ಎಸ್ಟಿ ಸೋಮಶೇಖರ್ ಉಸ್ತುವಾರಿಯಾಗುತ್ತಿದ್ದಂತೆಯೇ ಬೆಳಕು ಕಂಡ ಮೈಸೂರು ನಗರ..!
ಕೊರೋನಾ ವೈರಸ್ ಸಂದಿಗ್ಧ ಪರಿಸ್ಥಿತಿಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿಯನ್ನು ಎಸ್ಟಿ ಸೋಮಶೇಖರ್ ಅವರಿಗೆ ವಹಿಸಲಾಗಿದೆ. ಇದರ ಬೆನ್ನಲ್ಲೇ ಅವರು ಮೈಸೂರು ಮೃಗಾಲಯದ ಪ್ರಾಣಿಗಳ ಹಾರೈಕೆಗೆ ಕೈಜೋಡಿಸಿದ್ದರು. ಇದೀಗ ಇದೇ ಎಸ್ಟಿ ಸೋಮಶೇಖರ್ ಅವರಿಂದ ಮೈಸೂರು ನಗರ ಬೆಳಕು ಕಂಡಿದೆ.
ಸಚಿವ ಎಸ್ಟಿ ಸೋಮಶೇಖರ್ ಅವರು ಉಸ್ತುವಾರಿಯಾಗುತ್ತಿದ್ದಂತೆಯೇ ಮೈಸೂರು ನಗರ ಬೆಳಕು ಕಂಡ..!
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸಭೆ ನಡೆಸಿದ ಬಳಿಕ ಮೈಸೂರು ಹೊರವರ್ತುಲ ರಸ್ತೆ ಬೀದಿ ದೀಪಗಳು ಆನ್ ಆಗಿವೆ
1.5 ಕೋಟಿ ವಿದ್ಯುತ್ ಬಿಲ್ಲನ್ನು ಪಾವತಿಸದೇ ಇರುವುದರಿಂದ ಮೈಸೂರಿನ ಹೊರವರ್ತುಲ ರಸ್ತೆ ವಿದ್ಯುತ್ ಸಂಪರ್ಕವಿಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗಿತ್ತು.
ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ್ ರವರ ಗಮನಕ್ಕೆ ತಂದ ತಕ್ಷಣ ವಿದ್ಯುತ್ ಬಿಲ್ ಪಾವತಿಸಿದ್ದಾರೆ.
ವಿದ್ಯುತ್ ಬಿಲ್ ಪಾವತಿಸಿ ಈಗ ಸುಮಾರು 44 ಕಿ.ಮೀ.ಉದ್ದದ ಮೈಸೂರು ಹೊರವರ್ತುಲ ರಸ್ತೆ ಬೆಳಕು ಕಂಡಿದೆ.
ಮೈಸೂರು ಹೊರವರ್ತುಲ ರಸ್ತೆ ಬೀದಿ ದೀಪಗಳು ಬಾಕಿ ಇರುವ ಸುಮಾರು 1.5 ಕೋಟಿ ವಿದ್ಯುತ್ ಬಿಲ್ಲನ್ನು ಪಾವತಿಸಿದ್ದಾರೆ. ಈ ಮೂಲಕ ಮೈಸೂರು ನಗರದ ಲೈಟ್ಗಳು ಆನ್ ಆಗಿವೆ
ಈ ಹಿಂದೆ ವಸತಿ ಸಚಿವ ವಿ ಸೋಮಣ್ಣ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.