ನೂತನ MLC ಶಾಂತಾರಾಮ್ ಸಿದ್ದಿ ಮನೆಗೆ ಬಿಜೆಪಿ ನಾಯಕರ ದಂಡು: ಅದೃಷ್ಟ ಹೀಗಿರ್ಬೇಕು..!
ಸ್ಟಾರ್ ಅಂದ್ರೆ ಅದೃಷ್ಟ ಅಂತೀವಲ್ಲಾ ಅದು ಹೇಗೆ ಬರುತ್ತೋ ಗೊತ್ತಾಗಲ್ಲ. ಅದು ಬಂತು ಅಂದ್ರೆ ಅವರನ್ನ ಹಿಡಿಯುವರೇ ಇರಲ್ಲ. ಇದಕ್ಕೆ ಉದಾಹರಣೆ ಶಾಂತಾರಾಮ್ ಸಿದ್ದಿ. ಇವರು ಯಾರು ಎನ್ನುವುದೇ ಬಹಳಷ್ಟು ಜನರಿಗೆ ಗೊತ್ತಿಲ್ಲ. ಇದೀಗ ಸಿದ್ದಿಯವರು ವಿಧಾನಪರಿಷತ್ಗೆ ನಾಮನಿರ್ದೇಶನಗೊಂಡಿದ್ದಾರೆ. ಅಲ್ಲದೇ ಎಮ್ಎಲ್ಸಿ ಮಾಡಿದ್ದಲ್ಲೇ ಅವರನ್ನೇ ಬಿಜೆಪಿ ನಾಯಕರು ಹುಡುಕಿಕೊಂಡು ಹೋಗಿ ಅಭಿನಂದನೆಗಳನ್ನ ತಿಳಿಸುತ್ತಿದ್ದಾರೆ. ಅಧಿಕಾರ ಬೇಕೆಂದು ನಾಯಕರ ಮನೆ ಕಾಯುವ ಈಗಿನ ಕಾಲದಲ್ಲಿ ಸಿದ್ದಿಯವರ ಸುದ್ದಿ ಅಪರೂಪ.

<p>ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ಶಾಂತಾರಾಮ್ ಸಿದ್ದಿ ಅವರ ಯಲ್ಲಾಪುರ ಬಳಿಯ ಹಿತ್ಲಳ್ಳಿಯ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲ್ ಭೇಟಿ ನೀಡಿ, ಅಭಿನಂದಿಸಿದ್ರು.</p>
ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ಶಾಂತಾರಾಮ್ ಸಿದ್ದಿ ಅವರ ಯಲ್ಲಾಪುರ ಬಳಿಯ ಹಿತ್ಲಳ್ಳಿಯ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲ್ ಭೇಟಿ ನೀಡಿ, ಅಭಿನಂದಿಸಿದ್ರು.
<p>ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಟೆಂಗಿನಕಾಯಿ ಮತ್ತು ಪಕ್ಷದ ಇತರ ಪದಾಧಿಕಾರಿಗಳು ಸಿದ್ದಿಯವರ ಮನೆಗೆ ಭೇಟಿ ನೀಡಿ ಸನ್ಮಾನಿಸಿದರು</p>
ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಟೆಂಗಿನಕಾಯಿ ಮತ್ತು ಪಕ್ಷದ ಇತರ ಪದಾಧಿಕಾರಿಗಳು ಸಿದ್ದಿಯವರ ಮನೆಗೆ ಭೇಟಿ ನೀಡಿ ಸನ್ಮಾನಿಸಿದರು
<p>ಮನೆಗೆ ಬಂದ ಅತಿಥಿಗಳಿಗೆ ಸಿದ್ದಿ ಕುಟುಂಬ ಆರತಿ ಬೆಳಗಿ ಗೌರವಿಸಿರುವುದು ವಿಶೇಷ</p>
ಮನೆಗೆ ಬಂದ ಅತಿಥಿಗಳಿಗೆ ಸಿದ್ದಿ ಕುಟುಂಬ ಆರತಿ ಬೆಳಗಿ ಗೌರವಿಸಿರುವುದು ವಿಶೇಷ
<p>ಸಿದ್ದಿ ಸಮುದಾಯದಲ್ಲಿ ಅಕ್ಷರ ಎನ್ನುವ ಅರಿವಿರದ ಆ ಸಮಯದಲ್ಲಿಯೇ ಇಡೀ ಸಿದ್ದಿ ಜನಾಂಗದಲ್ಲಿ ಏಳನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಕೇಂದ್ರಕ್ಕೆ ಪ್ರಥಮ ಸ್ಥಾನ ಗಳಿಸಿದ ಕೀರ್ತಿ ಇವರದ್ದು.</p>
ಸಿದ್ದಿ ಸಮುದಾಯದಲ್ಲಿ ಅಕ್ಷರ ಎನ್ನುವ ಅರಿವಿರದ ಆ ಸಮಯದಲ್ಲಿಯೇ ಇಡೀ ಸಿದ್ದಿ ಜನಾಂಗದಲ್ಲಿ ಏಳನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಕೇಂದ್ರಕ್ಕೆ ಪ್ರಥಮ ಸ್ಥಾನ ಗಳಿಸಿದ ಕೀರ್ತಿ ಇವರದ್ದು.
