ಕಾಂಗ್ರೆಸ್ನಲ್ಲಿ ಕ್ಷಿಪ್ರ ಬೆಳವಣಿಗೆ, ಕರ್ನಾಟಕ ಸೇನಾನಿಗಳಿಗೆ ಹೊಸ ಜವಾಬ್ದಾರಿ ಕೊಟ್ಟ AICC
ಬೆಂಗಳೂರು(ಜು. 23) ಕರ್ನಾಟಕ ಪ್ರದೇಶ ಕಾಂಗ್ರೆಸ್ ವಿವಿಧ ವಿಭಾಗಳಿಗೆ ಎಐಸಿಸಿ ಅಧ್ಯಕ್ಷರ ನೇಮಕ ಮಾಡಿದೆ. ಆಡಳಿತ ಪಕ್ಷ ಬಿಜೆಪಿ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಮುಗಿಬಿದ್ದಿರುವ ಸಂದರ್ಭದಲ್ಲಿಯೇ ಕಾಂಗ್ರೆಸ್ ಹೊಸ ಜವಾಬ್ದಾರಿಗಳನ್ನು ಹಂಚಿದೆ.
ಕಾನೂನು ಸುಧಾರಣಾ ವಿಭಾಗವನ್ನು ಹಿರಿಯ ರಾಜಕಾರಣಿ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅಧ್ಯಕ್ಷರಾಗಿದ್ದಾರೆ.
ಮಾಧ್ಯಮ ವಿಭಾಗದ ಚೇರಮನ್ ನಾಗಿ ಬಿ.ಎಲ್.ಶಂಕರ್ ಜವಾಬ್ದಾರಿ ನಿರ್ವಹಿಸಲಿದ್ದಾರೆ
ಮಾಧ್ಯಮ ವಿಭಾಗದ ಉಪ ಚೇರ್ಮನ್ ಆಗಿ ವಿ.ಆರ್. ಸುದರ್ಶನ್ ಕೆಲಸ ಮಾಡಲಿದ್ದಾರೆ.
ಐಟಿ ಮತ್ತು ಡಾಟಾ ಸೆಲ್ ನ್ನು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಮುನ್ನಡೆಸಲಿದ್ದಾರೆ.
ಕಾಂಗ್ರೆಸ್ ಪಕ್ಷದ ಆಸ್ತಿಗಳು ರಾಜ್ಯ ವಿಭಾಗವನ್ನು ಮಾಜಿ ಸಚಿವ ಕೆ.ಜೆ.ಜಾಜ್೯ ಮುನ್ನಡೆಸಲಿದ್ದಾರೆ.
ಕಾಂಗ್ರೆಸ್ ಪಕ್ಷದ ಆಸ್ತಿಗಳು ಬೆಂಗಳೂರು ವಿಭಾಗದ ಜವಾಬ್ದಾರಿ ರಾಮಲಿಂಗಾರೆಡ್ಡಿ ಅವರ ಹೆಗಲೇರಿದೆ
ಮಾನವಹಕ್ಕುಗಳು ಮತ್ತು ಆರ್ ಟಿಐ ವಿಭಾಗ ಪೊನ್ನಣ್ಣ ಅಧ್ಯಕ್ಷರಾಗಿ ನೇಮಕರಾಗಿದ್ದಾರೆ.