MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • ವನ್ಯಜೀವಿ ಆಂಬುಲೆನ್ಸ್ ಆರಂಭಿಸಿದ ನಟಿ Samyukta Hornad: ಚಾಲನೆ ನೀಡಿದ Anil Kumble

ವನ್ಯಜೀವಿ ಆಂಬುಲೆನ್ಸ್ ಆರಂಭಿಸಿದ ನಟಿ Samyukta Hornad: ಚಾಲನೆ ನೀಡಿದ Anil Kumble

ನಟಿ ಸಂಯುಕ್ತ ಹೊರನಾಡ್ ಅವರು ಸ್ಥಾಪಿಸಿರುವ ಪ್ರಾಣ ಅನಿಮಲ್ ಫೌಂಡೇಶನ್ ಇದೀಗ ಬೆಂಗಳೂರಿನಲ್ಲಿ ವನ್ಯಜೀವಿ ಆಂಬುಲೆನ್ಸ್ ಶುರುಮಾಡಿದ್ದು, ಅದಕ್ಕೆ ಇತ್ತೀಚೆಗೆ ಮಾಜಿ ಕ್ರಿಕೆಟರ್ ಹಾಗೂ ವನ್ಯಜೀವಿ ರಾಯಭಾರಿ ಅನಿಲ್ ಕುಂಬ್ಳೆ ಚಾಲನೆ ನೀಡಿದ್ದಾರೆ. 

1 Min read
Author : Pavna Das
Published : Dec 31 2025, 04:36 PM IST
Share this Photo Gallery
  • FB
  • TW
  • Linkdin
  • Whatsapp
17
ವನ್ಯಜೀವಿಗಳ ತುರ್ತು ರಕ್ಷಣೆ
Image Credit : Instagram

ವನ್ಯಜೀವಿಗಳ ತುರ್ತು ರಕ್ಷಣೆ

ನಗರದಲ್ಲಿ ವನ್ಯಜೀವಿಗಳಿಗೆ ಸಮಸ್ಯೆ ಉಂಟಾದಾಗ, ತುರ್ತು ರಕ್ಷಣೆಗಾಗಿ ತುರ್ತು ಸ್ಪಂದನೆ ನೀಡಲು ಎಐ ಆಟೋಮೋಟೀವ್ ಪ್ಲಾಟ್ ಫಾರ್ಮ್ ಸಂಸ್ಥೆ ಟೇಕಿಯಾನ್ ಮತ್ತು ಪ್ರಾಣ ಆನಿಮಲ್ ಫೌಂಡೇಶನ್ ಜಂಟಿಯಾಗಿ ವನ್ಯಜೀವಿ ಆಂಬುಲೆನ್ಸ್ ಗೆ ಚಾಲನೆ ನೀಡಿದೆ.

27
ಸಂಯುಕ್ತ ಹೊರನಾಡು
Image Credit : Instagram

ಸಂಯುಕ್ತ ಹೊರನಾಡು

ನಟಿ ಸಂಯುಕ್ತ ಹೊರನಾಡು ಪ್ರಾಣಿಪ್ರಿಯೆಯಾಗಿದ್ದು, ಇವರು ಹಲವು ವರ್ಷಗಳಿಂದ ಪ್ರಾಣಿಗಳಿಗಾಗಿ ಪ್ರಾಣ ಅನಿಮಲ್ ಫೌಂಡೇಶನ್ ನಡೆಸುತ್ತಿದ್ದಾರೆ. ಇದೀಗ ವನ್ಯಪ್ರಾಣಿಗಳ ಸಮಸ್ಯೆಗೆ ಸ್ಪಂದಿಸಲು ಆಂಬುಲೆನ್ಸ್ ಸೇವೆಯನ್ನು ಶುರು ಮಾಡಿದ್ದಾರೆ.