<p>ಕಾಲೇಜು ಶಿಕ್ಷಣಕ್ಕಾಗಿ ಕಾರವಾರದಲ್ಲಿ ಕೂಲಿ ಕೆಲಸ ಮಾಡಿ ಕಾಲೇಜು ಶಿಕ್ಷಣ ಪೂರೈಸಿದ ಸಿದ್ದ ಜನಾಂಗದ ಮೊದಲ ಪದವಿದರ ಕೂಡ ಇವರಾಗಿದ್ದಾರೆ.</p>
ಕಾಲೇಜು ಶಿಕ್ಷಣಕ್ಕಾಗಿ ಕಾರವಾರದಲ್ಲಿ ಕೂಲಿ ಕೆಲಸ ಮಾಡಿ ಕಾಲೇಜು ಶಿಕ್ಷಣ ಪೂರೈಸಿದ ಸಿದ್ದ ಜನಾಂಗದ ಮೊದಲ ಪದವಿದರ ಕೂಡ ಇವರಾಗಿದ್ದಾರೆ.
<p>ನೂತನ ವಿಧಾನ ಪರಿಷತ್ ಸದಸ್ಯ ಯಲ್ಲಾಪುರದ ಹಿತ್ಲಳ್ಳಿಯ ಶಾಂತಾರಾಮ ಸಿದ್ಧಿ ಮನೆಗೆ ಸಚಿವ ಕೋಟಾ ಪೂಜಾರಿ ಭೇಟಿ ನೀಡಿದ್ದರು.</p>
ನೂತನ ವಿಧಾನ ಪರಿಷತ್ ಸದಸ್ಯ ಯಲ್ಲಾಪುರದ ಹಿತ್ಲಳ್ಳಿಯ ಶಾಂತಾರಾಮ ಸಿದ್ಧಿ ಮನೆಗೆ ಸಚಿವ ಕೋಟಾ ಪೂಜಾರಿ ಭೇಟಿ ನೀಡಿದ್ದರು.
<p>ಇಂದು ಯಲ್ಲಾಪುರದ ರೈತ ಸಭಾಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಭಾಗಿಯಾಗಿ ನೂತನವಾಗಿ ರಾಜ್ಯ ವಿಧಾನಪರಿಷತಗೆ ನಾಮನಿರ್ದೇಶನಗೊಂಡ ಶ್ರೀ ಶಾಂತಾರಾಮ ಸಿದ್ದಿ ಅವರನ್ನು ಸಚಿವ ಶಿವರಾಮ್ ಹೆಬ್ಬಾರ್ ಸನ್ಮಾನಿಸಿದರು</p>
ಇಂದು ಯಲ್ಲಾಪುರದ ರೈತ ಸಭಾಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಭಾಗಿಯಾಗಿ ನೂತನವಾಗಿ ರಾಜ್ಯ ವಿಧಾನಪರಿಷತಗೆ ನಾಮನಿರ್ದೇಶನಗೊಂಡ ಶ್ರೀ ಶಾಂತಾರಾಮ ಸಿದ್ದಿ ಅವರನ್ನು ಸಚಿವ ಶಿವರಾಮ್ ಹೆಬ್ಬಾರ್ ಸನ್ಮಾನಿಸಿದರು