ಫೆಡೆನ್ಸ್ ಲೆವೆಲ್ ಎಲ್ಲವುಕ್ಕಿಂತ ಹೆಚ್ಚಾಗಿ ಅವರಿಗಿರೋ ಪವರ್ಸ್ ಹೆಚ್ಚು ಸದ್ದು ಮಾಡುತ್ತವೆ. ಅಲ್ಲದೇ ಬಹುತೇಕ ಐಎಎಸ್ ಅಧಿಕಾರಗಳ ಖಾಸಗಿ ಜೀವನವೂ ವಿಭಿನ್ವವಾಗಿರುತ್ತದೆ. ಯುವಕರು ಇವರ ಜೀವನದಿಂದ ಸ್ಫೂರ್ತಿ ಪಡೆಯುತ್ತಾರೆ. ಯಶಸ್ಸಿನ ಏಣಿ ಏರುತ್ತಾರೆ. ಅವರಲ್ಲಿ ಐಎಎಸ್ ಸೃಷ್ಟಿ ದೇಶಮುಖ್ ಮತ್ತು ಐಎಎಸ್ ನಾಗಾರ್ಜುನ ಗೌರ್ ಅವರ ಪ್ರೇಮಕಥೆ ಇದು.

ಸೋಶಿಯಲ್ ಮೀಡಿಯಾ ಐಕಾನ್ ಸೃಷ್ಟಿ: IAS ಸೃಷ್ಟಿ ಜಯಂತ್ ದೇಶ್ ಮುಖ್ (Srishti Jayant Deshmukh) ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಲ್ಲಿದ್ದ ಅಧಿಕಾರಿ. ಅವರ ಪರ್ಸನಲ್ ಲೈಫಿನಿಂದ ಹಿಡಿದು, ಅವರು ಕೈಗೆತ್ತಿಗೊಳ್ಳುವ ಕೆಲಸದವರೆಗೂ ಇವರು ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದಾರೆ. ಅವರ ರಿಲೇಶಿನ್ಶಿಪ್ ಬಗ್ಗೆಯೂ ಇಂಟರೆಸ್ಟಿಂಗ್ ಕಥೆ ಇದೆ.
IAS Love Story: ಸೃಷ್ಟಿ ಜಯಂತ್ ದೇಶ್ ಮುಖ್ 2022 ರ ಏಪ್ರಿಲ್ನಲ್ಲಿ ಬಹಳ ಅದ್ಧೂರಿಯಾಗಿ ಸಪ್ತಪದಿ ತುಳಿದಿದ್ದರು. ಇವರ ಪತಿ ನಾಗಾರ್ಜುನ ಗೌಡ ಸಹ ಐಎಎಸ್ ಆಫೀಸರ್. ಈ ಇಬ್ಬರು IAS ಅಧಿಕಾರಿಗಳ ಲವ್ ಸ್ಟೋರಿ ಸಿನಿಮಾ ಕಥೆಯಂತಿದೆ.
IAS ಟ್ರೈನಿಂಗ್ ಸಮಯದಲ್ಲಿ ಪ್ರೇಮದಾರಂಭ: 2019 ರಲ್ಲಿ ಭೋಪಾಲ್ನ ಸೃಷ್ಟಿ ಜಯಂತ್ ಯುಪಿಎಸ್ ಸಿ ಪರೀಕ್ಷೆ (UPSC exam) ಉತ್ತೀರ್ಣರಾಗಿದ್ದರು. ಮಸೂರಿಯಲ್ಲಿ ಟ್ರೈನಿಂಗ್ ಇದ್ದಾಗ ನಾಗಾರ್ಜುನ ಗೌಡರನ್ನು ಭೇಟಿಯಾಗಿದ್ದರು.