Related Articles

Related image1
Windmills vs Wildlife: ಕೂಡ್ಲಿಗಿಯಲ್ಲಿ ವಿಂಡ್ ಫ್ಯಾನ್‌ಗಳಿಂದ ಕರಡಿಧಾಮಕ್ಕೆ ಪ್ರಾಣಸಂಕಟ
Related image2
Now Playing
ಭದ್ರಾ ನದಿಯ ತಟದಲ್ಲಿ 15 ಕ್ಕೂ ಹೆಚ್ಚು ಕಾಡಾನೆಗಳ ಹಿಂಡು! Chikkamagaluru wildlife | Suvarna News
37
ವನ್ಯಜೀವಿ ಅಂಬುಲೆನ್ಸ್ ಗೆ ಅನಿಲ್ ಕುಂಬ್ಳೆ ಚಾಲನೆ
Image Credit : Instagram

ವನ್ಯಜೀವಿ ಅಂಬುಲೆನ್ಸ್ ಗೆ ಅನಿಲ್ ಕುಂಬ್ಳೆ ಚಾಲನೆ

ಇತ್ತೀಚೆಗೆ ವನ್ಯಜೀವಿ ರಾಯಭಾರಿ ಹಾಗೂ ಮಾಜಿ ಕ್ರಿಕೆಟರ್ ಆಗಿರುವ ಅನಿಲ್ ಕುಂಬ್ಳೆಯವರು ವನ್ಯಜೀವಿ ಅಂಬುಲೆನ್ಸ್ ಗೆ ಚಾಲನೆ ನೀಡಿದ್ದರು. ಈ ಫೋಟೊಗಳನ್ನು ಸಂಯುಕ್ತಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

47
ಮಾನವ ಮತ್ತು ವನ್ಯಜೀವಿಗಳ ಸಂಘರ್ಷ
Image Credit : Instagram

ಮಾನವ ಮತ್ತು ವನ್ಯಜೀವಿಗಳ ಸಂಘರ್ಷ

ಇತ್ತೀಚಿನ ದಿನಗಳಲ್ಲಿ ನಗರಗಳಲ್ಲೂ ಸಹ ಮಾನವ ಮತ್ತು ವನ್ಯಜೀವಿಗಳ ನಡುವೆ ಸಂಘರ್ಷ ನಡೆಯುತ್ತಿದ್ದೆ. ಪ್ರಾಣಿಗಳು ಗಾಯಗೊಂಡ ಸಂದರ್ಭದಲ್ಲಿ ಅವುಗಳಿಗೆ ತುರ್ತು ನೆರವಿನ ಅವಶ್ಯಕತೆ ಇರುವುದರಿಂದ ವನ್ಯಜೀವಿ ಆಂಬುಲೆನ್ಸ್ ಶುರುಮಾಡಲಾಗಿದೆ ಎಂದಿದ್ದಾರೆ ಸಂಯುಕ್ತಾ.

57
 ತರಬೇತಿ ಪಡೆದ ಪಶುವೈದ್ಯ
Image Credit : Instagram

ತರಬೇತಿ ಪಡೆದ ಪಶುವೈದ್ಯ

ವಲಸೆ ಹಕ್ಕಿಗಳು ಇರಬಹುದು, ಹಾವು ಮೊದಲಾದ ಸರೀಸೃಪಗಳು, ಮಂಗ ಇನ್ನಿತರ ಸಣ್ಣ ಪುಟ್ಟ, ದೊಡ್ಡ ಪ್ರಾಣಿಗಳನ್ನು ಸಾಗಿಸಲು ಅನುಕೂಲವಾಗುವಂತೆ ಆಂಬುಲೆನ್ಸ್ ನಿರ್ಮಾಣ ಮಾಡಲಾಗಿದ್ದು, ಅದರಲ್ಲೇ ತರಬೇತಿ ಪಡೆದ ಪಶುವೈದ್ಯರೂ ಇರುತ್ತಾರೆ ಎನ್ನುವುದನ್ನು ಸಂಯುಕ್ತಾ ತಿಳಿಸಿದ್ದಾರೆ.

