RSS ಪ್ರಾರ್ಥನಾ ದಿವಸ: ಮನೆಯಿಂದಲೇ ನಮಸ್ತೆ ಸದಾ ವತ್ಸಲೇ ಮಾತೃಭೂಮಿ ಎಂದ ಸಿಎಂ
ರಾಷ್ಟ್ರೀಯ ಸ್ವಯಂಸೇವಕ ಸಂಘ, ಕರ್ನಾಟಕ ದಕ್ಷಿಣ ಪ್ರಾಂತ ಪ್ರಾರ್ಥನಾ ದಿನ ಈ ಹಿನ್ನೆಲೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪ್ರಾರ್ಥನೆ ಮಾಡಿದರು. ಕೊರೋನಾ ಲಾಕ್ಡೌನ್ ಇರುವುದರಿಂದ ಸಿಎಂ ಕಾವೇರಿ ನಿವಾಸದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೇ ಆರ್ ಎಸ್ ಎಸ್ ನ ಪ್ರಾರ್ಥನಾ ಗೀತೆ ನಮಸ್ತೆ ಸದಾ ವತ್ಸಲೇ ಮಾತೃಭೂಮಿ ಹಾಡಿದರು.
ಭಾನುವಾರ ಆರ್ಎಸ್ಎಸ್ನ ಪ್ರಾರ್ಥನಾ ದಿವಸ ಹಿನ್ನೆಯಲೆಯಲ್ಲಿ ಸಿಎಂ ಬಿಎಸ್ವೈ ಮನೆಯಲ್ಲೇ ಪ್ರಾರ್ಥನೆ ಮಾಡಿದರು.
ಬೆಂಗಳೂರಿನ ಗೃಹ ಕಚೇರಿ ಕಾವೇರಿ ನಿವಾಸದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಇಂದು ಆರ್ಎಸ್ಎಸ್ನ ಪ್ರಾರ್ಥನಾ ಸಂದರ್ಭದಲ್ಲಿ ಮನೆಯಿಂದಲೇ ನಮಸ್ತೆ ಸದಾ ವತ್ಸಲೇ ಮಾತೃಭೂಮಿ ಎಂದ ಸಿಎಂ
ಲಾಕ್ಡೌನ್ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ವೈ ತಮ್ಮ ಕಾವೇರಿ ನಿವಾಸದಲ್ಲಿ ಆರ್ ಎಸ್ ಎಸ್ ನ ಪ್ರಾರ್ಥನಾ ಗೀತೆ ನಮಸ್ತೆ ಸದಾ ವತ್ಸಲೇ ಮಾತೃಭೂಮಿ ಹಾಡಿದರು.
ಮತ್ತೊಂದೆಡೆ ಸಿಪಿ ಯೋಗೇಶ್ವರ್ ಸಹ ಮನೆಯಲ್ಲೇ ಕುಟುಂಬಸ್ಥರೊಂದಿಗೆ ಪ್ರಾರ್ಥನೆ ಸಲ್ಲಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಪ್ರಾರ್ಥನಾ ದಿನದ ವಿಶೇಷವಾಗಿ ಬಿಎಸ್ವೈ ಪುತ್ರ ವಿಜಯೇಂದ್ರ ಸಹ ತಮ್ಮ ನಿವಾಸದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ದೇಶದ ಐಕ್ಯತೆಯನ್ನು ತನ್ನ ಗುರಿಯಾಗಿಸಿಕೊಂಡು ಸಾಗುತ್ತಿರುವ ಸಂಘದೊಂದಿಗೆ ಸ್ವಪ್ರೇರಣೆ, ಸ್ವಯಂ ಸ್ಫೂರ್ತಿಯಿಂದ ರಾಷ್ಟ್ರದ, ಸಮಾಜದ ಸೇವೆ ಮಾಡುವ ಸಂಕಲ್ಪ ಮಾಡೋಣ ಎಂದು ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.