ಕರ್ನಾಟಕದ ಹುಡುಗ: ಕರ್ನಾಟಕದವರಾದ ನಾಗಾರ್ಜುನ್ ವೈದ್ಯ ಪದವಿ ಪಡೆದವರು. ನಂತರ UPSC ಕ್ಲಿಯರ್ ಮಾಡಿ ಐಎಎಸ್ ಅಧಿಕಾರಿಯಾದರು. ಇವರೂ ಮಸೂರಿಯಲ್ಲಿ ಟ್ರೈನಿಂಗ್ಗೆ ಹೋಗಿದ್ದರು.
ಟ್ರೈನಿಂಗ್ -ರೊಮ್ಯಾನ್ಸ್: ಐಎಎಸ್ ಟ್ರೈನಿಂಗ್ (IAS Training) ಆಗುವಾಗಲೇ ಸೃಷ್ಟಿ ಮತ್ತು ನಾಗಾರ್ಜುನ್ ಇಬ್ಬರೂ ಸ್ನೇಹಿತರಾಗಿದ್ದರು. ಬಳಿಕ ಸ್ನೇಹ ಪ್ರೀತಿಗೆ ತಿರುಗಿತು. ಒಬ್ಬರಿಗೊಬ್ಬರು ಪ್ರೀತಿಯನ್ನು ಹೇಳಿ, ಒಪ್ಪಿಕೊಂಡಿದ್ದೂ ಆಯ್ತು.
ಒಂದೂವರೆ ವರ್ಷ ಲವ್, ನಂತರ ಮದುವೆ: ಈ ಐಎಎಸ್ ಜೋಡಿ ಸುಮಾರು ಒಂದೂವರೆ ವರ್ಷ ಡೇಟಿಂಗ್ ಮಾಡಿ, ಇಬ್ಬರೂ 2021 ರಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡರು. ಆ ಮೂಲಕ ಭೋಪಾಲ್ ಹುಡುಗಿ ಕರುನಾಡ ಸೊಸೆಯಾದರು.
ಅದ್ದೂರಿ ಮದುವೆ: ಸೃಷ್ಟಿ ಮತ್ತು ನಾಗಾರ್ಜುನ್ ಇಬ್ಬರೂ ಏಪ್ರಿಲ್ 2022ರಲ್ಲಿ ಅದ್ಧೂರಿಯಾಗಿಯೇ ದಾಂಪತ್ಯಕ್ಕೆ ಕಾಲಿಟ್ಟರು. ಇವರ ಮದುವೆಯಲ್ಲಿ ನಾಗಾರ್ಜುನ್ ಭರ್ಜರಿ ಡ್ಯಾನ್ಸ್ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು.
ನಂತರದ ಜೀವನ ಹೀಗಿತ್ತು: ಬೇರೆ ಬೇರೆ ರಾಜ್ಯದವರಾದ ಇಬ್ಬರದ್ದೂ ಬೇರೆ ಬೇರೆ ಸಂಪ್ರದಾಯವಾಗಿದ್ದರೂ ಹೊಂದಾಣಿಕೆಗೆ ಕೊರೆತೆಯಾಗಿಲ್ಲ.. ಸೋಶಿಯಲ್ ಮೀಡಿಯಾದಲ್ಲಿ ಇವರ ಫೋಟೋಗಳನ್ನೂ ಸಹ ಕಾಣಬಹುದು.
ದಾಂಪತ್ಯದಲ್ಲಿ ಹೊಂದಾಣಿಕೆ ಇದ್ದರೆ ಎಲ್ಲವೂ ಸೂಕ್ತವಾಗಿಯೇ ಇರುತ್ತೆ. ಯಾವ ರಾಜ್ಯಾ, ದೇಶವಾದರೇನು. ದಾಂಪತ್ಯ ಕಾಲಿಟ್ಟ ಜೋಡಿಗಳಲ್ಲಿ ಪ್ರಬುದ್ಧತೆ ಇರಬೇಕು. ಒಬ್ಬರನ್ನು ಅನುಸರಿಸಿಕೊಂಡು ಹೋಗುವ ಗುಣ ಇರಬೇಕು ಅಷ್ಟೇ.