67
ವೃತ್ತಿಪರ ಚಿಕಿತ್ಸೆ ಹಾಗು ಪುರ್ನರ್ವಸತಿ
Image Credit : Instagram

ವೃತ್ತಿಪರ ಚಿಕಿತ್ಸೆ ಹಾಗು ಪುರ್ನರ್ವಸತಿ

ಇದಲ್ಲದೇ ಈ ಸೇವೆಯ ಮೂಲಕ ರಕ್ಷಿಸಲಾದ ಪ್ರಾಣಿ-ಪಕ್ಷಿಗಳನ್ನು ವೃತ್ತಿಪರ ಚಿಕಿತ್ಸೆ ಹಾಗು ಪುರ್ನರ್ವಸತಿಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನ ಅಥವಾ ಬರ್ಡ್ಸ್ ಆಫ್ ಪ್ಯಾರಡೈಸ್ ಪುನರ್ವಸತಿ ಕೇಂದ್ರಕ್ಕೆ ವರ್ಗಾಯಿಸಲಾಗುವುದು.

77
ಪ್ರಾಣ ಆನಿಮಲ್ ಫೌಂಡೇಶನ್
Image Credit : Instagram

ಪ್ರಾಣ ಆನಿಮಲ್ ಫೌಂಡೇಶನ್

ನಟಿ ಸಂಯುಕ್ತಾ ಹೊರನಾಡು ಇತ್ತೀಚಿನ ದಿನಗಳಲ್ಲಿ ನಟನೆಯಿಂದ ದೂರ ಉಳಿದಿದ್ದಾರೆ. ಇವರು ಕೊನೆಯದಾಗಿ ಟೋಬಿ ಸಿನಿಮಾದಲ್ಲಿ ನಟಿಸಿದ್ದರು. ಸದ್ಯ ತಮ್ಮ ಪ್ರಾಣ ಆನಿಮಲ್ ಫೌಂಡೇಶನ್ ಮೂಲಕ ಪ್ರಾಣಿಗಳ ಸೇವೆ ಮಾಡುತ್ತಿದ್ದಾರೆ ನಟಿ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ವನ್ಯಜೀವಿ
ನಟಿ
ಸ್ಯಾಂಡಲ್‌ವುಡ್

Latest Videos
Recommended Stories
Recommended image1
Hungund voter list scam: 'ಕೋತಿಗೆ ಹೆಂಡ ಕುಡಿಸಿದಂತಾಗಿದೆ..' ಕಾಶಪ್ಪನವರ್ ವಿರುದ್ಧ ಮಾಜಿ ಶಾಸಕ ವಾಗ್ದಾಳಿ!
Recommended image2
ಮದುವೆ, 25 ವರ್ಷಗಳ ಕಾಯುವಿಕೆ, ಪೊಲೀಸ್ ಪೇದೆಯ ಹಣೆಬರಹ ಬದಲಿಸಿದ ನಾಯಿ
Recommended image3
S-350 Vityaz: ರಷ್ಯಾದಿಂದ ಭಾರತಕ್ಕೆ ಹೊಸ ಅಸ್ತ್ರ: ಗಡಿಯಲ್ಲಿ ಚೀನಾ, ಪಾಕ್‌ಗೆ ನಡುಕ!
Related Stories
Recommended image1
Windmills vs Wildlife: ಕೂಡ್ಲಿಗಿಯಲ್ಲಿ ವಿಂಡ್ ಫ್ಯಾನ್‌ಗಳಿಂದ ಕರಡಿಧಾಮಕ್ಕೆ ಪ್ರಾಣಸಂಕಟ
Recommended image2
Now Playing
ಭದ್ರಾ ನದಿಯ ತಟದಲ್ಲಿ 15 ಕ್ಕೂ ಹೆಚ್ಚು ಕಾಡಾನೆಗಳ ಹಿಂಡು! Chikkamagaluru wildlife | Suvarna News
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved