MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • Politics
  • ಅಖಾಡಕ್ಕೆ ಇಳಿದ ಡಿಕೆ ಸುರೇಶ್; ಸದ್ದಿಲ್ಲದೇ ದಳಪತಿಗಳಿಗೆ ಬಿಗ್ ಶಾಕ್ ನೀಡಿದ ಕಾಂಗ್ರೆಸ್

ಅಖಾಡಕ್ಕೆ ಇಳಿದ ಡಿಕೆ ಸುರೇಶ್; ಸದ್ದಿಲ್ಲದೇ ದಳಪತಿಗಳಿಗೆ ಬಿಗ್ ಶಾಕ್ ನೀಡಿದ ಕಾಂಗ್ರೆಸ್

ಮಾಜಿ ಸಂಸದ ಡಿಕೆ ಸುರೇಶ್ ಅಖಾಡಕ್ಕೆ ಇಳಿದಿದ್ದು, ಸದ್ದಿಲ್ಲದೇ ದಳಪತಿಗಳಿಗೆ  ಬಿಗ್ ಶಾಕ್ ನೀಡಿದ್ದಾರೆ. ರಾಜಕೀಯ ಚಟುವಟಿಕೆಗಳಲ್ಲಿ ಡಿಕೆ ಸುರೇಶ್ ಸಕ್ರಿಯರಾಗಿದ್ದಾರೆ.

1 Min read
Kannadaprabha News
Published : Jun 10 2025, 08:59 AM IST
Share this Photo Gallery
  • FB
  • TW
  • Linkdin
  • Whatsapp
16
Image Credit : N Srinivas Mla Nelamangala

ವೃಷಭಾವತಿ ಏತ ನೀರಾವರಿ ಯೋಜನೆಗೆ ವಿರೋಧ ಪಕ್ಷದವರು ವಿರೋಧಿಸುತ್ತಿದ್ದಾರೆ, ಸ್ವಚ್ಛವಲ್ಲದ ನೀರು ಬಂದರೆ ನಾನೆ ಖುದ್ದು ವಾಪಸ್ ಕಳುಹಿಸುತ್ತೇನೆ. ಶುದ್ಧ ಹಾಗೂ ಶಾಶ್ವತ ನೀರಾವರಿ ಯೋಜನೆ ನನ್ನ ಸಂಕಲ್ಪವಾಗಿದೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

26
Image Credit : N Srinivas Mla Nelamangala

ಜೆಡಿಎಸ್ ಮುಖಂಡರು ಹಾಗೂ ಅವರ 50ಕ್ಕೂ ಹೆಚ್ಚು ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಬೇಷರತ್ ಆಗಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಜೆಡಿಎಸ್ ಮುಖಂಡರನ್ನು ಕಡೆಗಣಿಸುವುದಿಲ್ಲ, ಅವರಿಗೆ ಸೂಕ್ತ ಸ್ಥಾನಮಾನಗಳನ್ನು ಕೊಟ್ಟು ಘನತೆ ಹೆಚ್ಚುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ಜೆಡಿಎಸ್ ಮುಖಂಡರನ್ನು ಸೆಳೆಯುವ ಮೂಲಕ ದಳಪತಿಗಳಿಗೆ ಕಾಂಗ್ರೆಸ್ ನಾಯಕರು ಶಾಕ್ ನೀಡಿದ್ದಾರೆ.

Related Articles

Related image1
BJP-Congress Rivalry in Karnataka: ಪ್ರಿಯಾಂಕ್ ಖರ್ಗೆ, ಡಿಸಿಗೆ ಅವಮಾನ; ಛಲವಾದಿ, ರವಿಕುಮಾರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ!
Related image2
Congress Poster War: ಗದಗ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಪೋಸ್ಟರ್ ವಾರ್! ಸಿದ್ದರಾಮಯ್ಯ, ಡಿಕೆಶಿಗೆ ಎಚ್ಚರಿಕೆ!
36
Image Credit : N Srinivas Mla Nelamangala

ಹಾಲಿ ಕಾಂಗ್ರೆಸ್ ಕಾರ್ಯಕರ್ತರು ಸೇರ್ಪಡೆಗೊಂಡವರೊಂದಿಗೆ ವೈಮನಸ್ಸು ಮರೆತು ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಬೇಕು. ಚುನಾವಣೆ ಸಮಯವಲ್ಲದಿದ್ದರೂ ಪಕ್ಷವನ್ನು ಸಧೃಡಗೊಳಿಸಲು ಸೇರ್ಪಡೆಯಾಗಿದ್ದಾರೆ, ಅಭಿವೃದ್ಧಿ ವಿಷಯವಾಗಿ ಕಾಲಲ್ಲಿ ಹೇಳಿದ್ದನ್ನು ಕೈಯಲ್ಲಿ ಮಾಡುತ್ತೇನೆ ಶಾಸಕ ಎನ್‌ ಶ್ರೀನಿವಾಸ್ ಎಂದರು.

46
Image Credit : N Srinivas Mla Nelamangala

ನೂತನ ತಾಲೂಕು ಕಚೇರಿ ಪ್ರಜಾಸೌಧ ಹಾಗೂ ಒಳಚರಂಡಿ ಯೋಜನೆ ಅನುಮೋದನೆ ಹಂತದಲ್ಲಿದೆ, ನೆಲಮಂಗಲಕ್ಕೆ .015 ಟಿಎಂಸಿ ಕಾವೇರಿ ನೀರು ಕೊಡುವುದಾಗಿ ಉಪಮುಖ್ಯಮಂತ್ರಿ ತಿಳಿಸಿದ್ದರು, ಇದು ಸಾಕಾಗುವುದಿಲ್ಲ ಇನ್ನೂ ಹೆಚ್ಚಿನ ನೀರು ಅವಶ್ಯಕತೆ ಇದೆ ಎಂದು ಹೇಳಿದ್ದೇನೆ ಎಂದರು.

56
Image Credit : N Srinivas Mla Nelamangala

ಟಿ.ಬೇಗೂರು ಪಂಚಾಯಿತಿ ಸದಸ್ಯ ಬಿ.ಕೆ.ಮುನಿರಾಜು, ಗ್ರಾ.ಪಂ.ಸದಸ್ಯ ಬಿ.ಕೆ.ಶ್ರೀನಿವಾಸ್, ವಜ್ರಘಟ್ಟೆಪಾಳ್ಯ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮುನಿರಾಮು, ಮುಖಂಡ ಸುರೇಶ್, ಮಣ್ಣೆ ಎನ್.ಸೀತಾರಾಮಯ್ಯ, ದೊಡ್ಡಬೆಲೆ ಗಂಗಣ್ಣ, ಲಕ್ಕೇನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಂಜುನಾಥ್, ಗ್ರಾ.ಪಂ.ಸದಸ್ಯರಾದ ದೊಡ್ಡಬೆಲೆ ಗಂಗಣ್ಣ, ಕುಲುವನಹಳ್ಳಿ ಕನ್ನಿಕ, ಟಿ.ಬೇಗೂರು ಯಶೋಧಮ್ಮ ತಿಮ್ಮರಾಜು, ಲತಾ ಹನುಮಂತರಾಜು, ರಾಧಾ ಸಿದ್ದರಾಜು, ಕಲಾವತಿ ಮುನಿರಾಜು ವಸಂತಕುಮಾರ್, ಜಗದೀಶ್ ಚೌಡಯ್ಯ ಇನ್ನು ಅನೇಕರು ಬೆಂಬಲಿಗರೊಂದಿಗೆ ಸೇರ್ಪಡೆಗೊಂಡರು

66
Image Credit : N Srinivas Mla Nelamangala

ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾರಾಯಣಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ತಾಲೂಕು ಅಧ್ಯಕ್ಷ ವಜ್ರಘಟ್ಟ ನಾಗರಾಜು, ಮುಖಂಡ ಎಂ.ಕೆ.ನಾಗರಾಜು ಇದ್ದರು. ಶಾಸಕ ಎನ್.ಶ್ರೀನಿವಾಸ್ ಅವರು ಜೆಡಿಎಸ್ ಮುಖಂಡರಾದ ಸುರೇಶ್, ವಜ್ರಘಟ್ಟ ಮುನಿರಾಮು, ಬಿ.ಕೆ.ಶ್ರೀನಿವಾಸ್, ಬಿ.ಕೆ.ಮುನಿರಾಜು, ಕನ್ನಿಕಾ ಇತರರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಕಾಂಗ್ರೆಸ್
ಜನತಾದಳ (ಜಾತ್ಯತೀತ)
ಕರ್ನಾಟಕ ಸುದ್ದಿ
ರಾಜಕೀಯ ಸುದ್ದಿ
ಕರ್ನಾಟಕ ರಾಜಕೀಯ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved